ರೌಡಿ ವಿಕಾಸ್ ದುಬೆ ಅಂತಿಮ ಸಂಸ್ಕಾರದ ವೇಳೆ ಪತ್ನಿ ನೀಡಿದ ಹೇಳಿಕೆ
ಲಕ್ನೋ, ಜುಲೈ 11: ನಟೋರಿಯಸ್ ರೌಡಿ ವಿಕಾಸ್ ದುಬೆ ಅಂತಿಮ ಸಂಸ್ಕಾರಕ್ಕೆ ಬಂದ ಆತನ ಪತ್ನಿ ರಿಚಾ, "ತನ್ನ ಪತಿಗೆ ಸರಿಯಾಗಿದ್ದೇ ಆಗಿದೆ" ಎಂದು ಹೇಳಿದ್ದಾರೆ.
Recommended Video
ಮಾಧ್ಯಮದವರು ಕೇಳಿದ ಪ್ರಶ್ನೆಗೆ "ನನ್ನ ಪತಿ ಮಾಡುತ್ತಿದ್ದ ಕೆಲಸ ಖಂಡಿತ ತಪ್ಪಾಗಿತ್ತು. ಹಾಗಾಗಿ, ಜೀವನದಲ್ಲಿ ಈ ದುರಾದೃಷ್ಟಕ್ಕೆ ನನ್ನ ಪತಿ ಸಂಪೂರ್ಣ ಅರ್ಹರಾಗಿದ್ದಾರೆ"ಎಂದು ವಿಕಾಸ್ ದುಬೆ ಪತ್ನಿ ರಿಚಾ ಹೇಳಿದ್ದಾರೆ.
ಯುಪಿ ರಾಜಕೀಯ ರಕ್ತ ಚರಿತ್ರೆ, ಯೋಗಿ ಎನ್ಕೌಂಟರ್ ಮ್ಯಾನ್!
ಕಾನ್ಪುರದ ಭೈರೋಗಾಟ್ ರುದ್ರಭೂಮಿಯಲ್ಲಿ ವಿಕಾಸ್ ದುಬೆ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ನಂತರ ರಿಚಾ ಈ ಮೇಲಿನ ಮಾತನ್ನು ಹೇಳಿದ್ದಾರೆ. ಮಾಧ್ಯಮದ ಪ್ರತಿನಿಧಿಗಳ ಮೇಲೆ ಸಿಟ್ಟಾದ ರಿಚಾ, "ನನ್ನ ಪತಿಯ ಎನ್ಕೌಂಟರ್ ಆಗಲು ನೀವೇ ಕಾರಣ. ಮೊದಲು ಇಲ್ಲಿಂದ ಹೋಗಿ" ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
"ವಿಕಾಸ್ ದುಬೆಯ ಅಂತಿಮ ಕ್ರಿಯೆಯನ್ನು ಆತನ ಭಾವ ದಿನೇಶ್ ತಿವಾರಿ ನಡೆಸಿದರು. ಆ ವೇಳೆ ದುಬೆಯ ಪತ್ನಿ, ಮಗ ಹಾಜರಿದ್ದರು" ಎಂದು ಸುಪರಿಡೆಂಟ್ ಆಫ್ ಪೊಲೀಸ್ (ಗ್ರಾಮೀಣ) ಬ್ರಿಜೇಶ್ ಶ್ರೀವಾಸ್ತವ್ ಹೇಳಿದ್ದಾರೆ. ಅ ವೇಳೆ, ರುದ್ರಭೂಮಿಯಲ್ಲಿ ಭಾರೀ ಪೊಲೀಸ್ ಬಂದೋಸ್ತ್ ನೀಡಲಾಗಿತ್ತು.
ವಿಕಾಸ್ ದುಬೆಯದ್ದು ಫೇಕ್ ಎನ್ಕೌಂಟರ್ ಎಂದು ವಿರೋಧ ಪಕ್ಷದವರು ಕಿಡಿಕಾರಿದ್ದರು. "ಅಸಲಿಗೆ ವಿಕಾಸ್ ದುಬೆಯಿದ್ದ ಕಾರ್ ಪಲ್ಟಿಯಾಗಿಲ್ಲ. ಕಾರು ಪಲ್ಟಿಯಾಗಿಸಿ ಯೋಗಿ ಆದಿತ್ಯನಾಥ್ ಸರಕಾರವನ್ನು ಉಳಿಸಿಕೊಳ್ಳಲಾಯಿತು"ಎಂದು ಎಸ್ಪಿ ಮುಖಂಡ, ಮಾಜಿ ಸಿಎಂ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದರು.
ವಿಕಾಸ್ ದುಬೆ ಕಾರ್ ಪಲ್ಟಿ ಆಗಿದ್ದರಿಂದ ಯೋಗಿ ಸರಕಾರ ಬಚಾವ್ ಆಯಿತು!
ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳ ದೇವಸ್ಥಾನದಲ್ಲಿದ್ದ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದರು. ದುಬೆ ತೆರಳುತ್ತಿದ್ದ ಎಸ್ಟಿಎಫ್ ಕಾರು ಪಲ್ಟಿ ಹೊಡೆದಾಗ, ಆ ಸಂದರ್ಭದಲ್ಲಿ ಪೊಲೀಸರ ಆಯುಧಗಳನ್ನು ತೆಗೆದುಕೊಂಡು ಬೆದರಿಸಿ ಓಡಿ ಹೋಗಲು ಪ್ರಯತ್ನಿಸಿದಾಗ ದುಬೆಯನ್ನು ಎನ್ಕೌಂಟರ್ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.