ಯುಪಿ ಚುನಾವಣೆ: ವಾರಣಸಿ 10,000 ಬಿಜೆಪಿ ಕಾರ್ಯಕರ್ತರ ಜೊತೆ ಮೋದಿ ಸಭೆ
ಲಕ್ನೋ, ಜನವರಿ 18: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರ ಪ್ರದೇಶದ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರೊಂದಿಗೆ ವರ್ಚುವಲ್ ಸಭೆ ಮೂಲಕ ಸಂವಾದ ನಡೆಸಿದರು.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದ ನಂತರ ಪಕ್ಷದ ಕಾರ್ಯಕರ್ತರ ಜೊತೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ನಡೆಸುತ್ತಿರುವ ಮೊದಲ ರಾಜಕೀಯ ಸಂವಾದ ಇದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರ ಸಂವಾದದ ವೇಳೆ ಕಾಶಿ ವಿಶ್ವನಾಥ್ ಕಾರಿಡಾರ್ ಮರುಸ್ಥಾಪನೆ, ಮಹಿಳಾ ಸಬಲೀಕರಣ, ಮೂಲಸೌಕರ್ಯ ಮತ್ತು ಆರೋಗ್ಯ ಅಭಿವೃದ್ಧಿ ವಿಷಯಗಳು ಚರ್ಚೆಗೆ ಬಂದವು.
ಮತದಾನದ
ಮಹತ್ವ
ತಿಳಿಸಲು
ಪ್ರಧಾನಿ
ಸಲಹೆ:
"ಪ್ರತಿಯೊಂದು
ಮತವೂ
ಮುಖ್ಯವಾಗಿರುತ್ತದೆ,
ನಾವು
ಮತದಾನದ
ಮಹತ್ವವನ್ನು
ಜನರಿಗೆ
ತಿಳಿಸಬೇಕು"
ಎಂದು
ನಮೋ
ಅಪ್ಲಿಕೇಶನ್
ಮೂಲಕ
ವಾರಣಾಸಿಯ
ಬಿಜೆಪಿ
ಕಾರ್ಯಕರ್ತರೊಂದಿಗೆ
ಸಂವಾದ
ನಡೆಸುವಾಗ
ಪ್ರಧಾನಿ
ಮೋದಿ
ಹೇಳಿದ್ದಾರೆ.
ಪಕ್ಷದ
ಕಾರ್ಯಕರ್ತರೊಬ್ಬರೊಂದಿಗೆ
ಸಂವಾದ
ನಡೆಸಿದ
ಪ್ರಧಾನಿ
ಮೋದಿ,
ಸರ್ಕಾರದ
ಕಲ್ಯಾಣ
ಯೋಜನೆಗಳ
ವ್ಯಾಪ್ತಿಯನ್ನು
ರೈತರಿಗೆ
ವಿಸ್ತರಿಸುವಂತೆ
ಕೇಳಿಕೊಂಡರು.
ರಾಸಾಯನಿಕ
ಮುಕ್ತ
ರಸಗೊಬ್ಬರ
ಬಳಕೆಯ
ಬಗ್ಗೆ
ರೈತರಿಗೆ
ಅರಿವು
ಮೂಡಿಸಬೇಕು
ಎಂದು
ಹೇಳಿದರು.
ನೈಸರ್ಗಿಕ
ಕೃಷಿ
ಉತ್ತೇಜನಕ್ಕೆ
ಸಲಹೆ:
"ನಾವು
ನೈಸರ್ಗಿಕ
ಕೃಷಿಗೆ
ಉತ್ತೇಜನ
ನೀಡಬೇಕಾಗಿದೆ.
ರಾಸಾಯನಿಕ
ಮುಕ್ತ
ಕೃಷಿಗೆ
ರೈತರನ್ನು
ಪ್ರೋತ್ಸಾಹಿಸಬೇಕು.
ಆಜಾದಿ
ಕಾ
ಅಮೃತ್
ಮಹೋತ್ಸವದ
ಆಚರಣೆಯಲ್ಲಿ
ನಾವು
ಎಲ್ಲರನ್ನೂ
ಸಂಪರ್ಕಿಸಬೇಕು,"
ಎಂದು
ಪ್ರಧಾನಿ
ಮೋದಿ
ಹೇಳಿದ್ದಾರೆ.
ಬಿಜೆಪಿಯ
ಮೈಕ್ರೊ
ದೇಣಿಗೆ
ಅಭಿಯಾನದ
ಕುರಿತು
ಮಾತನಾಡಿದ
ಪ್ರಧಾನಿ,
ಅದರ
ಸದಸ್ಯರು
ಮತ್ತು
ಇತರರಿಂದ
ಸಣ್ಣ
ಕೊಡುಗೆಗಳ
ಮೂಲಕ
ನಿಧಿ
ಸಂಗ್ರಹಿಸಲು
ಪ್ರಯತ್ನಿಸುತ್ತಿದ್ದಾರೆ
ಎಂದರು.
ಉತ್ತರ
ಪ್ರದೇಶದಲ್ಲಿ
ಚುನಾವಣೆ
ಪೈಪೋಟಿ:
ಉತ್ತರ
ಪ್ರದೇಶದ
403
ವಿಧಾನಸಭೆ
ಕ್ಷೇತ್ರಗಳಿಗೆ
ಒಟ್ಟು
ಏಳು
ಹಂತದಲ್ಲಿ
ಚುನಾವಣೆ
ನಡೆಯಲಿದೆ.
ಫೆಬ್ರವರಿ
10,
ಫೆಬ್ರವರಿ
14,
ಫೆಬ್ರವರಿ
20,
ಫೆಬ್ರವರಿ
23,
ಫೆಬ್ರವರಿ
27,
ಮಾರ್ಚ್
3
ಮತ್ತು
ಮಾರ್ಚ್
7ರಂದು
ಮತದಾನ
ನಡೆಯಲಿದೆ.
ಅಂತಿಮವಾಗಿ
ಮಾರ್ಚ್
10ರಂದು
ಉತ್ತರ
ಪ್ರದೇಶ
ಸೇರಿದಂತೆ
ಐದು
ರಾಜ್ಯಗಳಲ್ಲಿ
ನಡೆದ
ವಿಧಾನಸಭೆ
ಚುನಾವಣೆಯ
ಫಲಿತಾಂಶ
ಪ್ರಕಟವಾಗಲಿದೆ.
Recommended Video
2017
ಉತ್ತರ
ಪ್ರದೇಶ
ಚುನಾವಣೆ
ಫಲಿತಾಂಶ
ಕಳೆದ
2017ರಲ್ಲಿ
ಉತ್ತರ
ಪ್ರದೇಶದಲ್ಲಿ
403
ವಿಧಾನಸಭೆಗಳಿಗೆ
ನಡೆದ
ಚುನಾವಣೆಯಲ್ಲಿ
ಭಾರತೀಯ
ಜನತಾ
ಪಕ್ಷ
ಅತಿಹೆಚ್ಚು
ಸ್ಥಾನಗಳನ್ನು
ಗೆದ್ದು
ಅಧಿಕಾರದ
ಗದ್ದುಗೆ
ಏರಿತ್ತು.
ಒಟ್ಟು
403
ಕ್ಷೇತ್ರಗಳ
ಪೈಕಿ
ಬಿಜೆಪಿ
312
ಸ್ಥಾನಗಳನ್ನು
ಗೆದ್ದಿತ್ತು.
ಸಮಾಜವಾದಿ
ಪಕ್ಷ
47
ಸ್ಥಾನಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಬಹುಜನ
ಸಮಾಜವಾದಿ
ಪಕ್ಷವು
19
ಕ್ಷೇತ್ರಗಳಲ್ಲಿ
ಗೆಲುವಿನ
ಬಾವುಟ
ಹಾರಿಸಿತ್ತು.
ರಾಷ್ಟ್ರೀಯ
ಪಕ್ಷ
ಕಾಂಗ್ರೆಸ್
ತೀವ್ರ
ಹಿನ್ನಡೆ
ಅನುಭವಿಸಿದ್ದು,
ಕೇವಲ
ಏಳು
ಕ್ಷೇತ್ರಗಳಲ್ಲಿ
ಮಾತ್ರ
ಗೆಲುವು
ಸಾಧಿಸುವಲ್ಲಿ
ಯಶಸ್ವಿಯಾಗಿತ್ತು.