ಹಸು ಸಗಣಿ ಕುರಿತು ಸಂಶೋಧನೆ ಮಾಡಿ: ವಿಜ್ಞಾನಿಗಳಿಗೆ ಕೇಂದ್ರ ಸಚಿವರ ಸಲಹೆ
ಮಥುರಾ, ಜನವರಿ 15: ಹಸುವಿನ ಸಗಣಿಯ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ.
ಹಸು ಹಾಲು ಕೊಡುವುದನ್ನು ನಿಲ್ಲಿಸಿದ ನಂತರವೂ ರೈತರಿಗೆ ಅವುಗಳನ್ನು ಸಾಕುವುದು ಆರ್ಥಿಕವಾಗಿ ಲಾಭದಾಯಕವಾಗುವಂತೆ ಮಾಡಲು ಈ ಸಂಶೋಧನೆ ನೆರವಾಗಬಹುದು ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ದೇಸಿ ಹಸುವಿನ ಹಾಲಿನಲ್ಲಿ ಚಿನ್ನ ಇದೆಯಾ? ಏನಿದು ಹೊಸ ಚರ್ಚೆ
ಸೋಮವಾರ ನಡೆದ 12 ರಾಜ್ಯಗಳ ಉಪ ಕುಲಪತಿಗಳು ಮತ್ತು ವಶುವೈದ್ಯ ಅಧಿಕಾರಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಬೀದಿ ದನಗಳ ಹಾವಳಿ ದೊಡ್ಡ ಸಮಸ್ಯೆಯಾಗಿದೆ ಎಂದು ಗಿರಿರಾಜ್ ಸಿಂಗ್ ಹೇಳಿದರು.
ಅಯೋಧ್ಯೆಯಲ್ಲಿ ಹಸುಗಳಿಗೂ ಬ್ಲೇಜರ್ :ಯಾಕೆ ಈ ನಿರ್ಧಾರ?
ರೈತರು ಹಸುಗಳ ಸಗಣಿಯಿಂದ ಮತ್ತು ಮೂತ್ರದಿಂದಲೂ ಹಣ ಸಂಪಾದನೆ ಮಾಡಲು ಸಾಧ್ಯವಾದರೆ ಅವರು ಗೊಡ್ಡು ಹಸುಗಳನ್ನು ಹೊರಹಾಕುವುದಿಲ್ಲ ಎಂದರು.
ಗೋಮಾಂಸ ಮಾತ್ರ ಏಕೆ, ನಾಯಿ ಮಾಂಸವನ್ನೂ ತಿನ್ನಿ ಎಂದ ಬಿಜೆಪಿ ಅಧ್ಯಕ್ಷ
ಹಾಲು, ಸಗಣಿ ಮತ್ತು ಗೋಮೂತ್ರಗಳ ಮೌಲ್ಯವರ್ಧನೆ ಮಾಡುವುದರಿಂದ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಕೃಷಿಗೆ ತೊಡಗಿಸುವ ವೆಚ್ಚ ಕಡಿಮೆಯಾದರೆ ಹಳ್ಳಿಗಳು ಮತ್ತು ರೈತರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.