ಪೌರತ್ವ ಕಾಯ್ದೆ ವಿರೋಧಿ ಹೋರಾಟ: ಮೃತರ ಮನೆಗೆ ಪ್ರಿಯಾಂಕಾ ವಾದ್ರಾ
ಲಕ್ನೋ,
ಡಿಸೆಂಬರ್.22:
ಪೌರತ್ವ
ತಿದ್ದುಪಡಿ
ಕಾಯ್ದೆ
ವಿರೋಧಿ
ಹೋರಾಟದಲ್ಲಿ
ಮೃತಪಟ್ಟ
ಪ್ರತಿಭಟನಾಕಾರರ
ನಿವಾಸಕ್ಕೆ
ಕಾಂಗ್ರೆಸ್
ಜನರಲ್
ಸೆಕ್ರಟರಿ
ಆಗಿರುವ
ಪ್ರಿಯಾಂಕಾ
ವಾದ್ರಾ
ಭೇಟಿ
ನೀಡಿದರು.
ಮೃತರ
ಕುಟುಂಬಕ್ಕೆ
ಸಾಂತ್ವನ
ಹೇಳಿದ
ಕಾಂಗ್ರೆಸ್
ನಾಯಕಿ,
ಕೇಂದ್ರ
ಸರ್ಕಾರದ
ವಿರುದ್ಧ
ಕಿಡಿ
ಕಾರಿದರು.
ಉತ್ತರ
ಪ್ರದೇಶದ
ಬಿಜ್ನೂರಿನಲ್ಲಿ
ಮೃತ
ಸುಲೇಮಾನ್
ನಿವಾಸಕ್ಕೆ
ಭೇಟಿ
ನೀಡಿದ
ಪ್ರಿಯಾಂಕಾ
ವಾದ್ರಾ,
ಮೃತನ
ಸಂಬಂಧಿಕರಿಗೆ
ಸಾಂತ್ವನ
ಹೇಳಿದರು.
ಕಳೆದ
ಡಿಸೆಂಬರ್.20ರಂದು
ಉತ್ತರ
ಪ್ರದೇಶದಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ವಿರುದ್ಧ
ಉಗ್ರ
ಪ್ರತಿಭಟನೆ
ನಡೆಯಿತು.
ಪೌರತ್ವಕಾಯ್ದೆ;
ಅಮಿತ್
ಶಾ
ರಾಜ್ಯಕ್ಕೆ
ಕೊಟ್ಟ
ಸೂಚನೆ
ಏನು?
ಕೇಂದ್ರ
ಸರ್ಕಾರದ
ವಿರುದ್ಧ
ನಡೆದ
ಪ್ರತಿಭಟನೆಯಲ್ಲಿ
ಉತ್ತರಪ್ರದೇಶದಲ್ಲಿ
ಇದುವರೆಗೂ
15ಕ್ಕೂ
ಹೆಚ್ಚು
ಮಂದಿ
ಮೃತಪಟ್ಟಿದ್ದಾರೆ.
ಎರಡು
ದಿನಗಳ
ಹಿಂದೆ
ಎಂದರೆ,
ಶನಿವಾರ
ನಡೆದ
ಘರ್ಷಣೆಯಲ್ಲಿ
ಸುಲೇಮಾನ್
ಪ್ರಾಣ
ಬಿಟ್ಟಿದ್ದರು.
288ಕ್ಕೂ
ಅಧಿಕ
ಮಂದಿ
ಪೊಲೀಸರು
ಗಾಯಗೊಂಡಿದ್ದಾರೆ.
ಕಳೆದ ಒಂದು ವಾರದಿಂದಲೂ ಉತ್ತರ ಪ್ರದೇಶದ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಯುತ್ತಿದೆ. ಹಲವೆಡೆ ಪೊಲೀಸರ ಮೇಲೆಯೇ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿಪ್ರಹಾರ, ಅಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.