ಮೋದಿ ಪರ ಪ್ರಚಾರ, ಸಿಟಿ ರವಿ 'ವಾರಣಾಸಿ ಡೈರೀಸ್' ಪುಟಗಳು
ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿ, ಹಾಲಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಮೋದಿ ಅವರ ಪರ ಕರ್ನಾಟಕದ ಮಾಜಿ ಸಚಿವ, ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ ರವಿ ಅವರು ವಾರಣಾಸಿಯಲ್ಲಿ ಮತಯಾಚಿಸುತ್ತಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಕಾರ್ಯದ ನನ್ನ ಅನುಭವಗಳು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿ ದಿನ ಅಪ್ಡೇಟ್ ಮಾಡುತ್ತಿದ್ದಾರೆ.
ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ
ಕರ್ನಾಟಕ ಮತ್ತು ವಾರಣಾಸಿಯ ಕೊಂಡಿಯಂತಿರುವ ಸುಮಾರು 3000 ವರ್ಷಗಳ ಹಳೆಯ ಪಂಚಪೀಠಗಳಲ್ಲಿ ಒಂದೆನಿಸಿರುವ ಕಾಶಿಯ ಜಂಗಮವಾಡಿ ಮಠಕ್ಕೆ ಭೇಟಿ ನೀಡಿದ್ದಾರೆ. ಕಾಶಿಯ ಆರ್ಯ ವೈಶ್ಯ ಸಮಾಜ ನಡೆಸುವಂತ ಧರ್ಮಛತ್ರದಲ್ಲಿ ಮೋದಿಯವರ ಪರ ಮತಯಾಚಿಸಿದ್ದಾರೆ.
ಪ್ರಚಾರ ಕಾರ್ಯಕ್ಕೂ ಮೊದಲಿಗೆ ಕ್ಷೇತ್ರಪಾಲಕ ಕಾಲಭೈರವನ ದರ್ಶನ ಮಾಡಿ, ಅವರ ಅನುಮತಿ ಪಡೆದು, ಕೇವಲ ವಾರನಾಸಿಯಲ್ಲಿ ಮಾತ್ರ ಅಲ್ಲ, ದೇಶದಲ್ಲೂ ಬಿಜೆಪಿ ಸರ್ಕಾರ ಬರಬೇಕು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಬೇಡಿಕೊಂಡು ದೇಶ ಗೆಲ್ಲಿಸುವ ಈ ಚುನಾವನೆಗೆ ನಿನ್ನ ಆಶೀರ್ವಾದ ಬೇಕು ಅಂತ ಪ್ರಾರ್ಥನೆ ಮಾಡಿ ನಂತರ ಕಾಶಿಯ ವಿಶ್ವನಾಥನ ದರ್ಶನ ಮಾಡಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬದಲಿಗೆ ಐದು ಬಾರಿ ಶಾಸಕ ಅಜಯ್ ರಾಯ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಸೋಲು ಕಂಡಿದ್ದ ಅಜಯ್ ರಾಯ್ ಅವರಿಗೆ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶವನ್ನು ನೀಡಲಾಗಿದೆ.