ಉತ್ತರ ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಟ್ಟ ಯೋಗಿ
ಲಕ್ನೋ, ನ. 25: ಉತ್ತರ ಪ್ರದೇಶದ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಉತ್ತರ ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಡಲು ಬಂದಿರುವ ಪ್ರಸ್ತಾವನೆಗೆ ಸಚಿವ ಸಂಪುಟ ಒಕ್ಕೊರಲಿನಿಂದ ಸಮ್ಮತಿ ನೀಡಿದೆ.
ಆಯೋಧ್ಯ ಜಿಲ್ಲೆಯಲ್ಲಿನ ವಿಮಾನ ನಿಲ್ದಾಣವನ್ನು ಇನ್ಮುಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ.
ಸಚಿವ ಸಂಪುಟದ ನಿರ್ಣಯ ಹಾಗೂ ಸಂಬಂಧಪಟ್ಟ ಕಾನೂನು ತಿದ್ದುಪಡಿ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳಿಸಲಾಗಿದ್ದು, ಕೇಂದ್ರದ ಒಪ್ಪಿಗೆ ಬಂದ ಬಳಿಕ ವಿಮಾನ ನಿಲ್ದಾಣದಲ್ಲಿ ಹೊಸ ಹೆಸರಿನ ನಾಮಫಲಕ ಎದ್ದು ಕಾಣಲಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.
Recommended Video
ಆಗಸ್ಟ್
5ರಂದು
ಆಯೋಧ್ಯದಲ್ಲಿ
ಶ್ರೀರಾಮಮಂದಿರ
ನಿರ್ಮಾಣಕ್ಕಾಗಿ
ಶಂಕುಸ್ಥಾಪನೆ
ಕಾರ್ಯ
ನೆರವೇರಿದ
ಬಳಿಕ
ನಗರದ
ಮೂಲ
ಸೌಕರ್ಯ
ಹಾಗೂ
ಅಭಿವೃದ್ಧಿ
ಕಾರ್ಯಕ್ಕೆ
ಯೋಗಿ
ಆದಿತ್ಯನಾಥ್
ಸರ್ಕಾರ
ಮುಂದಾಗಿದೆ.
ವಿಮಾನ
ನಿಲ್ದಾಣ
ಯೋಜನೆ
ಡಿಸೆಂಬರ್
2021ರೊಳಗೆ
ಪೂರ್ಣಗೊಳ್ಳುವ
ನಿರೀಕ್ಷೆಯಿದೆ.
ಶ್ರೀರಾಮಚಂದ್ರ
ಮಂದಿರ
ಪೂರ್ಣಗೊಂಡ
ಬಳಿಕ
ದೇಶ,
ವಿದೇಶಗಳಿಂದ
ಅಧಿಕ
ಸಂಖ್ಯೆಯಲ್ಲಿ
ಪ್ರವಾಸಿಗರು
ಬರುವ
ನಿರೀಕ್ಷೆಯಿದೆ.
ಇದಕ್ಕೆ
ಈ
ವಿಮಾನ
ನಿಲ್ದಾಣ
ಪೂರಕವಾಗಲಿದೆ
ಎಂದು
ಅಧಿಕಾರಿಯೊಬ್ಬರು
ಹೇಳಿದರು.
ಯೋಗಿ ಆದಿತ್ಯನಾಥ್ ಅವರು ಸ್ಥಳೀಯ ಹಿಂದುಗಳ ಬೇಡಿಕೆಗೆ ತಕ್ಕಂತೆ ಹೆಸರು ಬದಲಾವಣೆ ಮಾಡುವುದನ್ನು ಮುಂದುವರೆಸಿದ್ದಾರೆ. ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿದರು. ಫೈಜಾಬಾದ್ ಜಿಲ್ಲೆಯನ್ನು ಆಯೋಧ್ಯಾ ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.