ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ: 3 ಮುಸ್ಲಿಂ ಫಕೀರರಿಗೆ ಜೈ ಶ್ರೀ ರಾಮ್ ಹೇಳಲು ಒತ್ತಾಯ

|
Google Oneindia Kannada News

ಲಕ್ನೋ ಜೂನ್ 09: ಉತ್ತರ ಪ್ರದೇಶದ ಗೊಂಡಾ ಗ್ರಾಮವೊಂದರಿಂದ ಸ್ಥಳೀಯ ಜನರು ಭಿಕ್ಷೆ ಬೇಡುವವರನ್ನು ನಿಂದಿಸುವ ಮತ್ತು ಥಳಿಸುವ ವಿಡಿಯೋವೊಂದು ಹೊರಬಿದ್ದಿದೆ. ವಿಡಿಯೊದಲ್ಲಿ ಮೂವರು ಮುಸ್ಲಿಂ ಭಿಕ್ಷುಕರಿಗೆ ನಿಂದಿಸಿ ಕಿರುಕುಳ ನೀಡುತ್ತಿರುವುದನ್ನು ಕಾಣಬಹುದು.

ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಹೇಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮೂವರು ಮುಸ್ಲಿಂ ಭಿಕ್ಷುಕರಿಗೆ ಸ್ಥಳೀಯ ನಿವಾಸಿಗಳು ಹೇಳುವುದನ್ನು ಕೇಳಬಹುದು...." ಪಂಡಿತರ ಗ್ರಾಮಕ್ಕೆ ಏಕೆ ಬಂದಿರಿ, ಇಂದಿನ ನಂತರ ಇಲ್ಲಿಗೆ ಬರುವುದಿಲ್ಲ ಎಂದು ಹೇಳಿ..." ಎಂದು ಹೇಳುವುದನ್ನು ಕೇಳಬಹುದು. ಜೊತೆಗೆ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಲು ಗ್ರಾಮಸ್ಥರು ಮೂವರು ಫಕೀರರನ್ನು ಒತ್ತಾಯಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದ: ಯುಪಿ ಬಿಜೆಪಿಯ ಹರ್ಷಿತ್ ಶ್ರೀವಾಸ್ತವ ಕೈಗೆ ಕೋಳಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದ: ಯುಪಿ ಬಿಜೆಪಿಯ ಹರ್ಷಿತ್ ಶ್ರೀವಾಸ್ತವ ಕೈಗೆ ಕೋಳ

ಮುಸ್ಲಿಂ ಧರ್ಮೀಯರಿಗೆ ಬೆದರಿಕೆ ಹಾಕಿದ ಸ್ಥಳೀಯರು

ಮುಸ್ಲಿಂ ಧರ್ಮೀಯರಿಗೆ ಬೆದರಿಕೆ ಹಾಕಿದ ಸ್ಥಳೀಯರು

ಗೊಂಡಾ ಪ್ರದೇಶದ ದೇಗುರ್ ಗ್ರಾಮದಲ್ಲಿ ಚಿತ್ರೀಕರಿಸಲಾದ ಸೆಲ್‌ಫೋನ್ ವಿಡಿಯೊದಲ್ಲಿ, ಮೂವರು ಮುಸ್ಲಿಂ ಧರ್ಮೀಯರನ್ನು ಕೆಲವು ಸ್ಥಳೀಯ ನಿವಾಸಿಗಳು ಸುತ್ತುವರೆದು ಬೆದರಿಕೆ ಹಾಕಿದ್ದಾರೆ. ಧರ್ಮಕ್ಕೆ ಸಂಬಂಧಿಸಿದ ಆ ಮುಸ್ಲಿಂ ಫಕೀರರನ್ನು ಹಳ್ಳಿಯ ಜನರು ನಿಂದಿಸುತ್ತಿದ್ದಾರೆ ಮತ್ತು ಅವರನ್ನು 'ಜಿಹಾದಿಗಳು, ಭಯೋತ್ಪಾದಕರು...' ಎಂದು ಕರೆಯುತ್ತಿದ್ದಾರೆ. ಕೆಲವರು ಅವರನ್ನು "ಹಸಿರು" ಎಂದು ಕರೆಯುತ್ತಾರೆ, ಇನ್ನೊಬ್ಬರು, "ಅವರು ಸಾಧುಗಳ ಬಟ್ಟೆಗಳನ್ನು ಧರಿಸುತ್ತಾರೆ, ಭಿಕ್ಷೆ ಬೇಡುತ್ತಾರೆ, ಆದರೆ ಅವರು ಈ ಹಣದಿಂದ ಬಿರಿಯಾನಿ ತಿನ್ನುತ್ತಾರೆ...." ಎಂದು ಹೇಳುವುದು ಕೇಳಿಬರುತ್ತದೆ. ನಂತರ ಯುವಕನೊಬ್ಬ ಅವರನ್ನು ಸುತ್ತುವರೆದು ಅವರ ಗುರುತು ಕಾರ್ಡ್‌ನ್ನು ಕೇಳಿದನು. ಅವರಲ್ಲಿ ಯಾರೂ ಇಲ್ಲ ಎಂದು ಕೇಳಿದರು. ಬಳಿಕ ಮುಸ್ಲಿಂ ಪಕೀರರನ್ನು ಅವರನ್ನು ಜಿಹಾದಿಗಳು ಮತ್ತು ಭಯೋತ್ಪಾದಕರು ಎಂದು ಕರೆಯುತ್ತಾರೆ.

ಪ್ರಚೋದನಕಾರಿ ಹೇಳಿಕೆ: ಓವೈಸಿ, ಯತಿ ನರಸಿಂಹಾನಂದ ವಿರುದ್ಧ ಎಫ್‌ಐಆರ್ಪ್ರಚೋದನಕಾರಿ ಹೇಳಿಕೆ: ಓವೈಸಿ, ಯತಿ ನರಸಿಂಹಾನಂದ ವಿರುದ್ಧ ಎಫ್‌ಐಆರ್

ಗುರುತಿನ ಚೀಟಿ ತೋರಿಸಲು ಒತ್ತಾಯ

ಗುರುತಿನ ಚೀಟಿ ತೋರಿಸಲು ಒತ್ತಾಯ

ಸ್ಥಳೀಯರೊಬ್ಬರು, "ನಿಮ್ಮ ಆಧಾರ್ ಅನ್ನು ನಮಗೆ ತೋರಿಸಿ, ಅಥವಾ ನಿಮ್ಮ ಗುರಿತಿನ ಕಾರ್ಡ್‌ನ್ನು ನಮಗೆ ತೋರಿಸಿ" ಎಂದು ಹೇಳಿದರು. ಅವರು ಅವರ ಹೆಸರುಗಳನ್ನು ಮತ್ತು ಅವರು ಎಲ್ಲಿಂದ ಬಂದಿದ್ದಾರೆ ಮತ್ತು ಅವರು ಏಕೆ ಆಧಾರ್ ಕಾರ್ಡ್ ತೆಗೆದುಕೊಂಡಿಲ್ಲ ಎಂದು ಪದೇ ಪದೇ ಕೇಳುತ್ತಾರೆ. ಒಬ್ಬರು "ನೀವೆಲ್ಲರೂ ಭಯೋತ್ಪಾದಕರು ... ನಿಮ್ಮ ನೆಲೆಯನ್ನು ಯಾವಾಗಲೂ ನಿಮ್ಮೊಂದಿಗೆ ಇರಿಸಿ" ಎಂದು ಹೇಳುತ್ತಾರೆ. ಜೊತೆಗೆ ಇವರನ್ನು ಥಳಿಸಿರುವುದಾಗಿ ಹೇಳಲಾಗುತ್ತದೆ.

'ಕಿವಿ ಹಿಡ್ಕೊಂಡು ಸಿಟ್ ಅಪ್ ಮಾಡಿ'

'ಕಿವಿ ಹಿಡ್ಕೊಂಡು ಸಿಟ್ ಅಪ್ ಮಾಡಿ'

ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋದಲ್ಲಿ ಕೆಲ ಗ್ರಾಮಸ್ಥರು 'ಬನ್ನಿ ಜೈ ಶ್ರೀರಾಮ್ ಹೇಳಿ... ಕಿವಿ ಹಿಡ್ಕೊಂಡು ಸಿಟ್ ಅಪ್ ಮಾಡಿ...' ಎಂದು ಫಕೀರರಿಗೆ ಹೇಳುತ್ತಿರುವುದು ಕಂಡು ಬರುತ್ತಿದೆ. ಇಂದಿನ ನಂತರ ನೀವು ಎಂದಿಗೂ ಪಂಡಿತರ ಹಳ್ಳಿಗೆ ಹೋಗುವುದಿಲ್ಲ ಎಂದು ಹೇಳಿ.." ಎಂದು ಒತ್ತಾಯಿಸಿದ್ದಾರೆ.

ಕ್ರಮಕ್ಕೆ ಆಗ್ರಹ

ಕ್ರಮಕ್ಕೆ ಆಗ್ರಹ

ನೂಪುರ್ ಶರ್ಮಾ ಅವರು ಪ್ರವಾದಿಯ ಬಗ್ಗೆ ಕಾಮೆಂಟ್ ಮಾಡಿದ ನಂತರ ಈ ವಿಡಿಯೊ ವೈರಲ್ ಆಗಿದೆ. ಪ್ರವಾದಿಯ ಕುರಿತು ದೂರದರ್ಶನದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿಯ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಮಾಡಿದ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿದೆ. ಈ ನಡುವೆ ಈ ವೀಡಿಯೊ ವೈರಲ್ ಆಗಿದೆ. ಸುಮಾರು 15 ಇಸ್ಲಾಮಿಕ್ ರಾಷ್ಟ್ರಗಳು ನೂಪುರ್ ಟೀಕೆಗಳನ್ನು ಖಂಡಿಸಿವೆ. ಇದರ ನಂತರ ಬಿಜೆಪಿ ಪ್ರತಿಪಕ್ಷಗಳ ಟೀಕೆಗಳನ್ನು ಎದುರಿಸಬೇಕಾಯಿತು. ಕತಾರ್, ಸೌದಿ ಅರೇಬಿಯಾ, ಬಹ್ರೇನ್‌ನಲ್ಲಿ ಬಿಜೆಪಿ ನೂಪುರ್ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ ಹೇರಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

ಆಮೆಗಳ ಈ ವಿಡಿಯೋವನ್ನು ಇಷ್ಟೊಂದು ಜನ ನೋಡಿದ್ದಾರೆ ಅಂದ್ರೆ‌ ಇದ್ರಲ್ಲಿ ಅಂಥದ್ದೇನಿದೆ | OneIndia Kannada

English summary
Harassed by locals: A viral video of Villagers forcing 3 Muslim Fakirs to chant Jai Shri Ram at Gonda village in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X