ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹತ್ರಾಸ್ ಸಂತ್ರಸ್ತೆ ವಾರದ ಬಳಿಕ ಅತ್ಯಾಚಾರ ನಡೆದಿದ್ದ ವಿಷಯ ತಿಳಿಸಿದ್ದಳು'

|
Google Oneindia Kannada News

ಲಕ್ನೋ, ಅಕ್ಟೋಬರ್ 02: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಘಟನೆ ನಡೆದು ಒಂದು ವಾರದ ಬಳಿಕ ಅತ್ಯಾಚಾರ ನಡೆದಿರುವ ವಿಷಯವನ್ನು ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

20 ವರ್ಷದ ದಲಿತ ಯುವತಿಯನ್ನು ಹೊಲದಿಂದ ಅಪಹರಿಸಿ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅತ್ಯಾಚಾರ ನಡೆದು ಒಂದು ವಾರದ ಬಳಿಕ ವಿಷಯವನ್ನು ಆಕೆ ಹೇಳಿದ್ದಳು.

ಹತ್ರಾಸ್ ಅತ್ಯಾಚಾರ ಪ್ರಕರಣದ ಹತ್ತಾರು ಮುಖಗಳು: ಪೊಲೀಸ್, ಕುಟುಂಬ, ರಾಜಕೀಯಹತ್ರಾಸ್ ಅತ್ಯಾಚಾರ ಪ್ರಕರಣದ ಹತ್ತಾರು ಮುಖಗಳು: ಪೊಲೀಸ್, ಕುಟುಂಬ, ರಾಜಕೀಯ

ಆದರೆ ಗುರುವಾರ ಬಂದಿರುವ ಫಾರೆನ್ಸಿಕ್ ವರದಿ ಆಕೆಯ ಮೇಲೆ ಯಾವುದೇ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳುತ್ತದೆ. ಮಹಿಳೆಯನ್ನು ಅಂತಿಮವಾಗಿ ಪೋಷಕರಿಗೆ ನೀಡಲು ಅನುವು ಮಾಡಿಕೊಡದೆ, ಮಧ್ಯರಾತ್ರಿ 2.30ರವೇಳೆಗೆ ಅಂತ್ಯಕ್ರಿಯೆ ನೆರವೇರಸಿದ್ದರ ಕುರಿತು ಸಾಕಷ್ಟು ಅನುಮಾನಗಳು ಹುಟ್ಟಿವೆ.

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳುವುದೇನು?

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳುವುದೇನು?

ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಾತನಾಡಿ, ಮಹಿಳೆಯ ದೂರಿನ ಮೇರೆಗೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಆದರೆ ಫಾರೆನ್ಸಿಕ್ ವರದಿ ಪ್ರಕಾರ ಮಾದರಿಯಲ್ಲಿ ಯಾವುದೇ ಸ್ಪರ್ಮ್ ಇರಲಿಲ್ಲ ಎಂದು ಹೇಳಿದೆ.

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವುಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ನಾವು ಸಂತ್ರಸ್ತೆಯ ಮಾತನ್ನು ನಂಬುತ್ತೇವೆ

ನಾವು ಸಂತ್ರಸ್ತೆಯ ಮಾತನ್ನು ನಂಬುತ್ತೇವೆ

ನಾವು ಮೊದಲ ದಿನದಿಂದಲೇ ಸಂತ್ರಸ್ತೆಯ ಮಾತನ್ನು ನಂಬಿದ್ದೇವೆ, ಸರಿಯಾದ ಸೆಕ್ಷನ್‌ಗಳಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಘಟನೆ ನಡೆದು ಒಂದು ಗಂಟೆ ಬಳಿಕ ಸಂತ್ರಸ್ತೆ ಆಕೆಯ ಸಹೋದರನ ಜೊತೆ ಪೊಲೀಸ್ ಠಾಣೆಗೆ ಬಂದಿದ್ದಳು. ಬಳಿಕ ಪ್ರಕರಣ ದಾಖಲಿಸಿಕೊಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆ

ಅಲಿಗಢ ಆಸ್ಪತ್ರೆಗೆ ರವಾನೆ

ಅಲಿಗಢ ಆಸ್ಪತ್ರೆಗೆ ರವಾನೆ

ಬಳಿಕ ಅಲಿಗಢ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಯಿತು. ಅಂದು ಸೆಪ್ಟೆಂಬರ್ 22 ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರ ನಡೆದಿದ್ದ ಬಗ್ಗೆ ಮಾಹಿತಿ ನೀಡಿದ್ದಳು. ತಕ್ಷಣವೇ ಪ್ರಕರಣ ದಾಖಲಿಸಿ ಆ ನಾಲ್ವರನ್ನು ಬಂಧಿಸಿದೆವು ಎಂದು ಪೊಲೀಸರು ಹೇಳಿದ್ದಾರೆ.

ಮಾದರಿಗಳನ್ನು ತೆಗೆದುಕೊಂಡರು

ಮಾದರಿಗಳನ್ನು ತೆಗೆದುಕೊಂಡರು

ಸೆಪ್ಟೆಂಬರ್ 25 ರಂದು ಫಾರೆನ್ಸಿಕ್ ಮಾದರಿಯನ್ನು ತೆಗೆದುಕೊಳ್ಳಲಾಯಿತು.
ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಘಟನೆ ನಡೆದು ಒಂದು ವಾರದ ಬಳಿಕ ಅತ್ಯಾಚಾರ ನಡೆದಿರುವ ವಿಷಯವನ್ನು ತಿಳಿಸಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
20 ವರ್ಷದ ದಲಿತ ಯುವತಿಯನ್ನು ಹೊಲದಿಂದ ಅಪಹರಿಸಿ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅತ್ಯಾಚಾರ ನಡೆದು ಒಂದು ವಾರದ ಬಳಿಕ ವಿಷಯವನ್ನು ಆಕೆ ಹೇಳಿದ್ದಳು.
ಆದರೆ ಗುರುವಾರ ಬಂದಿರುವ ಫಾರೆನ್ಸಿಕ್ ವರದಿ ಆಕೆಯ ಮೇಲೆ ಯಾವುದೇ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳುತ್ತದೆ. ಮಾದರಿಯಲ್ಲಿ ಯಾವುದೇ ಸ್ಪರ್ಮ್ ಪತ್ತೆಯಾಗದ ಕಾರಣ ಇನ್ಯಾವ್ಯಾವ ದಾಖಲೆಗಳಿವೆಯೋ ಎಲ್ಲವನ್ನೂ ಪರೀಕ್ಷೆ ಮಾಡಲಾಯಿತು. ಆದರೆ ಅತ್ಯಾಚಾರವಾಗಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ.

ಅತ್ಯಾಚಾರಕ್ಕೆ ಸಾಕ್ಷಿ ಇಲ್ಲ, ನಾಲಿಗೆ ತುಂಡುಮಾಡಿಲ್ಲ: ಹತ್ರಾಸ್ ಪೊಲೀಸರ ಹೇಳಿಕೆಅತ್ಯಾಚಾರಕ್ಕೆ ಸಾಕ್ಷಿ ಇಲ್ಲ, ನಾಲಿಗೆ ತುಂಡುಮಾಡಿಲ್ಲ: ಹತ್ರಾಸ್ ಪೊಲೀಸರ ಹೇಳಿಕೆ

English summary
The 20-year-old Dalit woman who died days after being savagely assaulted by a group of men, triggering nationwide anger and protests, spoke about being raped for the first time more than a week after the incident, a senior Uttar Pradesh police officer said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X