ಪತ್ನಿ, ಪಕ್ಷ ಧರ್ಮಸಂಕಟದಲ್ಲಿ ಶತ್ರುಘ್ನ ಸಿನ್ಹಾ
ಲಕ್ನೋ, ಏ.19:ಪ್ರತಿಷ್ಠಿತ ಲಕ್ನೋ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿರುದ್ಧ ಶಾಟ್ಗನ್ ಖ್ಯಾತಿಯ ಶತ್ರುಘ್ನ ಸಿನ್ಹಾ ಪತ್ನಿ ಪೂನಮ್ ಸಿನ್ಹಾ ಸ್ಪರ್ಧಿಸಿದ್ದಾರೆ.
ಆಶ್ಚರ್ಯಕರ ಬೆಳವಣಿಗೆಯಲ್ಲಿ ಆಚಾರ್ಯ ಪ್ರಮೋದ್ಗೆ ಕಾಂಗ್ರೆಸ್ ಟಿಕೆಟ್ ದೊರೆತಿದೆ. ಶತ್ರುಘ್ನ ಸಿನ್ಹಾ ಪತ್ನಿ ಸಮಾಜವಾದಿಯಿಂದ ಸ್ಪರ್ಧಿಸಿರುವುದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹಾಕಿರುವುದು ಶತ್ರುಘ್ನ ಸಿನ್ಹಾಗೆ ಗೊಂದಲ ಮೂಡಿಸಿದೆ.
ಮೈತ್ರಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪತ್ನಿ ಪೂನಮ್ ಲಕ್ನೋನಲ್ಲಿ ನಾಮಪತ್ರ ಸಲ್ಲಿಕೆ
ಪಕ್ಷ ಹಾಗೂ ಪತ್ನಿಯಲ್ಲಿ ಯಾರ ಪರ ನಿಲ್ಲಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಈ ನಡುವೆ ಗುರುವಾರ ನಡೆದ ರೋಡ್ ಶೋನಲ್ಲಿ ಪತ್ನಿ ಪರ ಪ್ರಚಾರ ಡೆಸಿ ಶತ್ರುಘ್ನ ಸಿನ್ಹಾ ಗಮನ ಸೆಳೆದಿದ್ದಾರೆ.
ಇದನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ಅಭ್ಯರ್ಥಿ ಆಚಾರ್ಯ ಪ್ರಮೋದ್ ಪಕ್ಷ ಹಾಗೂ ಪತ್ನಿ ಇದರಲ್ಲಿ ಯಾವ ಧರ್ಮ ಪಾಲಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶತ್ರುಘ್ನ ಸಿನ್ಹಾ ಪಕ್ಷ ನನಗೆ ಟಿಕೆಟ್ ನೀಡಿದೆ. ಆಭಾರಿಯಾಗಿದ್ದೇನೆ, ಆದರೆ ನನ್ನ ಪತ್ನಿ ಚುನಾವಣೆಗೆ ನಿಂತಿದ್ದಾರೆ, ನನಗೆ ಕುಟುಂಬವೇ ಮೊದಲು ಎಂದು ಹೇಳಿಕೊಂಡಿದ್ದಾರೆ.
ಮೋದಿಯವರಿಗೆ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿಲ್ಲ:ಶತ್ರುಘ್ನ ಸಿನ್ಹಾ
ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಶತ್ರುಘ್ನ ಸಿನ್ಹಾ ಬಿಹಾರದ ಪಟ್ನಾ ಸಾಹೀಬ್ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾರೆ.