ಜ್ಞಾನವಾಪಿ ವಿವಾದ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಶ್ನೆ
ವಾರಣಾಸಿ ಜೂನ್ 3: ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ಸಮಸ್ಯೆಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.
Recommended Video
"ಜಗಳವನ್ನು ಏಕೆ ಹೆಚ್ಚಿಸಬೇಕು? ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು?'' ಎಂದು ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಕೇಳಿದರು.
ಆರ್ಎಸ್ಎಸ್ನವರು ಫೈವ್ ಸ್ಟಾರ್ ಹೊಟೇಲ್ನಲ್ಲಿರಲ್ಲ, ಅವರು ತ್ಯಾಗಜೀವಿಗಳು: ಸಚಿವ ಮುರುಗೇಶ್ ನಿರಾಣಿ
'ಚಳುವಳಿಯನ್ನು ಮುನ್ನಡೆಸಲು ಬಯಸುವುದಿಲ್ಲ'
ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಆರ್ಎಸ್ಎಸ್ ಈಗಾಗಲೇ ಸ್ಪಷ್ಟಪಡಿಸಿದೆ. "ನವೆಂಬರ್ 9 ರಂದು ನಾವು ಐತಿಹಾಸಿಕ ಕಾರಣಗಳಿಗಾಗಿ ರಾಮ ಜನ್ಮಭೂಮಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇವೆ ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದೇವೆ. ಈಗ, ನಾವು ಯಾವುದೇ ಚಳುವಳಿಯನ್ನು ಮುನ್ನಡೆಸಲು ಬಯಸುವುದಿಲ್ಲ'' ಎಂದು ಅವರು ಹೇಳಿದರು.
ಜ್ಞಾನವಾಪಿ ಬಗ್ಗೆ ಟಿಕಾಯತ್: 'ಪ್ರತಿ ಬೆಟ್ಟಗಳ ಮೇಲೆ ಶಿವಲಿಂಗ ಆಕೃತಿ'
'ಬದಲಾಯಿಸಲಾಗದ ಇತಿಹಾಸ'
ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಮಾತನಾಡಿದ ಮೋಹನ್ ಭಾಗವತ್, ಈಗ ಜ್ಞಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ನಾವು ಬದಲಾಯಿಸಲಾಗದ ಇತಿಹಾಸವಿದೆ. ನಾವು ಈಗಿನ ಹಿಂದೂಗಳಾಗಲೀ ಅಥವಾ ಮುಸ್ಲೀಂರಾಗಲೀ ಆ ಇತಿಹಾಸವನ್ನು ಬರೆದಿಲ್ಲ. ಇದು ಹಿಂದೆ ಸಂಭವಿಸಿದೆ. ಅದನ್ನು ಈಗ ಕೆದಕುವುದು ಬೇಡ" ಎಂದಿದ್ದಾರೆ.
ವಿವಾದ ಸೃಷ್ಟಿಗೆ ಅಂತ್ಯ ಹಾಡಿ
"ಇಸ್ಲಾಂ ಬಂದಾಗ, ಭಾರತೀಯರ ನೈತಿಕತೆಯನ್ನು ಮುರಿಯುವ ಸಲುವಾಗಿ, ಸಾವಿರಾರು ದೇವಾಲಯಗಳನ್ನು ನಾಶಪಡಿಸಲಾಯಿತು. ಅದೂ ಒಂದು ಪೂಜೆ (ನಮಾಜ್). ಅವರು ನಮ್ಮ ಪೂರ್ವಜರಿಂದ ಬಂದವರು. ನಾವು ಯಾವುದೇ ರೀತಿಯ ಪೂಜೆಯ ವಿರುದ್ಧವಾಗಿಲ್ಲ" ಎಂದು ಭಾಗವತ್ ಹೇಳಿದರು.
'ಪ್ರತೀ ಬಾರಿ ವಿವಾದಗಳು ಸಂಭವಿಸುವುದಿಲ್ಲ'
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಒಪ್ಪಿಗೆಯೊಂದಿಗೆ ದಾರಿ ಕಂಡುಕೊಳ್ಳಬೇಕು. ಆದರೆ ಪ್ರತಿ ಬಾರಿಯೂ ವಿವಾದಗಳು ಸಂಭವಿಸುವುದಿಲ್ಲ ಮತ್ತು ಜನರು ಪ್ರತೀ ಬಾರಿ ನ್ಯಾಯಾಲಯಗಳನ್ನು ಸಂಪರ್ಕಿಸುತ್ತಾರೆ. ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರಶ್ನಿಸಬಾರದು" ಎಂದು ಭಾಗವತ್ ಹೇಳಿದರು.