ಮೋದಿ ಜಪ ಬಿಟ್ಟು ಯೋಗಿ ವರ್ಚಸ್ಸು ಹೆಚ್ಚಿಸಲು ಮಾಸ್ಟರ್ ಪ್ಲ್ಯಾನ್
ಲಕ್ನೋ, ಜೂನ್ 10: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಲು ಬಿಜೆಪಿ ಮುಂದಾಗಿದೆ. ಆದರೆ ಮೋದಿ ಹೆಸರನ್ನು ಹೇಳಿಕೊಂಡು ವಿಧಾನ ಚುನಾವಣೆ ನಡೆಸುವುದಕ್ಕಿಂತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವರ್ಚಸ್ಸನ್ನು ಇನ್ನಷ್ಟು ಬೆಳೆಸಲು ಬಿಜೆಪಿ ಮುಂದಾಗಿದೆ.
ಇದಕ್ಕಾಗಿ ದೆಹಲಿ ಏಜೆನ್ಸಿಯೊಂದನ್ನು ಗುತ್ತಿಗೆ ಮಾಡಿಕೊಂಡಿರುವ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ತಮ್ಮ ವರ್ಚಸ್ಸನ್ನು ಇನ್ನಷ್ಟು ಬೆಳಸಿಕೊಳ್ಳಲು ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣದ ಪ್ರತಿಧ್ವನಿ
ಮುಂದಿನ 11 ವಿಧಾನಸಭಾ ಉಪ ಚುನಾವಣೆ ಹಾಗೂ 2022ರ ವಿಧಾನಸಭಾ ಮುಖ್ಯ ಚುನಾವಣೆಯನ್ನು ಇದೇ ನಿಟ್ಟಿನಲ್ಲಿ ಎದುರಿಸಲು ಆದಿತ್ಯನಾಥ್ ಸಜ್ಜಾಗುತ್ತಿದ್ದಾರೆ.ಈ ಹಿಂದೆ ಗುಜರಾತ್ ಹಾಗೂ ಮಧ್ಯಪ್ರದೇಶದ ಸರ್ಕಾರದ ಜೊತೆ ಈ ಪಿಆರ್ ಏಜೆನ್ಸಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ.
ಹಿಂದುತ್ವಕ್ಕೆ ಹೆಸರುವಾಸಿಯಾಗಿದ್ದ ಯೋಗಿ ಆದಿತ್ಯನಾಥ್, ಆದರೆ ಶೇ.80ರಷ್ಟು ಅಭಿವೃದ್ಧಿಯಿಂದ ಹೆಸರು ಗಳಿಸಲು ಮುಂದಾಗಿದ್ದಾರೆ. ಆದಿತ್ಯನಾಥ್ ವರ್ಚಸ್ಸನ್ನೇ ಸಂಪೂರ್ಣವಾಗಿ ಬದಲಿಸಲು ನಿರ್ಧರಿಸಿದ್ದಾರೆ.
ಧರ್ಮ ರಾಜಕೀಯ ಬಿಟ್ಟು ಇನ್ನು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದಾರೆ. ಇದೀಗ ಏಜೆನ್ಸಿಯು ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ.
ಹಾಗೆಂದ ಮಾತ್ರಕ್ಕೆ ಹಿಂದುತ್ವ ಅಜೆಂಡಾ ಮರೆಯುತ್ತಾರೆ ಎಂದು ಅರ್ಥವಲ್ಲ, ಆದರೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶೇ.80ರಷ್ಟು ಅಭಿವೃದ್ಧಿ ಹಾಗೂ ಶೇ.20ರಷ್ಟು ಹಿಂದುತ್ವಕ್ಕೆ ಮಹತ್ವ ನೀಡಲಾಗುತ್ತದೆ.