ಗಡಿಯಲ್ಲಿ ಭಾರತ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ನೇಪಾಳ ಪೊಲೀಸರು
ಪಿಲಿಭಿಟ್, ಮಾರ್ಚ್ 05: ಭಾರತ, ನೇಪಾಳ ಗಡಿಯಲ್ಲಿ ನೇಪಾಳ ಪೊಲೀಸರು ಭಾರತದ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ನೇಪಾಳ ಪೊಲೀಸರೊಂದಿಗೆ ವಾಗ್ವಾದ ನಡೆದ ಪರಿಣಾಮ ಭಾರತ-ನೇಪಾಳ ಗಡಿಯಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನೇಪಾಳ, ಭೂತಾನ್ ಗಡಿ ಕಾವಲುಪಡೆಗೆ ಎಸ್ಎಸ್ಬಿ ಬೆಟಾಲಿಯನ್ ಬಲ
ನೇಪಾಳಕ್ಕೆ ಹೋಗಿದ್ದ ಮೂವರು ಅಲ್ಲಿನ ಪೊಲೀಸರೊಂದಿಗೆ ಯಾವುದೋ ಕಾರಣಕ್ಕಾಗಿ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಿದ್ದರಿಂದ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮತ್ತೊಬ್ಬರು ಗಡಿ ದಾಟಿ ಭಾರತದ ಕಡೆಗೆ ಬಂದು ತಮ್ಮನ್ನು ಕಾಪಾಡಿಕೊಂಡರು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಪಿತಿಬಿತ್ ಪೊಲೀಸ್ ಸೂಪರಿಂಟೆಂಡೆಂಟ್ ಜೈ ಪ್ರಕಾಶ್ ತಿಳಿಸಿದ್ದಾರೆ.
ಈ ಘಟನೆ ಬಳಿಕ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಪೊಲೀಸರು ನಿಗಾ ವಹಿಸಿದ್ದಾರೆ. ಮೃತರನ್ನು 26 ವರ್ಷದ ಗೋವಿಂದ ಎಂದು ಗುರುತಿಸಲಾಗಿದ್ದು ಅವರು ಮತ್ತಿಬ್ಬರಾದ ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಎಂಬುವವರೊಂದಿಗೆ ನೇಪಾಳಕ್ಕೆ ಹೋಗಿದ್ದರು.