Gyanvapi mosque; ಶೃಂಗಾರ ಗೌರಿ ಪೂಜೆಗೆ ಅವಕಾಶ ನೀಡುವ ಅರ್ಜಿ ವಿಚಾರಣೆ
ಲಕ್ನೋ, ಸೆ.22: ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ನಗರದ ಜ್ಞಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳೆಯರ ಸಲ್ಲಿಸಿದ್ದ ಅರ್ಜಿ ಕಾನೂನಾತ್ಮಕವಾಗಿ ಮಾನ್ಯವಾಗಿದೆ ಎಂದು ತೀರ್ಪು ನೀಡಿದ ಬಳಿಕ ವಾರಣಾಸಿಯ ಹಿರಿಯ ನ್ಯಾಯಾಧೀಶರು ಗುರುವಾರ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಸೆಪ್ಟೆಂಬರ್ 12 ರ ತನ್ನ ಆದೇಶದಲ್ಲಿ, ವಾರಣಾಸಿ ನ್ಯಾಯಾಲಯವು ಅರ್ಜಿದಾರರು ಮಸೀದಿಯನ್ನು ದೇವಾಲಯವನ್ನಾಗಿ "ಪರಿವರ್ತಿಸಲು" ಕೇಳುತ್ತಿಲ್ಲ ಆದರೆ ವರ್ಷಪೂರ್ತಿ "ವಿವಾದಿತ" ಆಸ್ತಿಯಲ್ಲಿ ಪೂಜಿಸುವ ಹಕ್ಕನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದರು.
ಜ್ಞಾನವಾಪಿ ಪ್ರಕರಣ: ಸಾಮಾಜಿಕ ಜಾಲತಾಣ ಪೋಸ್ಟ್- ರಾಜಸ್ಥಾನ ಮಹಿಳೆಗೆ ಶಿರಚ್ಛೇದ ಬೆದರಿಕೆ
ಆಗಸ್ಟ್ 15, 1947 ರಂದು ಇದ್ದಂತೆ ಪೂಜಾ ಸ್ಥಳಗಳು ಅಸ್ತಿತ್ವದಲ್ಲಿರಲು ಅವಕಾಶ ನೀಡಬೇಕು ಎಂದು 1991 ರಲ್ಲಿ ಜಾರಿಗೆ ತಂದ ಕಾನೂನು ಹೇಳುತ್ತದೆ. ಆದರೆ, ಬಾಬರಿ ಮಸೀದಿ ಪ್ರಕರಣವು ಇದಕ್ಕೆ ಹೊರತಾಗಿತ್ತು.
ಮಸೀದಿಯ ಗೋಡೆಯ ಮೇಲೆ ಹಿಂದೂ ದೇವತೆಗಳ ಶಿಲ್ಪ!
ಜ್ಞಾನವಾಪಿ ಮಸೀದಿಯ ಗೋಡೆಯ ಮೇಲೆ ಶೃಂಗಾರ ಗೌರಿ ಮತ್ತು ಇತರ ಹಿಂದೂ ದೇವತೆಗಳ ಶಿಲ್ಪವಿದೆ. ಅವುಗಳ ಪೂಜೆಗೆ ಅವಕಾಶ ಕೊಡಿ ಎಂದು ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಗುರುವಾರ (ಸೆಪ್ಟೆಂಬರ್ 22) ವಿಚಾರಣೆಗೆ ಪರಿಗಣಿಸಲಾಗಿದೆ.
ಹಿಂದೂ ಮಹಿಳೆಯರ ಅರ್ಜಿಯನ್ನು ಪರಿಗಣಿಸಬಾರದು ಎಂದು ಕೋರಿ ಮಸೀದಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ 19 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿ ಅರ್ಜಿಗೆ ಯಾವುದೇ ಮಾನ್ಯತೆಯಿಲ್ಲ ಎಂದಿತ್ತು.
8 ವಾರಗಳ ಕಾಲಾವಕಾಶ ಕೋರಿದ ಮುಸ್ಲಿಂ ಅರ್ಜಿದಾರರು
ಮುಸ್ಲಿಂ ಅರ್ಜಿದಾರರು ಮತ್ತೆ ಅರ್ಜಿಯನ್ನು ಸಲ್ಲಿಸಿದ್ದು, ಮುಂದಿನ ವಿಚಾರಣೆಗೆ ಮುನ್ನ ಪ್ರಕರಣಕ್ಕೆ ಸಿದ್ಧರಾಗಲು 8 ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಮಹಿಳೆಯರ ಪರ ವಕೀಲರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಮಸೀದಿಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸುವಂತೆ ಕೇಳಿಕೊಳ್ಳುವುದಾಗಿ ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ, ವಾರಣಾಸಿಯ ಕೆಳ ನ್ಯಾಯಾಲಯವು ಹಿಂದೂ ಮಹಿಳೆಯರ ಅರ್ಜಿಯ ಆಧಾರದ ಮೇಲೆ ಶತಮಾನಗಳಷ್ಟು ಹಳೆಯದಾದ ಮಸೀದಿಯ ಚಿತ್ರೀಕರಣಕ್ಕೆ ಆದೇಶಿಸಿತ್ತು.
1991 ರ ಕಾನೂನಿನ ಉಲ್ಲಂಘನೆ ಎಂದ ಮಸೀದಿ ಸಮಿತಿ
ಹಿಂದೂ ಅರ್ಜಿದಾರರಿಂದ ವಿವಾದಾತ್ಮಕವಾಗಿ ಸೋರಿಕೆಯಾದ ವಿಡಿಯೋ ವರದಿಯು, ಮುಸ್ಲಿಂ ಪ್ರಾರ್ಥನೆಗಳಿಗೆ ಮೊದಲು ಶುದ್ಧೀಕರಣ ಆಚರಣೆಗಳಿಗಾಗಿ ಬಳಸಲಾಗುವ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ "ಶಿವಲಿಂಗ" ಅಥವಾ ಶಿವನ ಅವಶೇಷ ಕಂಡುಬಂದಿದೆ ಎಂದು ಹೇಳಲಾಗಿದೆ.
ಮಸೀದಿಯೊಳಗಿನ ಚಿತ್ರೀಕರಣವನ್ನು ಜ್ಞಾನವಾಪಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತ. ಈ ಕ್ರಮವು 1991 ರ ಕಾನೂನನ್ನು (ಆರಾಧನೆಯ ಸ್ಥಳಗಳ ಕಾಯಿದೆ) ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ನಗರದ ಅತ್ಯಂತ ಹಿರಿಯ ನ್ಯಾಯಾಧೀಶರಿಗೆ ವಹಿಸಿ, ವಿವಾದದ "ಸಂಕೀರ್ಣತೆ ಮತ್ತು ಸೂಕ್ಷ್ಮತೆ" ಯನ್ನು ಉಲ್ಲೇಖಿಸಿ ನಿರ್ವಹಣೆಯ ಅಗತ್ಯವಿದೆ ಎಂದು ಹೇಳಿದೆ.
ಹಿಂದೂ ಮಹಿಳೆಯರ ಅರ್ಜಿಯ ಸಿಂಧುತ್ವ; ಸಂಭ್ರಮ
ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಲ್ಲಿ ಇರುವ ಜ್ಞಾನವಾಪಿ ಮಸೀದಿಯು ದೇವಾಲಯಗಳ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದೂ ಧಾರ್ಮಿಕ ಮುಖಂಡರು ಹೇಳಿದ್ದಾರೆ.
1980 ಮತ್ತು 90 ರ ದಶಕಗಳಲ್ಲಿ ಬಿಜೆಪಿಯು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಗಳಿಸಿದ ಅಯೋಧ್ಯೆ ಮತ್ತು ಮಥುರಾ ದೇವಾಲಯ ಮಸೀದಿ ಗಲಾಟೆಗಳಲ್ಲಿ ಜ್ಞಾನವಾಪಿ ಪ್ರಕರಣವು ಒಂದಾಗಿದೆ.
ವಾರಣಾಸಿಯ ನ್ಯಾಯಾಲಯವು ಹಿಂದೂ ಮಹಿಳೆಯರ ಅರ್ಜಿಯ ಸಿಂಧುತ್ವವನ್ನು ಸ್ವೀಕರಿಸಿ ಆದೇಶವನ್ನು ಜಾರಿಗೊಳಿಸಿತು. ಇದರಿಂದಾಗಿ ದೇಶದ ಹಲವೆಡೆ ಸಂಭ್ರಮ ಆಚರಿಸಲಾಯಿತು.