'ಯುಪಿ ಚುನಾವಣೆಯಲ್ಲಿ ಗೆದ್ದರೆ ರೈತರಿಗೆ ಉಚಿತ ವಿದ್ಯುತ್' ಅಖಿಲೇಶ್
ಲಕ್ನೋ ಜನವರಿ 17: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರೈತರಿಗಾಗಿ ದೊಡ್ಡ ಘೋಷಣೆ ಮಾಡಿದ್ದಾರೆ. ಎಲ್ಲಾ ರೈತರಿಗೆ ಉಚಿತ ವಿದ್ಯುತ್ ಮತ್ತು ನೀರಾವರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಅಖಿಲೇಶ್ ಹೇಳಿದರು. ಲಕ್ನೋದಲ್ಲಿ ನಡೆದ ಸಮಾವೇಶದಲ್ಲಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ರೈತರಿಗೆ ವಿಮೆ ಮತ್ತು ಪಿಂಚಣಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈ ಘೋಷಣೆಗೂ ಮುನ್ನ ರೈತರಿಗೆ ಆಹಾರ (ಗೋಧಿ ಮತ್ತು ಅಕ್ಕಿ) ಕೈಯಲ್ಲಿ ತೆಗೆದುಕೊಳ್ಳುವ ಮೂಲಕ ಬಿಜೆಪಿಯನ್ನು ತೊಡೆದುಹಾಕಲು ಮನವಿ ಮಾಡಿದರು. ರೈತರಿಗೆ ಅನ್ಯಾಯ ಮಾಡಿದವರನ್ನು ಸೋಲಿಸಿ ತೊಲಗಿಸುತ್ತೇವೆ ಎಂದು ನಾವೆಲ್ಲರೂ ಪ್ರತಿಜ್ಞೆ ಮಾಡುತ್ತೇವೆ ಎಂದರು.
ರೈತರಿಗೆ ನೀರಾವರಿಗಾಗಿ ಉಚಿತ ವಿದ್ಯುತ್
ಸಮಾಜವಾದಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಎಲ್ಲಾ ಬೆಳೆಗಳಿಗೆ ಎಂಎಸ್ಪಿ, 15 ದಿನಗಳಲ್ಲಿ ರೈತರಿಗೆ ಕಬ್ಬು ಹಣ ಪಾವತಿ, ರೈತರಿಗೆ ನೀರಾವರಿಗಾಗಿ ಉಚಿತ ವಿದ್ಯುತ್, ಬಡ್ಡಿರಹಿತ ಸಾಲ, ವಿಮೆ ಮತ್ತು ರೈತರಿಗೆ ಪಿಂಚಣಿ ವ್ಯವಸ್ಥೆಗಳನ್ನು ಸೇರಿಸಲಾಗುವುದು ಎಂದು ಅಖಿಲೇಶ್ ಯಾದವ್ ಹೇಳಿದರು. ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್, ಉತ್ತರ ಪ್ರದೇಶ ಚುನಾವಣೆಗೆ ದೊಡ್ಡ ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ. ಬಿಜೆಪಿಯ ಪ್ರಣಾಳಿಕೆ ನಂತರ ನಮ್ಮ ಪ್ರಣಾಳಿಕೆ ಬರಲಿದೆ ಎಂದರು.
ಮತಕ್ಕಾಗಿ 3 ಕೃಷಿ ಕಾಯಿದೆ ಹಿಂಪಡೆದ ಬಿಜೆಪಿ
ಸಮಾವೇಶದಲ್ಲಿ ಅಖಿಲೇಶ್ ಯಾದವ್ ಅವರೊಂದಿಗೆ ಲಖಿಂಪುರದ ತೇಜಿಂದರ್ ಬಿರ್ಕ್ ಕೂಡ ಉಪಸ್ಥಿತರಿದ್ದರು. ಲಖಿಂಪುರ ಕೇರಿ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು ತೇಜಿಂದರ್ ಮೇಲೆ ವಾಹನ ಹತ್ತಿಸುವ ಯತ್ನ ನಡೆದಿತ್ತು. ಆ ವೇಳೆ ಅವರು ಗಾಯಗೊಂಡಿದ್ದಾರೆ. ಹೋರಾಟ ಮಾಡಿದ ರೈತ ಮುಖಂಡರು ಮತ್ತು ರೈತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ. ಜೊತೆಗೆ ಬಿಜೆಪಿ ಮತಕ್ಕಾಗಿ 3 ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ರೈತರಿಗೆ ಅನ್ಯಾಯ ಮಾಡಿದವರನ್ನು ತೊಲಗಿಸುವ ಪಣ ತೊಡುತ್ತಿದ್ದೇವೆ ಎಂದು ಅಖಿಲೇಶ್ ನೆರೆದವರನ್ನು ಪ್ರತಿಜ್ಞೆಗೆ ಒತ್ತಾಯಿಸಿದರು.
ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡ ಯೋಗಿಯ ಸಚಿವರು
ಮತ್ತೊಂದೆಡೆ ಯೋಗಿ ಸರ್ಕಾರದ ಸಚಿವ ಬ್ರಜೇಶ್ ಪಾಠಕ್, ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು, ವ್ಯಾಕ್ಸಿನೇಷನ್ ನಿನ್ನೆ 1 ವರ್ಷ ಪೂರೈಸಿದೆ. ಭಾರತವು ಕೊರೋನಾವನ್ನು ಉತ್ತಮವಾಗಿ ನಿಯಂತ್ರಿಸಿರುವುದಕ್ಕೆ ಜಗತ್ತು ಸಂತೋಷವಾಗಿದೆ ಎಂದು ಹೇಳಿದರು. ಆದರೆ ಕೆಲವು ನಾಯಕರು ಇದು ಬಿಜೆಪಿಯ ಲಸಿಕೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಸದ್ದಿಲ್ಲದೆ ಲಸಿಕೆ ಹಾಕಿಸಿಕೊಂಡರು. 'ನಿನ್ನೆ ನಾನು ಅವರ (ಅಖಿಲೇಶ್ ಯಾದವ್) ಪತ್ನಿ ಡಿಂಪಲ್ ಜಿಗೆ ನಿಮ್ಮ ಪತಿಗೂ ಲಸಿಕೆ ಹಾಕುವಂತೆ ವಿನಂತಿಸಿದೆ. ಇದರಿಂದ ಸಾರ್ವಜನಿಕರು ಕೊರೋನಾವನ್ನು ಹೆಚ್ಚಿಸುತ್ತಿಲ್ಲ, ಆದರೆ ಕೆಲವರು ಜನರು ಲಸಿಕೆ ಪಡೆಯದಂತೆ ಮಾಡಿ ಕೊರೋನಾವನ್ನು ಹೆಚ್ಚಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
ಬೇರೆ ರಾಜ್ಯಗಳಿಂದ ಬಿಜೆಪಿ ಕಾರ್ಯಕರ್ತರ ಆಮದು
Recommended Video
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಂಚು ರೂಪಿಸಲು ಬೇರೆ ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಉತ್ತರಪ್ರದೇಶಕ್ಕೆ ಕರೆತರಲಾಗುತ್ತಿದೆ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. 'ಸಂಚು ರೂಪಿಸಲು ಗುಜರಾತ್ ಮತ್ತು ಇತರ ರಾಜ್ಯಗಳ ಬಿಜೆಪಿ ಕಾರ್ಯಕರ್ತರನ್ನು ಯುಪಿಗೆ ಕರೆತರಲಾಗುತ್ತಿದೆ' ಎಂದು ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಿಂದ ಯುಪಿಗೆ ಕಾರ್ಯಕರ್ತರನ್ನು ಕರೆತಂದಿದ್ದಕ್ಕಾಗಿ ಎಸ್ಪಿ ಮುಖ್ಯಸ್ಥರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್ನ ಬಿಜೆಪಿ ಕಾರ್ಯಕರ್ತರನ್ನು ಇಲ್ಲಿಗೆ ಹೇಗೆ ಕರೆತರಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಮತ್ತು ವೀಡಿಯೊಗಳು ಬಂದಿವೆ. ಅವರಿಗೆ ತರಬೇತಿ ನೀಡಿ ಚುನಾವಣಾ ಸಂಬಂಧಿತ ಹುದ್ದೆಗಳನ್ನು ನೀಡಲಾಗುತ್ತಿದೆ'' ಎಂದು ಆರೋಪಿಸಿದ್ದಾರೆ.