ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿ

|
Google Oneindia Kannada News

ಲಖನೌ, ಮೇ 20: ಲೋಕಸಭೆ ಚುನಾವಣೆ 2019ರ ಅಂತಿಮ ಹಂತದ ಮತದಾನ ಮುಗಿದ ಮರುದಿನವೇ ಉತ್ತರ ಪ್ರದೇಶ ಬಿಜೆಪಿಯು ತನ್ನ ಮಿತ್ರ ಪಕ್ಷವೊಂದನ್ನು ಹೊರಹಾಕಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಉತ್ತರ ಪ್ರದೇಶ ಸರ್ಕಾರದಲ್ಲಿ ಮಂತ್ರಿ ಆಗಿದ್ದ ಎಸ್‌ಬಿಎಸ್‌ಪಿ ಪಕ್ಷದ ಓಂ ಪ್ರಕಾಶ್ ರಾಜ್‌ಬಾರ್‌ ಅವರನ್ನು ಮಂತ್ರಿಮಂಡಲದಿಂದ ಸಿಎಂ ಯೋಗಿ ಆದಿತ್ಯನಾಥ ಅವರು ಕೈಬಿಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸಂಕಷ್ಟ

ಓಂ ಪ್ರಕಾಶ್ ರಾಜ್‌ಬಾರ್ ಅವರು ಬಿಜೆಪಿ ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ಬೈದಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಆರೋಪ ಕೇಳಿಬಂದಿತ್ತು ಹಾಗಾಗಿ ಇಂದು ಅವರನ್ನು ಮಂತ್ರಿಮಂಡಲದಿಂದ ಉಚ್ಛಾಟಿಸಲಾಗಿದೆ.

CM Yogi Adithyanath sacks BJP ally from cabinet

ಲೋಕಸಭೆ ಚುನಾವಣೆಗೆ ಮತದಾನ ಪ್ರಾರಂಭಕ್ಕೆ ಮುನ್ನಾ ಇದೇ ರಾಜ್‌ಬಾರ್ ಅವರನ್ನು ಸಂತುಷ್ಟಗೊಳಿಸಲೆಂದು ಎಲ್ಲ ನಿಗಮ, ಮಂಡಳಿಗಳ ನೇಮಕಾತಿಗಳನ್ನು ಬದಲಾಯಿಸಲಾಗಿತ್ತು, ಆದರೆ ಮತದಾನ ಮುಗಿದ ನಂತರ ರಾಜ್‌ಬಾರ್ ಅವರನ್ನೇ ಉಚ್ಛಾಟಿಸಲಾಗಿದೆ.

ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ

ಓಂ ಪ್ರಕಾಶ್ ರಾಜ್‌ಬಾರ್ ಅವರು ಮಂತ್ರಿಯಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿಲ್ಲದ ಕಾರಣ ಅವರನ್ನು ಮಂತ್ರಿಮಂಡಲದಿಂದ ತೆಗೆಯಲಾಗಿದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕಾಶ್ ರಾಜ್‌ಬಾರ್ ಅವರ ಬಳಿ ಇದ್ದ ಖಾತೆಯನ್ನು ಅವರದ್ದೇ ಸಮುದಾಯದ ಬಿಜೆಪಿ ಶಾಸಕ ಅನಿಲ್ ರಾಜ್‌ಬಾರ್ ಅವರಿಗೆ ವರ್ಗಾಯಿಸಲಾಗಿದ್ದು, ಪ್ರಕಾಶ್ ರಾಜ್‌ಬಾರ್ ಅವರು ಅಸಮಾಧಾನಗೊಂಡ ನಂತರ ಚುನಾವಣೆಯಲ್ಲಿ ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು.

English summary
CM Yogi Adithyanath sacks BJP ally SBSP minister Om Prakash Rajbhar from his cabinet. He was accused of threaten BJP workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X