ಬೇರೆ ರಾಜ್ಯಗಳಿಂದ ಕಾರ್ಯಕರ್ತರ ಆಮದು ಯಾಕೆ? ಅಖಿಲೇಶ್ ಯಾದವ್
ಲಕ್ನೋ ಜನವರಿ 17: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಂಚು ರೂಪಿಸಲು ಬೇರೆ ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಉತ್ತರಪ್ರದೇಶಕ್ಕೆ ಕರೆತರಲಾಗುತ್ತಿದೆ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. 'ಸಂಚು ರೂಪಿಸಲು ಗುಜರಾತ್ ಮತ್ತು ಇತರ ರಾಜ್ಯಗಳ ಬಿಜೆಪಿ ಕಾರ್ಯಕರ್ತರನ್ನು ಯುಪಿಗೆ ಕರೆತರಲಾಗುತ್ತಿದೆ' ಎಂದು ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯ ಬಂಡಾಯ ಸಚಿವ ದಾರಾ ಸಿಂಗ್ ಚೌಹಾಣ್ ಮತ್ತು ಅಪ್ನಾ ದಳದ ಶಾಸಕ ಆರ್ಕೆ ವರ್ಮಾ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅಖಿಲೇಶ್ ಈ ಘೋಷಣೆ ಮಾಡಿದರು.
ಭೀಮ್ ಆರ್ಮಿ ಮುಖ್ಯಸ್ಥರಿಗೆ ಅಖಿಲೇಶ್ ಯಾದವ್ ತಿರುಗೇಟು
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದಾರಾ ಸಿಂಗ್ ಚೌಹಾಣ್, ಬಿಜೆಪಿ ಪಕ್ಷವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬ ಘೋಷಣೆಗಳನ್ನು ತೇಲಿ ಬಿಡುತ್ತದೆ. ಆದರೆ 'ಸಬ್ಕಾ ಸಾಥ್' (ಎಲ್ಲರ ಜೊತೆಗೆ) ಕೇವಲ ಮತಗಳಿಗಾಗಿ ಮತ್ತು 'ವಿಕಾಸ್' (ಅಭಿವೃದ್ಧಿ) ಕೇವಲ ತಮ್ಮ ಅಭಿವೃದ್ಧಿಯನ್ನು ಬಯಸುತ್ತದೆ" ಎಂದು ಚೌಹಾಣ್ ದೂರಿದ್ದಾರೆ. ಬಿಜೆಪಿ ಹಿಂದೂಳಿದ ಜನರ ಅಭಿವೃದ್ಧಿಯನ್ನು ಕಡೆಗಣಿಸುತ್ತದೆ. ಹೀಗಾಗಿ ತಾವು ಪಕ್ಷ ತೊರೆದಿರುವುದಾಗಿ ಹೇಳಿಕೊಂಡಿದ್ದಾರೆ.
ಚೌಹಾಣ್ ಮತ್ತು ವರ್ಮಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಅಖಿಲೇಶ್, ಎಸ್ಪಿ ಅಭಿವೃದ್ಧಿಗಾಗಿ ಕೆಲಸ ಮಾಡುವಾಗ ಬಿಜೆಪಿ ಮಾತ್ರ ವಿಭಜಕ ರಾಜಕೀಯದಲ್ಲಿ ತೊಡಗಿದೆ ಎಂದು ಹೇಳಿದರು. ಅರಣ್ಯ ಮತ್ತು ಪರಿಸರ ಸಚಿವರಾಗಿ ಚೌಹಾಣ್ ಅವರು ಇಟಾವಾದಲ್ಲಿ ಲಯನ್ ಸಫಾರಿಯನ್ನು ಉದ್ಘಾಟಿಸಲು ಹೇಗೆ ಕೆಲಸ ಮಾಡಿದರು ಎಂಬುದನ್ನು ನೆನಪಿಸಿಕೊಂಡ ಅಖಿಲೇಶ್, "ಸಿಎಂ ಲಯನ್ ಸಫಾರಿ ಉದ್ಘಾಟನೆಯಲ್ಲಿ ಆಸಕ್ತಿ ಹೊಂದಿರಲಿಲ್ಲ. ಒಬ್ಬರ ನಂತರ ಒಬ್ಬರು ನಿರ್ದೇಶಕರನ್ನು ವರ್ಗಾವಣೆ ಮಾಡುತ್ತಿದ್ದರು. ಹೀಗಾಗಿ ಉದ್ಘಾಟನೆಯನ್ನು ಮುಂದೂಡಲಾಗುತ್ತಿತ್ತು" ಎಂದರು.
ವಿಧಾನಸಭೆ ಚುನಾವಣೆಗೂ ಮುನ್ನ ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಿಂದ ಯುಪಿಗೆ ಕಾರ್ಯಕರ್ತರನ್ನು ಕರೆತಂದಿದ್ದಕ್ಕಾಗಿ ಎಸ್ಪಿ ಮುಖ್ಯಸ್ಥರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಗುಜರಾತ್ನ ಬಿಜೆಪಿ ಕಾರ್ಯಕರ್ತರನ್ನು ಇಲ್ಲಿಗೆ ಹೇಗೆ ಕರೆತರಲಾಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಮತ್ತು ವೀಡಿಯೊಗಳು ಬಂದಿವೆ. ಅವರಿಗೆ ತರಬೇತಿ ನೀಡಿ ಚುನಾವಣಾ ಸಂಬಂಧಿತ ಹುದ್ದೆಗಳನ್ನು ನೀಡಲಾಗುತ್ತಿದೆ'' ಎಂದು ಆರೋಪಿಸಿದ್ದಾರೆ.
ಯುಪಿ ಚುನಾವಣೆ: ಬಿಜೆಪಿಯ ದೌರ್ಬಲ್ಯವನ್ನು ಬಳಸಿಕೊಂಡ ಅಖಿಲೇಶ್
ಚುನಾವಣಾ ಆಯೋಗಕ್ಕೆ ದೂರು
ಒಂದು ರಾಜ್ಯದ ಜನರು ಮತ್ತೊಂದು ರಾಜ್ಯಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಕೋವಿಡ್-19 ಪ್ರೋಟೋಕಾಲ್ ಉಲ್ಲಂಘನೆಯಾಗಿರುವುದರಿಂದ ಬಿಜೆಪಿ ಕಾರ್ಯಕರ್ತರನ್ನು ಆಯಾ ರಾಜ್ಯಗಳಿಗೆ ವಾಪಸ್ ಕಳುಹಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಅಖಿಲೇಶ್ ಹೇಳಿದ್ದಾರೆ.
''ಅವರಿಗೆ ತರಬೇತಿ ನೀಡಲಾಗುತ್ತಿದೆ. ಅವರು ಪಿತೂರಿಗಳನ್ನು ರೂಪಿಸುತ್ತಾರೆ ಮತ್ತು ವದಂತಿಗಳನ್ನು ಹರಡುತ್ತಾರೆ. ಚುನಾವಣಾ ಆಯೋಗವು ನನ್ನ ದೂರನ್ನು ಪರಿಗಣನೆಗೆ ತೆಗೆದುಕೊಂಡು ಅವರನ್ನು ಕೂಡಲೇ ವಾಪಸ್ ಕಳುಹಿಸಬೇಕು. ಅವರು (ಇಸಿ) ಇದನ್ನು ಗಮನಿಸದಿದ್ದರೆ, ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅಖಿಲೇಶ್ ಹೇಳಿದರು.
ಬಿಜೆಪಿ ಪ್ರಾಯೋಜಿತ ಸಮೀಕ್ಷೆಗಳು ಮುಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರವಾಹವನ್ನು ಉಂಟುಮಾಡುವ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಎಸ್ಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು. "ಬಿಜೆಪಿ ಶಾಸಕರು ಮತ್ತು ಸಂಸದರ ಮೇಲೆ ಜನರು ಕೋಪಗೊಂಡಿದ್ದಾರೆ ಎಂಬ ನೆಲದ ವಾಸ್ತವಕ್ಕೆ ಅವರ ಸಮೀಕ್ಷೆಗಳು ತೀವ್ರ ವ್ಯತಿರಿಕ್ತವಾಗಿರುತ್ತವೆ. ಸರ್ಕಾರ ಏನನ್ನೂ ಮಾಡದ ಜನರನ್ನು ಹೆದರಿಸುತ್ತಿದೆ"ಎಂದು ಅವರು ಹೇಳಿದರು.
Recommended Video
ಕೈರಾನಾದ ಎಸ್ಪಿ ಅಭ್ಯರ್ಥಿ ನಹಿದ್ ಹಸನ್ ಬಂಧನದ ಕುರಿತು ಅಖಿಲೇಶ್, ಅಗತ್ಯವಿದ್ದರೆ ಅವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲದ ಅವರ ಕುಟುಂಬದ ಸದಸ್ಯರಿಗೆ ಪಕ್ಷವು ಟಿಕೆಟ್ ನೀಡುತ್ತದೆ ಎಂದು ಹೇಳಿದರು.