ವಾಯು ಮಾಲಿನ್ಯ ಹೊಗಲಾಡಿಸಲು ಹೋಮ ಮಾಡಿ ಎಂದ ಬಿಜೆಪಿ ಮುಖಂಡ
ಲಕ್ನೋ. ನವೆಂಬರ್ 04: ಉತ್ತರಪ್ರದೇಶದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಖಂಡ ಸುನಿಲ್ ಭರಲಾ ಅವರು ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕೃಷಿ ತ್ಯಾಜ್ಯ ಸುಡುವುದರಿಂದ ಹೊಗೆ, ಮಾಲಿನ್ಯ ಉಂಟಾಗುತ್ತದೆ ಎಂದು ಪರ ರಾಜ್ಯಗಳು ದೂಷಿಸುವುದು ಸರಿಯಲ್ಲ ಇದರ ಬದಲು ನಾವು ಮಳೆ ದೇವರನ್ನು ಪೂಜಿಸಿ ಒಲಿಸಿಕೊಳ್ಳಬೇಕು ಎಂದಿದ್ದಾರೆ.
ದೆಹಲಿ; ಜಾರಿಗೆ ಬಂತು ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಮಳೆ ದೇವತೆ ಇಂದ್ರನನ್ನು ಪೂಜಿಸಿದರೆ ದೆಹಲಿ ಸೇರಿದಂತೆ ಅತಿಯಾದ ಮಾಲಿನ್ಯದಿಂದ ಬಳಲುತ್ತಿರುವ ರಾಜ್ಯಗಳಲ್ಲಿ ಏನಾದರೂ ಒಳ್ಳೆ ಗಾಳಿ ಬೀಸಲು ಸಾಧ್ಯ ಎಂದಿದ್ದಾರೆ.
ರೈತರು ಕಬ್ಬು ಬೆಳೆಯುವುದೇ ಕಷ್ಟಕರವಾಗಿದೆ. ತ್ಯಾಜ್ಯಗಳನ್ನು ಅದಷ್ಟು ಒಳ್ಳೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ತ್ಯಾಜ್ಯವನ್ನು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂಬುದರದಲ್ಲಿ ಅರ್ಥವಿಲ್ಲ ಎಂದು ಶ್ರಮಿಕ ಕಲ್ಯಾಣ ಮಂಡಳಿ ಮುಖ್ಯಸ್ಥರಾಗಿರುವ ಭರಾಲಾ ಹೇಳಿದ್ದಾರೆ.
#WATCH Uttar Pradesh minister Sunil Bharala: Farmers have always practiced stubble burning, it's a natural system. Repeated criticism of it is unfortunate. Govts should hold 'Yagya' to please Lord Indra (God of rain), as done traditionally. He (Lord Indra) will set things right. pic.twitter.com/EcImGAbVrl
— ANI UP (@ANINewsUP) November 3, 2019
ದೆಹಲಿಯನ್ನು ಆವರಿಸಿದ ವಿಷಕಾರಿ 'ಹೊಂಜು'; ಶಾಲೆಗಳಿಗೆ ರಜಾ ಘೋಷಣೆ
ಲಕ್ನೋದ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 400 ಅಂಕ ದಾಟಿದ್ದು, ಅಪಾಯದ ಮಟ್ಟ ಮೀರುತ್ತಿದೆ. ರೈತರು ಕಳೆ ಕಿತ್ತು ಬೆಂಕಿಗೆ ಹಾಕುವುದು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಪಂಜಾಬಿನಲ್ಲಿ ಸುಮಾರು 22,000 ಪ್ರಕರಣ ಪಂಜಾಬ್ ರಾಜ್ಯದಲ್ಲೇ ದಾಖಲಾಗಿದೆ. ಮಿಕ್ಕಂತೆ ಹರ್ಯಾಣದಲ್ಲಿ 4,200 ಕಳೆಗೆ ಬೆಂಕಿ ಹಾಕಿದ ಪ್ರಕರಣ ದಾಖಲಿದ್ದು, ದೆಹಲಿಗೆ ಇದರಿಂದ ಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ ಎಂಬ ವಾದವಿದೆ.