ಫಿರೋಜಾಬಾದ್ನಲ್ಲಿ 12 ವರ್ಷದ ಬಾಲಕಿ ಬಲಿ ತೆಗೆದುಕೊಂಡ ಡೆಂಗ್ಯೂ ಜ್ವರ
ಲಕ್ನೋ,
ಸಪ್ಟೆಂಬರ್
25:
ಉತ್ತರ
ಪ್ರದೇಶದ
ಫಿರೋಜಾಬಾದ್
ಜಿಲ್ಲೆಯಲ್ಲಿ
ವೈರಲ್
ಫಿವರ್
ಮತ್ತು
ಡೆಂಗ್ಯೂ
ರೋಗದ
ಭೀತಿ
ಹೆಚ್ಚುತ್ತಿದೆ.
ಮಕ್ಕಳು,
ಮಧ್ಯ
ವಯಸ್ಕರು
ಹಾಗೂ
ವೃದ್ಧರು
ಎನ್ನದೇ
ಎಲ್ಲರಿಗೂ
ರೋಗ
ಕಾಣಿಸಿಕೊಳ್ಳುತ್ತಿರುವುದು
ಮತ್ತಷ್ಟು
ಆತಂಕವನ್ನು
ಹೆಚ್ಚಿಸಿದೆ.
ಫಿರೋಜಾಬಾದ್
ವೈದ್ಯಕೀಯ
ಕಾಲೇಜು
ಆಸ್ಪತ್ರೆಯಲ್ಲಿ
ಡೆಂಗ್ಯೂ
ರೋಗಕ್ಕೆ
ಚಿಕಿತ್ಸೆ
ಪಡೆಯುತ್ತಿದ್ದ
12
ವರ್ಷದ
ಬಾಲಕಿ
ಶುಕ್ರವಾರ
ಚಿಕಿತ್ಸೆ
ಫಲಕಾರಿಯಾಗದೇ
ಪ್ರಾಣ
ಬಿಟ್ಟಿದ್ದಾರೆ
ಎಂದು
ಸರ್ಕಾರದ
ಮೂಲಗಳು
ತಿಳಿಸಿವೆ.
ಇದರಿಂದ
ಜಿಲ್ಲೆಯಲ್ಲಿ
ಡೆಂಗ್ಯೂ
ಜ್ವರದಿಂದ
ಪ್ರಾಣ
ಬಿಟ್ಟವರ
ಸಂಖ್ಯೆ
63ಕ್ಕೆ
ಏರಿಕೆಯಾಗಿದೆ.
ಹಣ ಕಟ್ಟಿದರಷ್ಟೇ ಚಿಕಿತ್ಸೆ: ವೈದ್ಯರ ಧನದಾಹಕ್ಕೆ ಹೋಯ್ತಾ ಮಗುವಿನ ಪ್ರಾಣ!?
ಕಳೆದ 24 ಗಂಟೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 154 ಮಂದಿ ರೋಗಿಗಳು ಡೆಂಗ್ಯೂ ಹಾಗೂ ವೈರಲ್ ಫಿವರ್ ನಿಂದ ದಾಖಲಾಗಿದ್ದಾರೆ. ಆಸ್ಪತ್ರೆಯ ವಿವಿಧ ವಾರ್ಡ್ ಗಳಲ್ಲಿ ಒಟ್ಟು 255 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ 153 ರೋಗಿಗಳಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ. ಸಂಗೀತಾ ಅನೇಜಾ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ
ಸಿಬ್ಬಂದಿ
ನಿರ್ಲಕ್ಷ್ಯದ
ಬಗ್ಗೆ
ಆರೋಪ:
ಫಿರೋಜಾಬಾದ್
ವೈದ್ಯಕೀಯ
ಕಾಲೇಜು
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಫಲಕಾರಿಯಾಗದೇ
ಪ್ರಾಣ
ಬಿಟ್ಟ
12
ವರ್ಷದ
ಬಾಲಕಿ
ಸಾವಿಗೆ
ಆಸ್ಪತ್ರೆ
ಸಿಬ್ಬಂದಿಯ
ನಿರ್ಲಕ್ಷ್ಯವೇ
ಮುಖ್ಯ
ಕಾರಣ
ಎಂದು
ಮೃತ
ಬಾಲಕಿಯ
ಸಹೋದರ
ದೀಪಕ್
ಆರೋಪಿಸಿದ್ದಾರೆ.
ಅಲ್ಲದೇ
ಆಸ್ಪತ್ರೆ
ಸಿಬ್ಬಂದಿ
ವಿರುದ್ಧ
ಬಾಲಕಿ
ಕುಟುಂಬ
ಸದಸ್ಯರು
ಪ್ರತಿಭಟನೆ
ನಡೆಸಿದ್ದು,
ಅವರ
ಮೇಲೆ
ಹಲ್ಲೆ
ನಡೆಸಿದ್ದಾರೆ
ಎಂದು
ದೂಷಿಸಲಾಗಿದೆ.
"ಮೃತ
ಬಾಲಕಿ
ಕುಟುಂಬ
ಸದಸ್ಯರು
ಮತ್ತು
ಆಸ್ಪತ್ರೆ
ಸಿಬ್ಬಂದಿ
ನಡುವಿನ
ಗಲಾಟೆಗೆ
ಸಂಬಂಧಿಸಿದಂತೆ
ತನಿಖೆ
ನಡೆಸಲಾಗುತ್ತಿದೆ,"
ಎಂದು
ಸ್ಥಳೀಯ
ಅಧಿಕಾರಿ
ಆನಂದ್
ಕುಮಾರ್
ತಿಳಿಸಿದ್ದಾರೆ.
ಫಿರೋಜಾಬಾದ್
ಜಿಲ್ಲೆಯಲ್ಲಿ
ಮನೆಮನೆ
ಸಮೀಕ್ಷೆ
ಕಳೆದ
ವಾರ
ಫಿರೋಜಾಬಾದ್
ಜಿಲ್ಲೆಗೆ
ಭೇಟಿ
ನೀಡಿದ
ರಾಷ್ಟ್ರೀಯ
ರೋಗ
ನಿಯಂತ್ರಣ
ಕೇಂದ್ರದ
ಅಧಿಕಾರಿಗಳು
ಡೆಂಗ್ಯೂ
ಜ್ವರದ
ಹರಡುವಿಕೆ
ಬಗ್ಗೆ
ಗುರುತಿಸಿದ್ದರು.
ಜಿಲ್ಲೆಯಲ್ಲಿ
ಸೋಂಕು
ಹರಡುವಿಕೆಗೆ
ಕಡಿವಾಣ
ಹಾಕುವ
ನಿಟ್ಟಿನಲ್ಲಿ
ಮನೆ
ಮನೆ
ಸಮೀಕ್ಷೆ
ನಡೆಸಲು
ಸೂಚನೆ
ನೀಡಿದ್ದರು.
ಸರ್ಕಾರಿ
ಆಸ್ಪತ್ರೆಗಳಲ್ಲಿ
ರೋಗಗಳಿಗೆ
ಹಾಸಿಗೆ
ಕೊರತೆ
ಸೃಷ್ಟಿಯಾಗುತ್ತಿದ್ದು,
ಖಾಸಗಿ
ಆಸ್ಪತ್ರೆಗಳಲ್ಲಿ
ಚಿಕಿತ್ಸೆ
ವೆಚ್ಚವನ್ನು
ಹೆಚ್ಚಿಸಲಾಗುತ್ತಿದೆ.
"ಜಿಲ್ಲೆಯಲ್ಲಿ
ರೋಗಿಗಳನ್ನು
ಪತ್ತೆ
ಮಾಡುವುದಕ್ಕೆ
ಹಾಗೂ
ಅಗತ್ಯ
ಚಿಕಿತ್ಸೆ
ನೀಡುವುದಕ್ಕಾಗಿ
100ಕ್ಕೂ
ಹೆಚ್ಚು
ವೈದ್ಯಕೀಯ
ತಂಡಗಳು
ಜಿಲ್ಲೆಯಲ್ಲಿ
ಮನೆ
ಮನೆ
ಸಮೀಕ್ಷೆ
ನಡೆಸುತ್ತಿವೆ.
ಸರ್ಕಾರಿ
ಆಸ್ಪತ್ರೆಗಳಲ್ಲಿ
ಅಗತ್ಯ
ವೈದ್ಯಕೀಯ
ಸೌಲಭ್ಯಗಳಲ್ಲಿ
ಯಾವುದೇ
ರೀತಿ
ಕೊರತೆಗಳಿಲ್ಲ.
ರೋಗಿಗಳನ್ನು
ಆಸ್ಪತ್ರೆಗೆ
ಕರೆದುಕೊಂಡು
ಹೋಗುವುದಕ್ಕಾಗಿ
ಹೆಚ್ಚುವರಿ
ಆಂಬಹುಲೆನ್ಸ್
ವ್ಯವಸ್ಥೆಯನ್ನು
ಮಾಡಲಾಗಿದೆ.
ಕೊಳಚೆ
ಪ್ರದೇಶಗಳಲ್ಲಿ
ಸ್ವಚ್ಛತೆಯನ್ನು
ಕಾಪಾಡುವ
ನಿಟ್ಟಿನಲ್ಲಿ
ನಗರಸಭೆ
ಮತ್ತು
ಪುರಸಭೆ
ಅಧಿಕಾರಿಗಳು
ಕಾರ್ಯ
ನಿರ್ವಹಿಸುತ್ತಿದ್ದಾರೆ.
ಇತ್ತೀಚಿಗೆ
ವರದಿಯಾದ
ಪ್ರತಿಯೊಂದು
ಸಾವಿನ
ಪ್ರಕರಣಗಳ
ಬಗ್ಗೆ
ತನಿಖೆಯನ್ನು
ನಡೆಸಲಾಗುತ್ತಿದೆ,"
ಎಂದು
ಆರೋಗ್ಯ
ಇಲಾಖೆ
ಹೆಚ್ಚುವರಿ
ನಿರ್ದೇಶಕ
ಎ
ಕೆ
ಸಿಂಗ್
ಹೇಳಿದ್ದಾರೆ.