ಮತದಾನಕ್ಕೂ ಮುನ್ನ ಶಾಯಿ ಬಳಿದರೇ ಬಿಜೆಪಿ ಮುಖಂಡರು?
ಲಕ್ನೋ, ಮೇ 19: ಉತ್ತರಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಮತದಾರರ ಕೈಗೆ ಶಾಯಿ ಹಾಕಿದ್ದಾರೆ ಎಂಬ ಆರೋಪ ಎದುರಾಗಿದ್ದು, ಪ್ರತಿಪಕ್ಷಗಳಿಗೆ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ಮೇರೆಗೆ ಈ ಹಳ್ಳಿಯ ಮತದಾರರ ಕೈಗೆ ಮತದಾನಕ್ಕೂ ಮೊದಲೇ ಶಾಯಿ ಹಚ್ಚಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರತಿಪಕ್ಷಗಳಿಗೆ ಮತ ಹೋಗಲಿದೆ ಎಂಬ ಭಯದ ಮೇಲೆ ಬಿಜೆಪಿ ನಾಯಕರು ಮತದಾರರ ಬೆರಳಿಗೆ ಶಾಯಿ ಅಂಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಲೋಕಸಭೆ ಚುನಾವಣೆ LIVE: ಬೆಳಗ್ಗೆ 9 ಗಂಟೆಯವರೆಗೆ ಎಲ್ಲೆಲ್ಲಿ ಎಷ್ಟು ಮತದಾನ
ಈ ಹಿಂದೆ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಬಿಜೆಪಿಯೇತರ ಮತದಾರರು ಮತಗಟ್ಟೆಗೆ ಬರದಂತೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
Chandauli: Residents of Tara Jivanpur village allege ink was forcefully applied to their fingers & they were given Rs 500 y'day by 3 men of their village. Say, "They were from BJP&asked us if we'll vote for the party. They told us now you can't vote. Don't tell anyone." (18.05) pic.twitter.com/yICJKNPwdt
— ANI UP (@ANINewsUP) May 19, 2019
ಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿ
ಮತದಾರರು ಶಾಯಿ ಅಂಟಿಸಿದ್ದನ್ನು ಇಟ್ಟುಕೊಂಡು ಮತ್ತೆ ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಬಿಜೆಪಿ ನಾಯಕರು ಮೊದಲೇ ಬಂದು ಬೆರಳಿಗೆ ಶಾಯಿ ಹಾಕಿ ಹೋಗಿದ್ದಾರೆ. ಹಾಗೆ ಪ್ರತಿಯೊಬ್ಬರಿಗೆ 500ರೂ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.