ನಡುರಸ್ತೆಯಲ್ಲಿ ತನ್ನ ಕಾರಿಗೆ ಬೆಂಕಿ ಹೊತ್ತಿಸಿ ಆತಂಕ ಸೃಷ್ಟಿಸಿದ ವ್ಯಕ್ತಿ
ಮಥುರಾ, ಸೆಪ್ಟೆಂಬರ್ 26: ವ್ಯಕ್ತಿಯೊಬ್ಬ ನಡು ರೆಸ್ತೆಯಲ್ಲಿ ತನ್ನ ಕಾರಿಗೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ ಘಟನೆ ಮಥುರಾದಲ್ಲಿ ನಡೆದಿದೆ.
ವ್ಯಕ್ತಿಯನ್ನು ಶುಭಂ ಚೌದರಿ ಎಂದು ಗುರುತಿಸಲಾಗಿದೆ. ಆತ ಹಾಗೂ ಆತನೊಂದಿಗಿದ್ದ ಮಹಿಳೆ ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಚಿತ್ತೂರು ಬಳಿ ಕಾರಿಗೆ ಬೆಂಕಿ: ಬೆಂಗಳೂರಿನ ಐವರು ಸಜೀವ ದಹನ
ಕಾರಿಗೆ ಬೆಂಕಿ ಹಚ್ಚಿದ್ದಷ್ಟೇ ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳೀಯರು ಆತಂಕಪಡುವಂತಹ ಸ್ಥಿತಿ ನಿರ್ಮಾಣ ಮಾಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆತನನ್ನು ಪೊಲೀಸರು ಹಿಡಿಯಲು ಬಂದಾಗ ಹೆದರಿ ತನ್ನ ಕಾರಿಗೆ ಬೆಂಕಿ ಹಚ್ಚಿದ್ದಾನೆ.ಆತನ ಜೊತೆಗಿದ್ದ ಮಹಿಳೆಯನ್ನು ಆಕೆ ತನ್ನ ಹೆಂಡತಿ ಎಂದು ಒಮ್ಮೆ ಹೇಳಿದರೆ ಇನ್ನೊಮ್ಮೆ ಸಹೋದರಿ ಎಂದು ಮತ್ತೊಮ್ಮೆ ಆಕೆ ಬ್ಯುಜಿನೆಸ್ ಪಾರ್ಟ್ನರ್ ಎಂದು ಹೇಳಿದ್ದಾನೆ.
ಹಾಗೆಯೇ ನವೆಂಬರ್ನಲ್ಲಿ ತನ್ನ ಮದುವೆ ನಿಶ್ಚಯವಾಗಿತ್ತು, ಆದರೆ ಯುವತಿ ಜೊತೆ ಸಂಬಂಧ ಹೊಂದಿರುವ ಕಾರಣ ಆಕೆ ಮದುವೆಗೆ ನಿರಾಕರಿಸಿದಳು ಎನ್ನುವ ಹೇಳಿಕೆಯನ್ನೂ ಕೂಡ ಆತ ನೀಡಿದ್ದಾನೆ.
ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ರಿಫೈನರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ತನಿಖೆ ಕೈಗೊಳ್ಳಬೇಕಿದೆ ಆಗ ಮಾತ್ರ ಆಕೆ ಆತನ ಸಹೋದರಿಯೇ ಅಥವಾ ಪತ್ನಿಯೇ ಎಂಬ ಮಾಹಿತಿ ಹೊರಬೀಳಲಿದೆ.
ಆದರೆ ಸ್ಥಳೀಯರು ಹೇಳುವ ಪ್ರಕಾರ ನವೆಂಬರ್ನಲ್ಲಿ ಆತನ ಮದುವೆ ನಿಶ್ಚಯವಾಗಿತ್ತು, ಆದರೆ ಬೇರೆ ಯುವತಿಯೊಂದಿಗೆ ಸಂಬಂಧ ಹೊಂದಿರುವ ಕಾರಣ ಆಕೆ ಮದುವೆ ನಿರಾಕರಿಸಿದ್ದಳು ಇದಾದ ಬಳಿಕ ಆತ ಮಾನಸಿಕ ಆಘಾತಕ್ಕೊಳಗಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.