ಗಣರಾಜ್ಯೋತ್ಸವ: ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ ಪ್ರದರ್ಶನ
ಲಕ್ನೋ, ಡಿಸೆಂಬರ್ 12: ಭಾರತದ ಗಣರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಭರದಿಂದ ಸಾಗಿದೆ.
ಪ್ರತಿ ವರ್ಷವೂ ಹಲವು ರಾಜ್ಯಗಳಿಂದ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.
ಅಯೋಧ್ಯೆ ಮಸೀದಿ ನಿರ್ಮಾಣ ಟ್ರಸ್ಟ್:ಸರ್ಕಾರಿ ಪ್ರತಿನಿಧಿ ನಾಮನಿರ್ದೇಶನಕ್ಕೆ ಸುಪ್ರೀಂ ನಕಾರ
ಅಯೋಧ್ಯೆಯ ಮಂದಿರವಷ್ಟೇ ಅಲ್ಲದೇ ಅಲ್ಲಿನ ಹಾಗೂ ದೇವಾಲಯದ ಸಂಸ್ಕೃತಿ-ಸಂಪ್ರದಾಯಗಳನ್ನೂ ಸ್ತಬ್ಧ ಚಿತ್ರದಲ್ಲಿ ವಿವರಿಸಲಾಗುತ್ತದೆ.ಒಡಿಶಾದ ಟ್ಯಾಬ್ಲೋ ಜೊತೆಗೆ ಉತ್ತರ ಪ್ರದೇಶದ ಟ್ಯಾಬ್ಲೋ ಕಾಣಸಿಗಲಿದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಅಯೋಧ್ಯೆ ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ ಎಂಬ ಥೀಮ್ ನಡಿಯಲ್ಲಿ ಟ್ಯಾಬ್ಲೋ ಪ್ರದರ್ಶನವಾಗಲಿದೆ. ಅಯೋಧ್ಯೆಯ ದೀಪೋತ್ಸವವೂ ಈ ಸ್ತಬ್ಧ ಚಿತ್ರದಲ್ಲಿ ಕಾಣಬಹುದಾಗಿದೆ.
ಗಣಾರಾಜ್ಯೋತ್ಸವದ ಪರೇಡ್ ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ಲಭಿಸಿದೆ.