ಅಖಿಲೇಶ್ಗೆ ತನ್ನ ಕುಟುಂಬವನ್ನೇ ನಿಭಾಯಿಸಲು ಸಾಧ್ಯವಾಗಿಲ್ಲ: ಬಿಜೆಪಿ ವ್ಯಂಗ್ಯ
ಲಕ್ನೋ, ಜನವರಿ 19: ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಅಖಿಲೇಶ್ ಯಾದವ್ ಕುರಿತು ಬಿಜೆಪಿ ಕುಹಕವಾಡಿದೆ.
ಅಖಿಲೇಶ್ ಯಾದವ್ಗೆ ತನ್ನ ಕುಟುಂಬವನ್ನೇ ನಿಭಾಯಿಸಲು ಸಾಧ್ಯವಾಗಿಲ್ಲ, ಹೀಗಾಗಿ ಅಪರ್ಣಾ ಯಾದವ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿಯ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡ ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್
ಉತ್ತರ ಪ್ರದೇಶದ ಉಪಮುಖ್ಯಮಂತ್ರಿಯಾಗಿರುವ ಕೇಶವ್ ಮೌರ್ಯ ಮಾತನಾಡಿ, ಅಖಿಲೇಶ್ ಯಾದವ್ ರಾಜ್ಯದ ಅಭಿವೃದ್ಧಿ ಯೋಜನೆಗಳ ಕ್ರೆಡಿಟ್ ಅನ್ನು ಪಡೆಯಲು ಇಷ್ಟ ಪಡುತ್ತಾರೆ ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವಿಲ್ಲ ಎಂದರು.
ಅಖಿಲೇಶ್ ತಮ್ಮ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿತ್ತು ಎಂದು ಹೇಳಿಕೊಳ್ಳುತ್ತಿದ್ದರು, ಆದರೆ ಈ ಯಾವುದೇ ಕ್ಷೇತ್ರದಿಂದ ಚುನಾವಣೆ ಎದುರಿಸುವ ಧೈರ್ಯವಿಲ್ಲ ಎಂದು ಮೌರ್ಯ ಹೇಳಿದರು.
ಅಪರ್ಣಾ ಯಾದವ್ ಅವರು ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ ಅವರ ಪತ್ನಿಯಾಗಿದ್ದಾರೆ. ಅಖಿಲೇಶ್ ಯಾದವ್ ಅವರು ಕುಟುಂಬದಲ್ಲೂ ವಿಫಲ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವಲ್ಲೂ ವಿಫಲ ಎಂದಿದ್ದಾರೆ.
ಅಪರ್ಣಾ
ಯಾದವ್
ಜನವರಿ
19ರಂದು
ಬಿಜೆಪಿಗೆ
ಸೇರ್ಪಡೆಯಾಗಿದ್ದಾರೆ.
ಅಖಿಲೇಶ್
ಯಾದವ್
ಅವರು
ಉತ್ತರ
ಪ್ರದೇಶ
ಚುನಾವಣೆಯಲ್ಲಿ
ಸ್ಪರ್ಧಿಸಲು
ಮುಂದಾಗಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಯೋಗಿ
ಆದಿತ್ಯನಾಥ್
ಗೋರಖ್ಪುರದಿಂದ
ಸ್ಪರ್ಧೆಗಿಳಿದಿದ್ದಾರೆ.
ಅಖಿಲೇಶ್
ಯಾದವ್
ಅವರು
ಹಲವು
ಗೊಂದಲಗಳ
ನಂತರ
ಉತ್ತರ
ಪ್ರದೇಶ
ಚುನಾವಣೆಯಲ್ಲಿ
ಸ್ಪರ್ಧಿಸಲು
ನಿರ್ಧರಿಸಿದ್ದಾರೆ
ಎಂದು
ಮೂಲಗಳು
ಬುಧವಾರ
ತಿಳಿಸಿವೆ.
ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜ್ಯದ ಪ್ರತಿಯೊಂದು ಸ್ಥಾನದ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡುವುದಾಗಿ ಅಖಿಲೇಶ್ ಈ ಹಿಂದೆಯೇ ಹೇಳಿದ್ದರು. ಅಖಿಲೇಶ್ ಯಾದವ್ ಅವರು ಪೂರ್ವ ಉತ್ತರ ಪ್ರದೇಶದ ಆಜಂಗಢದಿಂದ ಲೋಕಸಭೆಯ ಸಂಸದರಾಗಿದ್ದು, ಇದುವರೆಗೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅವರ ಸ್ಥಾನವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆಜಂಗಢದ ಲೋಕಸಭಾ ಸಂಸದರಾದ ಅಖಿಲೇಶ್ ಯಾದವ್, ಉತ್ತರ ಪ್ರದೇಶ ಚುನಾವಣೆಯಲ್ಲಿಆಜಂಗಢದ ಗೋಪಾಲ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ .
ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜ್ಯದ ಪ್ರತಿಯೊಂದು ಸ್ಥಾನದ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡುವುದಾಗಿ ಅವರು ಈ ಹಿಂದೆ ಹೇಳಿದ್ದರು. ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಬಿಜೆಪಿಯ ಯೋಗಿ ಆದಿತ್ಯನಾಥ ಅವರು ಮೊದಲ ಬಾರಿಗೆ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಮೇಲೆ ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ.
ಯೋಗಿ ಆದಿತ್ಯನಾಥ ಅವರು ಪೂರ್ವ ಯುಪಿಯ ಗೋರಖ್ಪುರ ಸದಾರ್ನಿಂದ ಸ್ಪರ್ಧಿಸಲಿದ್ದಾರೆ ಮತ್ತು ಪ್ರಭಾವಿ ಗೋರಖ್ಪುರ ಮಠದ ಮುಖ್ಯಸ್ಥರಾಗಿರುವ ಅರ್ಚಕ-ರಾಜಕಾರಣಿಯನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಈ ಪ್ರದೇಶದಲ್ಲಿ ದೊಡ್ಡ ಲಾಭ ಪಡೆಯಲಿದೆ.
- ಮೊದಲ ಹಂತದಲ್ಲಿ ಫೆಬ್ರವರಿ 10ರಂದು ಮತದಾನ
- ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ
- ಮೂರನೇ ಹಂತದಲ್ಲಿ ಫೆಬ್ರವರಿ 20ರಂದು ಮತದಾನ
- ನಾಲ್ಕನೇ ಹಂತದಲ್ಲಿ ಫೆಬ್ರವರಿ 23ರಂದು ಮತದಾನ
- ಐದನೇ ಹಂತದಲ್ಲಿ ಫೆಬ್ರವರಿ 27ರಂದು ಮತದಾನ
- ಆರನೇ ಹಂತದಲ್ಲಿ ಮಾರ್ಚ್ 3ರಂದು ಮತದಾನ
- ಏಳನೇ ಹಂತದಲ್ಲಿ ಮಾರ್ಚ್ 7ರಂದು ಮತದಾನ
ಉತ್ತರ
ಪ್ರದೇಶ
ಗದ್ದುಗೆ
ಹಿಡಿಯಲು
ಪೈಪೋಟಿ:
ದೇಶದಲ್ಲಿ
ಅತಿಹೆಚ್ಚು
ವಿಧಾನಸಭೆ
ಕ್ಷೇತ್ರಗಳನ್ನು
ಹೊಂದಿರುವ
ಉತ್ತರ
ಪ್ರದೇಶದಲ್ಲಿ
ಅಧಿಕಾರದ
ಗದ್ದುಗೆ
ಹಿಡಿಯುವುದಕ್ಕೆ
ಬಿಜೆಪಿ,
ಸಮಾಜವಾದಿ
ಮತ್ತು
ಬಹುಜನ
ಸಮಾಜವಾದಿ
ಸೇರಿದಂತೆ
ಪ್ರಾದೇಶಿಕ
ಪಕ್ಷಗಳ
ನಡುವೆ
ಪೈಪೋಟಿ
ನಡೆಯುತ್ತಿದೆ.
ಅತಿಹೆಚ್ಚು
ಕ್ಷೇತ್ರಗಳನ್ನು
ಹೊಂದಿರುವ
ರಾಜ್ಯದ
ಮತದಾರರ
ಮನ
ಗೆಲ್ಲುವುದಕ್ಕಾಗಿ
ಇತ್ತೀಚಿಗೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹಲವು
ಬಾರಿ
ರಾಜ್ಯಕ್ಕೆ
ಭೇಟಿ
ನೀಡಿ
ಸಾಕಷ್ಟು
ಯೋಜನೆಗಳಿಗೆ
ಚಾಲನೆ
ನೀಡಿದ್ದರು.