ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವದ ಕರಾಳ ಅಧ್ಯಾಯ: ಮೈತ್ರಿ ಪತನಕ್ಕೆ ಮಾಯಾವತಿ ಪ್ರತಿಕ್ರಿಯೆ

|
Google Oneindia Kannada News

ಲಖನೌ, ಜುಲೈ 24: ಕರ್ನಾಟಕ ರಾಜ್ಯದ ನಿನ್ನೆಯ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು, 'ಕಪ್ಪು ಅಧ್ಯಾಯ' ಎಂದಿದ್ದಾರೆ.

ಮೈತ್ರಿ ಸರ್ಕಾರವನ್ನು ಹಣದ ಬಲದಿಂದ ಪತನಗೊಳಿಸಿದ ಘಟನೆ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿ ಸೇರ್ಪಡೆ ಆಗಲಿದೆ ಎಂಬರ್ಥದಲ್ಲಿ ಮಾಯಾವತಿ ಅವರು ಹೇಳಿದ್ದಾರೆ.

ತಟಸ್ಥವಾಗಿರು ಎಂದು ಮಾಯಾವತಿ ಹೇಳಿದ್ದರು, ನಾನು ಅದನ್ನೇ ಮಾಡಿದೆ: ಎನ್. ಮಹೇಶ್ ತಟಸ್ಥವಾಗಿರು ಎಂದು ಮಾಯಾವತಿ ಹೇಳಿದ್ದರು, ನಾನು ಅದನ್ನೇ ಮಾಡಿದೆ: ಎನ್. ಮಹೇಶ್

ಬಿಜೆಪಿಯು ಸಂವಿಧಾನದ ಎಲ್ಲ ನಿಯಮಗಳನ್ನು ಬದಿಗೆ ಸರಿಸಿ, ಹಣ ಮತ್ತು ಅಧಿಕಾರವನ್ನು ಬಳಸಿ ಮೈತ್ರಿ ಸರ್ಕಾರವನ್ನು ಕೆಳಗೆ ಉರುಳಿಸಿದೆ, ಇದು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿ ಉಳಿದುಕೊಳ್ಳಲಿದೆ ಎಂದು ಅವರು ಹೇಳಿದರು.

BJP pulled down coalition government by money and power: Mayawathi

ಬಿಜೆಪಿಯ ಈ ವರ್ತನೆಯನ್ನು ಎಷ್ಟು ಖಂಡಿಸಿದರೂ ಸಾಲದು ಎಂದು ಮಾಯಾವತಿ ಅವರು ಹೇಳಿದ್ದಾರೆ.

ವಿಶ್ವಾಸಮತಕ್ಕೆ ಗೈರು: ಬಿಎಸ್‌ಪಿ ಶಾಸಕ ಮಹೇಶ್ ಪಕ್ಷದಿಂದ ಉಚ್ಛಾಟನೆವಿಶ್ವಾಸಮತಕ್ಕೆ ಗೈರು: ಬಿಎಸ್‌ಪಿ ಶಾಸಕ ಮಹೇಶ್ ಪಕ್ಷದಿಂದ ಉಚ್ಛಾಟನೆ

ಬಿಎಎಸ್‌ಪಿ ಪಕ್ಷದಿಂದ ಆಯ್ಕೆ ಆಗಿದ್ದ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಅವರು ಸರ್ಕಾರದ ಪರ ಮತ ಚಲಾಯಿಸಲಿಲ್ಲವೆಂದು ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ಮಾಯಾವತಿ ಅವರು ಆದೇಶ ನೀಡಿದ್ದರೂ ಸಹ ಮಹೇಶ್ ಅವರು ಕಲಾಪಕ್ಕೆ ಬರದೇ ಹೊರಗೆ ಉಳಿದರು.

English summary
BJP pulled down coalition government by money and power it will registered as black chapter in the Karnataka history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X