ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧದ ಹೋರಾಟ; ತಂದೆಯ ಅಂತ್ಯಕ್ರಿಯೆ ತ್ಯಜಿಸಿದ ಸಿಎಂ ಯೋಗಿ

|
Google Oneindia Kannada News

ಲಕ್ನೋ, ಏಪ್ರಿಲ್ 20: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಂದೆ ಆನಂದ ಸಿಂಗ್ ಬಿಸ್ಟಾ ಅವರು ಇಂದು ನಿಧನರಾಗಿದ್ದಾರೆ.

ಆದರೆ, ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಯೋಗಿ ಆದಿತ್ಯನಾಥ ತಿಳಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿರುವುದರಿಂದ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ನಿಧನ: ಯಡಿಯೂರಪ್ಪ ಸಂತಾಪಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಂದೆ ನಿಧನ: ಯಡಿಯೂರಪ್ಪ ಸಂತಾಪ

ಬೆಳಿಗ್ಗೆ ಅವರ ತಂದೆ ನಿಧನರಾದ ಸುದ್ದಿ ಬಂದಾಗ ಸಿಎಂ ಯೋಗಿ ಅವರು ಕೊರೊನಾ ಕುರಿತು ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಆದರೂ ಅವರು ಧೃತಿಗೆಡದೆ ಸಭೆ ಮುಂದುವರೆಸಿ, ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದರು.

UP CM Yogi Adityanath Not Attending His Father Funerals

ಬಳಿಕ ಪತ್ರದಲ್ಲಿ ಅವರು, 23 ಕೋಟಿ ಜನರ ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ. ಇಂತಹ ಸಂಕಟ ಸಮಯದಲ್ಲಿ ಜನರ ಜೊತೆ ಇರಬೇಕಾಗಿದೆ. ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅವರ ತತ್ವಾದರ್ಶಗಳೇ ನನ್ನ ಬದುಕಿನ ದಾರಿ ದೀಪವಾಗಿದ್ದವು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಯೋಗಿ ಅವರ ತಂದೆ ದೀರ್ಘಕಾಲದಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು. ಅವರು ಇಂದು ಬೆಳಿಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

English summary
UP CM Yogi Adityanath Not Attending His Father Funerals. Ahead of Coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X