ಜ್ಞಾನವಾಪಿ ಪ್ರಕರಣ: 'ಶಿವಲಿಂಗ' ಬಗ್ಗೆ ಪ್ರಶ್ನಿಸಿದ ಮುಸ್ಲಿಂ ಅರ್ಜಿದಾರರು
ವಾರಣಾಸಿ ಮೇ 26: ಕಳೆದ ಕೆಲವು ವಾರಗಳಿಂದ ಸಾಕಷ್ಟು ವಿವಾದವನ್ನು ಹುಟ್ಟುಹಾಕಿರುವ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಾರಣಾಸಿ ನ್ಯಾಯಾಲಯವು ಇಂದು ವಿಚಾರಣೆ ನಡೆಸಿತು. ಇಲ್ಲಿ ಮುಸ್ಲಿಂ ಅರ್ಜಿದಾರರು ಮಸೀದಿಯ ವಿವಾದದ ಬಗ್ಗೆ ಹಿಂದೂ ಕಡೆಯಿಂದ ಮಾಡಿದ ವಾದಗಳನ್ನು ಪ್ರಶ್ನಿಸಿದ್ದಾರೆ.
ಗುರುವಾರ ಮುಸ್ಲಿಂ ಅರ್ಜಿದಾರರು ಜ್ಞಾನವಾಪಿ ವಿವಾದ ಪ್ರಕರಣದಲ್ಲಿ ಹಿಂದೂ ಕಡೆಯ ಮನವಿಯನ್ನು ಪ್ರಶ್ನಿಸಿದರು. ಸಮೀಕ್ಷಾ ವರದಿಯನ್ನು ಸಲ್ಲಿಸಿದ ನಂತರ ಸಂಕೀರ್ಣದೊಳಗೆ 'ಶಿವಲಿಂಗ' ಇದೆ ಎಂಬ ಹೇಳಿಕೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಶ್ನಿಸಿದರು.
ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶ ಡಾ.ಎ.ಕೆ. ವಿಶ್ವೇಶ ಅವರ ಮುಂದೆ ಮುಸ್ಲಿಂ ವಕೀಲರು ಪೂಜಾ ಸ್ಥಳಗಳ ಕಾಯಿದೆ 1991 ಅನ್ನು ಉಲ್ಲೇಖಿಸಿ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಜನರನ್ನು ಗೊಂದಲಗೊಳಿಸಲು ಮಸೀದಿಯೊಳಗೆ ಶಿವಲಿಂಗವಿದೆ ಎಂಬ ಹೇಳಿಕೆಯನ್ನು ನೀಡಲಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಮುಸ್ಲಿಂ ಪರ ವಕೀಲ ಅಭಯ್ ಯಾದವ್, ಮಸೀದಿಯೊಳಗೆ 'ಶಿವಲಿಂಗ' ಪತ್ತೆಯಾಗಿದೆ ಎಂಬ ವದಂತಿಗಳನ್ನು ಗೊಂದಲ ಸೃಷ್ಟಿಸಲು ಉದ್ದೇಶಿಸಲಾಗುತ್ತಿದೆ ಎಂದು ಹೇಳಿದ್ದಾರೆ. 'ಶಿವಲಿಂಗ' ಇದೆ ಎಂಬ ಬಗ್ಗೆ ಇನ್ನೂ ನ್ಯಾಯಾಲಯ ತೀರ್ಪು ನೀಡಿಲ್ಲ ಮತ್ತು ನ್ಯಾಯಾಲಯವು ಇಂತಹ ವದಂತಿಗಳಿಗೆ ಕೊನೆ ಹಾಡಬೇಕು ಎಂದು ಅವರು ಪ್ರತಿಪಾದಿಸಿದರು.
ಜೊತೆಗೆ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಜೈನ್, ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಶಿವಲಿಂಗ'ವನ್ನು ಕಾರಂಜಿಯಂತೆ ಕಾಣುವಂತೆ ರಂಧ್ರಗಳನ್ನು ಕೊರೆಯಲಾಗಿದೆ. ಈ ಹಿಂದೆ, ಶಿವಲಿಂಗವಿರುವ ಪ್ರದೇಶವನ್ನು ಮುಚ್ಚುವಂತೆ ನ್ಯಾಯಾಲಯ ಆದೇಶಿಸಿತ್ತು ಮತ್ತು ಜ್ಞಾನವಾಪಿ ಮಸೀದಿಯೊಳಗೆ ನಮಾಜಿಗಳ ಸಂಖ್ಯೆಯನ್ನು ಮಿತಿಗೊಳಿಸಿತು' ಎಂದರು.
"ಇಂದು, ಮುಸ್ಲಿಂ ಕಡೆಯವರು ನಮ್ಮ ಅರ್ಜಿಯನ್ನು ಓದಿದ್ದಾರೆ ಮತ್ತು ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಹೇಳಲು ಪ್ರಯತ್ನಿಸಿದರು. ನಾವು ಮಧ್ಯಪ್ರವೇಶಿಸಿದ್ದೇವೆ ಮತ್ತು ನಮಗೆ ನಿರ್ದಿಷ್ಟ ಹಕ್ಕುಗಳಿವೆ ಮತ್ತು ಎಲ್ಲಾ ಮನವಿಗಳನ್ನು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸೂಚಿಸಿದ್ದೇವೆ'' ಎಂದರು.
ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಪ್ರಕರಣದ ವಿಚಾರಣೆಯನ್ನು ಮೇ 30 ಸೋಮವಾರಕ್ಕೆ ಮುಂದೂಡಿದೆ. ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದ ದಿನಾಂಕದಂದು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ. ಬಿಗಿ ಭದ್ರತೆಯಲ್ಲಿ ವಿಚಾರಣೆ ನಡೆಯುತ್ತಿದ್ದ ನ್ಯಾಯಾಲಯದೊಳಗೆ ವಕೀಲರು ಸೇರಿದಂತೆ 36 ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಸೋಮವಾರ ಹಿಂದೂ ಅರ್ಜಿದಾರರು ತಮ್ಮ ವಾದವನ್ನು ಮಂಡಿಸಿದಾಗ ಪ್ರಕರಣದ ವಿಚಾರಣೆ ಮುಂದುವರಿಯುತ್ತದೆ.
ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿಯು ಈ ಹಿಂದೆಯೇ ಸೋರಿಕೆಯಾಗಿತ್ತು ಮತ್ತು ವರದಿಯ ವಿವರಗಳು ಪ್ರಕರಣದ ಹಿಂದೂ ಹಕ್ಕುಗಳನ್ನು ಇನ್ನಷ್ಟು ತೀವ್ರಗೊಳಿಸಿವೆ. ಮಸೀದಿಯೊಳಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕೆತ್ತನೆಗಳು ಕಂಡುಬಂದಿವೆ ಮತ್ತು ಶಿವನು ಹೊತ್ತಿರುವ ತ್ರಿಶೂಲದ ಕೆತ್ತನೆಯು ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.
(ಒನ್ಇಂಡಿಯಾ ಸುದ್ದಿ)