ಪೌರತ್ವ ತಿದ್ದುಪಡಿ ಕಾಯ್ದೆ: ಕಲ್ಲು ಹೊಡೆಯುವವರ ಬಗ್ಗೆ ಮೋದಿ ಹೇಳಿದ್ದೇನು?
ಲಕ್ನೋ,
ಡಿಸೆಂಬರ್.25:
ಕೇಂದ್ರ
ಸರ್ಕಾರದ
ವಿರುದ್ಧ
ಪ್ರತಿಭಟನೆ
ನೆಪದಲ್ಲಿ
ದೇಶ
ಆಸ್ತಿ-ಪಾಸ್ತಿಗೆ
ನಷ್ಟ
ಉಂಟು
ಮಾಡುವುದು
ಎಷ್ಟು
ಸರಿ
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಪ್ರಶ್ನೆ
ಮಾಡಿದ್ದಾರೆ.
ಹೋರಾಟ
ಮಾಡುವ
ಹಕ್ಕು
ಪ್ರತಿಯೊಬ್ಬರಿಗೂ
ಇದೆ.
ಆದರೆ,
ಅದರ
ಹೆಸರಿನಲ್ಲಿ
ದೇಶದ
ಆಸ್ತಿಗೆ
ಹಾನಿ
ಮಾಡಿದರೆ
ಹೇಗೆ
ಎಂದು
ಪ್ರಶ್ನಿಸಿದ್ದಾರೆ.
ಮಾಜಿ
ಪ್ರಧಾನಮಂತ್ರಿ
ಅಟಲ್
ಬಿಹಾರಿ
ವಾಜಪೇಯಿ
ಅವರ
95ನೇ
ಜನ್ಮ
ದಿನಾಚರಣೆ
ಹಿನ್ನೆಲೆಯಲ್ಲಿ
ಉತ್ತರ
ಪ್ರದೇಶದ
ಲಕ್ನೋದಲ್ಲಿ
ಅಟಲ್
ಬಿಹಾರಿ
ವೈದ್ಯಕೀಯ
ವಿಶ್ವವಿದ್ಯಾಲಯದ
ಶಂಕುಸ್ಥಾಪನೆ
ನೆರವೇರಿಸಿ
ಪ್ರಧಾನಿ
ನರೇಂದ್ರ
ಮೋದಿ
ಮಾತನಾಡಿದರು.
"ಮಂಗಳೂರು
ಗೋಲಿಬಾರ್:
ಸರ್ಕಾರದಿಂದ
ಮೃತರ
ಕುಟುಂಬಕ್ಕಿಲ್ಲ
ಪರಿಹಾರ"
ಉತ್ತರ
ಪ್ರದೇಶದಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ಹಾಗೂ
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ನಡೆದ
ಪ್ರತಿಭಟನೆ
ಹಿಂಸಾತ್ಮಕ
ರೂಪಕ್ಕೆ
ತಿರುಗಿತು.
ಕೆಲವು
ಪ್ರತಿಭಟನಾಕಾರರು
ದೇಶದ
ಆಸ್ತಿಗೆ
ಧಕ್ಕೆ
ಉಂಟು
ಮಾಡಿದ್ದಾರೆ.
ನೀವು
ಮಾಡಿದ
ಕಾರ್ಯ
ಸರಿಯೋ
ತಪ್ಪೋ
ಎಂಬುದನ್ನು
ನೀವೇ
ಒಮ್ಮೆ
ಆತ್ಮಾವಲೋಕನ
ಮಾಡಿಕೊಳ್ಳಿರಿ
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹೇಳಿದರು.
ಭಾರತೀಯರಿಗೆ
ಹಕ್ಕಲ್ಲ,
ಕರ್ತವ್ಯವೂ
ಮುಖ್ಯ:
ದೇಶದಲ್ಲಿ
ಉತ್ತಮ
ರಸ್ತೆಗಳು
ಸಾರಿಗೆ
ವ್ಯವಸ್ಥೆ
ಎಂಬುದು
ಪ್ರತಿಯೊಬ್ಬ
ಭಾರತೀಯರ
ಹಕ್ಕು.
ಅವುಗಳನ್ನು
ಕಾಪಾಡಿಕೊಳ್ಳಬೇಕಾಗಿರುವುದು
ನಮ್ಮ
ಕರ್ತವ್ಯ.
ಉತ್ತಮ
ಗುಣಮಟ್ಟದ
ಶಿಕ್ಷಣ
ಪಡೆಯುವುದು
ಎಲ್ಲರ
ಜನ್ಮಸಿದ್ಧ
ಹಕ್ಕು.
ಅದರ
ಜೊತೆಗೆ
ವಿಶ್ವವಿದ್ಯಾಲಯಗಳನ್ನು
ಉಳಿಸಿಕೊಳ್ಳುವುದು
ಹಾಗೂ
ಶಿಕ್ಷಕರನ್ನು
ಗೌರವಿಸುವುದು
ಪ್ರತಿಯೊಬ್ಬ
ವಿದ್ಯಾರ್ಥಿಯ
ಕರ್ತವ್ಯವಾಗಬೇಕು
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಕರೆ
ನೀಡಿದರು.
ರಾಹುಲ್,
ಪ್ರಿಯಾಂಕಾ
ಗಾಂಧಿಯನ್ನು
ಅರ್ಧ
ದಾರಿಯಲ್ಲೇ
ಪೊಲೀಸರು
ತಡೆದಿದ್ದೇಕೆ..?
ಭಾರತೀಯರಿಗೆ
ರಕ್ಷಣೆ
ಹೇಗೆ
ಹಕ್ಕಾಗಿದೆಯೋ
ಅದೇ
ರೀತಿ
ಪೊಲೀಸರನ್ನು
ಗೌರವಿಸುವುದು
ಭಾರತೀಯರ
ಕರ್ತವ್ಯವಾಗಬೇಕು.
ಈ
ಹಿಂದೆ
ಜಮ್ಮು-ಕಾಶ್ಮೀರಕ್ಕೆ
370ರ
ಅಡಿ
ನೀಡಿದ್ದ
ವಿಶೇಷ
ಸ್ಥಾನಮಾನ
ವಾಪಸ್
ಪಡೆದಾಗ,
ರಾಮ
ಮಂದಿರ
ವಿವಾದವೆಲ್ಲ
ಶಾಂತಿಯುತವಾಗಿ
ಬಗೆಹರಿದಿದೆ.
ಆದರೆ,
ಪೌರತ್ವ
ತಿದ್ದುಪಡಿ
ಕಾಯ್ದೆ
ವಿಚಾರದಲ್ಲಿ
ಕಳೆದ
ಒಂದು
ವಾರದಿಂದ
ಉತ್ತರ
ಪ್ರದೇಶ,
ದೆಹಲಿ
ಸೇರಿದಂತೆ
ದೇಶದ
ಹಲವೆಡೆ
ಪ್ರತಿಭಟನೆ
ನಡೆಸಲಾಗುತ್ತಿದೆ.
ಪ್ರತಿಭಟನೆ
ಹೆಸರಿನಲ್ಲಿ
ಕೆಲವರು
ದೇಶದ
ಆಸ್ತಿಗೆ
ನಷ್ಟ
ಉಂಟು
ಮಾಡುತ್ತಿದ್ದಾರೆ.
ಇದು
ಎಷ್ಟರ
ಮಟ್ಟಿಗೆ
ಸರಿ
ಎಂಬುದನ್ನು
ನೀವೇ
ಯೋಚಿಸಿ
ನೋಡಿ
ಎಂದು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹೇಳಿದ್ದಾರೆ.