ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆಯ ವೇಳೆ ಮೋದಿಗೆ ಸಿಗುತ್ತಿರುವ ಹೊಸಹೊಸ 'ಬಿರುದು'ಗಳು

|
Google Oneindia Kannada News

Recommended Video

ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿಗೆ ಸಿಗುತ್ತಿದೆ ಹೊಸ ಹೊಸ ಬಿರುದುಗಳು | Oneindia Kannada

ವಾರಣಾಸಿ, ಮೇ 8: ಪ್ರಧಾನಮಂತ್ರಿಯನ್ನು ಟೀಕಿಸುವ ಬರದಲ್ಲಿ ವಿಪಕ್ಷಗಳು ನರೇಂದ್ರ ಮೋದಿಗೆ ಹೊಸಹೊಸ ಹೆಸರನ್ನು ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯ ನಂತರ, ಈಗ ಕಾಂಗ್ರೆಸ್ಸಿನ ಇನ್ನೋರ್ವ ಮುಖಂಡ ಸಂಜಯ್ ನಿರುಪಮ್ ಸರದಿ.

ಮಂಗಳವಾರ ಚುನಾವಣಾ ಸಭೆಯಲ್ಲಿ ಪ್ರಧಾನಿಯವರನ್ನು 'ದುರ್ಯೋಧನ'ನಿಗೆ ಹೋಲಿಸಿದ್ದ ಪ್ರಿಯಾಂಕಾ, ದುರ್ಯೋಧನನಿಗೆ ತುಂಬಾ ಗರ್ವವಿತ್ತು. ಆ ಗರ್ವವೇ ಆತನ ಸೋಲಿಗೆ ಕಾರಣವಾಯಿತು ಎಂದು ಮೋದಿಯನ್ನು ಟೀಕಿಸಿದ್ದರು.

ಮೋದಿಯನ್ನು ದುರ್ಯೋಧನನಿಗೆ ಹೋಲಿಸಿದ ಪ್ರಿಯಾಂಕಾ ಗಾಂಧಿಮೋದಿಯನ್ನು ದುರ್ಯೋಧನನಿಗೆ ಹೋಲಿಸಿದ ಪ್ರಿಯಾಂಕಾ ಗಾಂಧಿ

ವಾರಣಾಸಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡುತ್ತಿದ್ದ ಸಂಜಯ್, ಮೋದಿಯನ್ನು ಮೊಘಲ್ ಅರಸ 'ಔರಂಗಜೇಬ್' ಗೆ ಹೋಲಿಸಿದ್ದಾರೆ. ಮೋದಿ, 'ಮಾಡರ್ನ್ ಡೇ ಅವತಾರ್ ಆಫ್ ಔರಂಗಜೇಬ್ ಇನ್ ವಾರಣಾಸಿ' ಎಂದು ಲೇವಡಿ ಮಾಡಿದ್ದಾರೆ.

PM Modi modern-day avatar of Aurangzeb: Congress Sanjay Nirupam

ಕಾಶೀ ವಿಶ್ವನಾಥ ಕಾರಿಡಾರ್ ಗಾಗಿ ಪುರಾಣಪ್ರಸಿದ್ದ ದೇವಾಲಯ ನಗರಿ ವಾರಣಾಸಿಯಲ್ಲಿ ಹಲವು ದೇವಾಲಯಗಳನ್ನು ನೆಲಸಮ ಮಾಡಲಾಗುತ್ತಿದೆ. ಹದಿನೇಳನೇ ಶತಮಾನದ ಮೊಘಲ್ ರಾಜ ಔರಂಗಜೇಬ್ ಕೂಡಾ, ದೇವಾಲಯಗಳನ್ನು ನೆಲಸಮ ಮಾಡಿದ್ದಕ್ಕೆ ಕುಖ್ಯಾತಿ ಪಡೆದಿದ್ದ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

ವಾರಣಾಸಿಯ ಗತವೈಭವವನ್ನು ಮರುಕಳಿಸಲು ರೂಪಾಯಿ 550 ಶುಲ್ಕವನ್ನು ವಿಧಿಸಲಾಗುತ್ತಿದೆ. ಔರಂಗಜೇಬ್ ಮಾಡಲಾಗದ ಸಾಧನೆಯನ್ನು (ದೇವಾಲಯ ನೆಲಸಮ) ಈ ಶತಮಾನದಲ್ಲಿ ಮೋದಿ ಮಾಡಿ ಮುಗಿಸುತ್ತಿದ್ದಾರೆಂದು ಸಂಜಯ್ ನಿರುಪಮ್, ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರೈತರ ಸಮಸ್ಯೆಗಳನ್ನು ಆಲಿಸಲು ಪ್ರಧಾನಿಗೆ ಸಮಯವಿಲ್ಲ. ಆದರೆ, ನನ್ನ ಕುಟುಂಬದ ಹುತಾತ್ಮರ ಹೆಸರನ್ನು ಹೇಳಿಕೊಂಡು ಮತ ಕೇಳಲು ಅವರಿಗೆ ಸಮಯವಿದೆ. ಗರ್ವದಿಂದು ಬೀಗುತ್ತಿದ್ದ ದುರ್ಯೋಧನನ ಕಥೆ ಕೊನೆಗೆ ಏನಾಯಿತು ಎಂದು ಪ್ರಿಯಾಂಕಾ, ಅಂಬಾಲದ ಸಾರ್ವಜನಿಕ ಸಭೆಯಲ್ಲಿ ಮೋದಿಯನ್ನು ಟೀಕಿಸಿದ್ದರು. (ಚಿತ್ರ: ಪಿಟಿಐ)

English summary
Launching a fresh attack on Prime Minister Narendra Modi, Maharasthra Congress Leader Sanjay Nirupam called him 'modern-day avatar of Aurangzeb'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X