ಗುಂಡಿನ ದಾಳಿ ನಡೆಸಿ ಪತ್ರಕರ್ತ ಆಶೀಶ್ ಹತ್ಯೆಗೈದ ದುಷ್ಕರ್ಮಿಗಳು
ಸಹರನ್ ಪುರ್(ಉತ್ತರಪ್ರದೇಶ), ಆಗಸ್ಟ್ 18: ಪತ್ರಕರ್ತ ಆಶೀಶ್ ಜಾನ್ವಾನಿ ಹಾಗೂ ಅವರ ಸೋದರನ ಮೇಲೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಭಾನುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆಸಿದೆ. ಈ ಗುಂಡಿನ ದಾಳಿಯಲ್ಲಿ ಆಶೀಶ್ ಹಾಗೂ ಅವರ ಸೋದರ ಇಬ್ಬರು ಮೃತಪಟ್ಟಿದ್ದಾರೆ.
Journalist Ashish Janwani and his brother shot dead by unidentified assailants in Saharanpur. Police begin investigation. pic.twitter.com/NsWtcrDhxO
— ANI UP (@ANINewsUP) August 18, 2019
ಘಟನಾ ಸ್ಥಳಕ್ಕೆ ಆಗಮಿಸಿರುವ ಸಹರನ್ ಪುರ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರ ಸ್ವಗ್ರಾಮಗೊಬ್ಬರ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ರಾಣಾ ಎಂಬಾತನ ಜೊತೆ ಜಗಳವಾಗಿದೆ. ಆಶೀಶ್ ಗೆ ಬೆದರಿಕೆ ಹಾಕಿದ್ದ ರಾಣಾನ ಕಡೆಯವರು ಇಂದು ಮನೆಗೆ ನುಗ್ಗಿ ಇಬ್ಬರನ್ನು ಹತ್ಯೆ ಮಾಡಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುಂಡಿನೇಟು ತಿಂದು, ರಕ್ತದ ಮಡುವಲ್ಲಿ ಮಲಗ್ಗಿದ್ದ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಯತ್ನ ಫಲಕಾರಿಯಾಗಲಿಲ್ಲ. ಇಬ್ಬರು ಮೃತಪಟ್ಟಿದ್ದಾರೆ.