ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸುವಿಗೆ ಕಾರು ಗುದ್ದಿ ನಾಲ್ಕು ಮಂದಿ ಸಾವು, ಏಳು ಮಂದಿಗೆ ಗಾಯ

|
Google Oneindia Kannada News

ಸೀತಾಪುರ (ಉ.ಪ್ರದೇಶ), ಮಾರ್ಚ್‌ 08: ಹಸುವಿಗೆ ಕಾರು ಗುದ್ದಿದ ಕಾರಣ ನಾಲ್ಕು ಮಂದಿ ಸಾವನ್ನಪ್ಪಿ ಏಳು ಮಂದಿಗೆ ಗಾಯವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಸೀತಾಪುರ ಬಳಿಯ ಹರಪುರ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಎಸ್‌ಯುವಿ ಕಾರೊಂದು ಗುದ್ದಿ ಕಾರು ಪಲ್ಟಿ ಹೊಡೆದ ಕಾರಣ ಕಾರಿನಲ್ಲಿದ್ದ 11 ಜನರಲ್ಲಿ 4 ಜನ ಸಾವನ್ನಪ್ಪಿದ್ದಾರೆ, ಏಳು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಶಾಸಕ ಸಿಟಿ ರವಿ ಕಾರು ಅಪಘಾತ ಪ್ರಕರಣ, ಮೃತರ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರಶಾಸಕ ಸಿಟಿ ರವಿ ಕಾರು ಅಪಘಾತ ಪ್ರಕರಣ, ಮೃತರ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ

ಒಂದೇ ಕುಟುಂಬದವರು ಮದುವೆ ಮುಗಿಸಿ ಮರಳಿ ಬರುವಾಗ ಘಟನೆ ನಡೆದಿದೆ. ಸೀತಾಪುರ-ಲಕ್ಷ್ಮೀಪುರ ಮುಖ್ಯರಸ್ತೆಯಲ್ಲಿ ಬಡೇಲಿಯಾ ಎಂಬ ಹಳ್ಳಿಯ ಬಳಿ ಕಾರು ಬಂದಾಗ ಅಚಚಾನಕ್ ಆಗಿ ಹಸುವೊಂದು ಕಾರಿಗೆ ಎದುರಾಗಿ ಬಂದಿದೆ. ಕಾರು ಹಸುವಿಗೆ ಗುದ್ದತಂದೆ ತಡೆಯಲು ಚಾಲಕ ಯತ್ನಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ.

Uttar Pradesh: 4 killed, 7 injured as car hits a cow

ಸ್ಥಳೀಯರು ಶೀಘ್ರವಾಗಿ ನೆರವಿಗೆ ಬಂದು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಆದರೆ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು, ಏಳು ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಹಾರ್ದಿಕ್ ಪಟೇಲ್ ಕಾರು ಅಪಘಾತ, ಪ್ರಕರಣ ದಾಖಲು ಹಾರ್ದಿಕ್ ಪಟೇಲ್ ಕಾರು ಅಪಘಾತ, ಪ್ರಕರಣ ದಾಖಲು

ಉತ್ತರ ಪ್ರದೇಶದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಚಾಲ್ತಿಯಲ್ಲಿದೆ. ಗೋವಿನ ಹತ್ಯೆ ಮಾಡಿದವರು ಕಠಿಣ ಕಾನೂನು ಎದುರಿಸಬೇಕಾಗುತ್ತದೆ.

English summary
In Uttar Pradesh's Sitapur area 4 people died and 7 injured as a car hits a cow. 11 people travailing in a SUV car a cow suddenly jumped to road car hits the cow and looses control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X