ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲಂದ್ ಶಹರ್ ಪ್ರಕರಣ: ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆ

|
Google Oneindia Kannada News

ಲಕ್ನೋ, ಡಿಸೆಂಬರ್ 08: ಉತ್ತರ ಪ್ರದೇಶದ ಬುಲಂದ್ ಶಹರ್ ಹಿಂಸಾಚಾರದ ಆರು ದಿನಗಳ ನಂತರ ಇಲ್ಲಿನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ.

ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ

ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಆರಂಭವಾದ ಪ್ರತಿಭಟನೆ ಗಲಭೆಯಾಗಿ ಬದಲಾಗಿ, ಸುಬೋಧ್ ಕುಮಾರ್ ಸಿಂಗ್ ಎಂಬುವವರ ಹತ್ಯೆಯಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸರಿಯಾಗಿ ನಿಭಾಯಿಸಲು ಅಸಮರ್ಥರಾದ ಕಾರಣ ನೀಡಿ ಹಿರಿಯ ಸೂಪರಿಂಟೆಂಡೆಂಟ್ ಪೊಲೀಸ್ ಕೃಷ್ಣ ಬಹದ್ದೂರ್ ಸಿಂಗ್ ಅವರನ್ನು ಲಕ್ನೋದ ಪೊಲೀಸ್ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಉತ್ತರ ಪ್ರದೇಶ ಹಿಂಸಾಚಾರ: ಇನ್‌ಸ್ಪೆಕ್ಟರ್ ಹತ್ಯೆಯಲ್ಲಿ ಸೈನಿಕನ ಕೈವಾಡ?ಉತ್ತರ ಪ್ರದೇಶ ಹಿಂಸಾಚಾರ: ಇನ್‌ಸ್ಪೆಕ್ಟರ್ ಹತ್ಯೆಯಲ್ಲಿ ಸೈನಿಕನ ಕೈವಾಡ?

ಅವರ ಜಾಗಕ್ಕೆ ಸೀತಾಪುರದ ಪ್ರಭಾಕರ್ ಚೌಧರಿ ಎಮಬ ಅಧಿಕಾರಿಯನ್ನು ನೇಮಿಸಲಾಗಿದೆ.

Uttar Pradesh: Bulandshahr top cop removed after violence

ಅಷ್ಟೇ ಅಲ್ಲ, ಘಟನೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ

ಪೊಲೀಸ್ ಅಧಿಕಾರಿ ಸುಬೋಧ್ ಅವರ ಹತ್ಯೆಗೆ ಸಂಬಂಧಿಸಿದಂತೆ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಜೀತು ಫೌಜಿ ಎಂಬುವವರನ್ನು ಬಂಧಿಸಲಾಗಿದ್ದು, ಅವರೇ ಸುಬೋಧ್ ಅವರನ್ನು ಕೊಂದಿರಬಹುದೆಂದು ಶಂಕಿಸಲಾಗಿದೆ. ಗಲಭೆಯ ಸಂದರ್ಭದ ಕೆಲವು ವಿಡಿಯೋ ತುಣುಕುಗಳು ಕೂಡ ಈ ಶಂಕೆಗೆ ಪುಷ್ಠಿ ನೀಡಿವೆ.

English summary
Six days after police officer Subodh Kumar Singh and a local youth were killed in mob violence over cow carcasses in Uttar Pradesh's Bulandshahr, the top officer in the district has been transferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X