ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆದ ಪ್ರಧಾನಿ ಮೋದಿ

|
Google Oneindia Kannada News

ವಾರಣಾಸಿ, ಜನವರಿ 22: ವಾರಣಾಸಿಯಲ್ಲಿ 'ಪ್ರವಾಸಿ ಭಾರತ್ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನಪಿಸಿಕೊಂಡು ಸಂತಾಪ ಸೂಚಿಸಿದ್ದಾರೆ.

ತುಮಕೂರಿಗೆ ಜ.22ರಂದು ಮೋದಿ ಆಗಮಿಸುವುದು ಅನುಮಾನತುಮಕೂರಿಗೆ ಜ.22ರಂದು ಮೋದಿ ಆಗಮಿಸುವುದು ಅನುಮಾನ

ಭಾಷಣ ಆರಂಭಿಸಿದ ಕೂಡಲೇ ಸಿದ್ದಗಂಗಾ ಶ್ರೀಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆ ಸಂತಾಪ ಸೂಚಿಸುತ್ತೇನೆ ಎಂದರು.

ಕೋಟ್ಯಂತರ ಭಕ್ತರ ಶೋಕದಲ್ಲಿ ನಾನೂ ಭಾಗಿ : ಪ್ರಧಾನಿ ಮೋದಿ ಕಂಬನಿಕೋಟ್ಯಂತರ ಭಕ್ತರ ಶೋಕದಲ್ಲಿ ನಾನೂ ಭಾಗಿ : ಪ್ರಧಾನಿ ಮೋದಿ ಕಂಬನಿ

Narendra Modi remembered Siddaganga Seer in Pravasi Bharat Divas in Varanasi

ಸಿದ್ದಗಂಗಾ ಮಠಕ್ಕೆ ಹೋದಾಗ ಅವರು ನನ್ನನ್ನು ಮಗನಂತೆ ಕಾಣುತ್ತಿದ್ದರು, ಸ್ನೇಹದಿಂದ ಇರುತ್ತಿದ್ದರು, ಅನೇಕ ಬಾರಿ ಅವರ ಆಶೀರ್ವಾದ ಪಡೆವ ಪುಣ್ಯ ನನಗೆ ಒದಗಿತ್ತು ಎಂದು ಮೋದಿ ಹೇಳಿದರು.

ಅಂತಹಾ ಮಹಾನ್ ಸಂತ, ಮಹಾ ಋಷಿ ಅವರ ಅಗಲಿಕೆ ನಮ್ಮೆಲ್ಲರಿಗೂ ದುಖಃ ತಂದಿದೆ ಎಂದ ಮೋದಿ, ಮಾನವ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆಯನ್ನು ದೇಶ ನೆನಸುತ್ತದೆ ಎಂದರು.

ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!ಪಶ್ಚಿಮ ಬಂಗಾಳದಲ್ಲಿ 3 ರ‍್ಯಾಲಿಯಲ್ಲಿ ಮೋದಿ: ನಡುಗುತ್ತಾರಾ ದೀದಿ!

Narendra Modi remembered Siddaganga Seer in Pravasi Bharat Divas in Varanasi

ಅಗಲಿದ ಮಹಾನ್ ಚೇತನಕ್ಕೆ ಆದರಪೂರ್ವಕವಾಗಿ ಅವರಿಗೆ ನಮಿಸುತ್ತೇವೆ ಎಂದು ಮೋದಿ ಅವರು ಹೇಳಿದರು. ಮೋದಿ ಅವರು ಇಂದು ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುತ್ತಿಲ್ಲ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂತಿಮ ದರ್ಶನಕ್ಕೆ ಬರುವವರಿದ್ದಾರೆ.

English summary
PM Narendra Modi remembered Siddaganga Seer in 'Pravasi Bharathiya Divas' program in Varanasi. He said his service towards people and society will be always remembered by Indians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X