2005 ರ ಅಯೋಧ್ಯಾ ಸ್ಫೋಟದ ತೀರ್ಪು ಪ್ರಕಟ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಪ್ರಯಾಗರಾಜ್, ಜೂನ್ 18: 2005 ರಲ್ಲಿ ಅಯೋಧ್ಯಯ ರಾಮಜನ್ಮಭೂಮಿಯಲ್ಲಿ ನಡೆದಿದ್ದ ಉಗ್ರ ದಾಳಿಯ ತೀರ್ಪನ್ನು ಉತ್ತರ ಪ್ರದೇಶದ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಿದೆ.
ಒಟ್ತು ಐವರು ಆರೋಪಿಗಳಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದ್ದು, ಓರ್ವನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.
ಉಗ್ರದಾಳಿ ಸಾಧ್ಯತೆ, ಗುಪ್ತಚರ ಮಾಹಿತಿ ನಂತರ ಅಯೋಧ್ಯೆಯಲ್ಲಿ ಕಟ್ಟೆಚ್ಚರ
2005 ರ ಜುಲೈ 5 ರಂದು ಪಾಕ್ಮೂಲದ ಉಗ್ರರು ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಐವರು ಉಗ್ರರನ್ನು ಅಲ್ಲಿಯೇ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದರು.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಸಮೀಪ ಜೀಪೊಂದರಲ್ಲಿ ಸ್ಫೋಟಕವನ್ನಿಟ್ಟು ಸ್ಫೋಟಿಸಲಾಗಿತ್ತು. ಅಷ್ಟೇ ಅಲ್ಲ, ದೇವಾಲಯದೊಳಗೂ ಸ್ಫೋಟ ನಡೆಸಲು ಉಗ್ರರು ರಾಕೆಟ್ ಬಳಸಿದ್ದರು.
ತಮಿಳುನಾಡಿಗೆ ಲಂಕಾ ಬಾಂಬ್ ದಾಳಿಕೋರ ಉಗ್ರರ ನಂಟು?
ಈ ಸಂದರ್ಭದಲ್ಲಿ ಸತತ ಐದು ಘಂಟೆಗಳ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಕೊಲ್ಲಲಾಗಿತ್ತು. ಐವರನ್ನು ಸೆರೆ ಹಿಡಿಯಲಾಗಿತ್ತು. ಇವರಲ್ಲಿ ನಾಲ್ವರ ಕೈವಾಡ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದ್ದು, ಓರ್ವನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ.
ಈ ನಾಲ್ವರನ್ನೂ ಜಮ್ಮು-ಕಾಶ್ಮೀರದಲ್ಲಿ ಬಂಧಿಸಲಾಗಿತ್ತು. ಈ ದಾಳಿಯಲ್ಲಿ ಏಳು ಸಿಆರ್ ಪಿಎಫ್ ಸಿಬ್ಬಂದಿ ಗಂಭಿರವಾಗಿ ಗಾಯಗೊಂಡಿದ್ದರು. ಮೊದಲಿಗೆ ಈ ಪ್ರಕರಣವನ್ನು ಫೈಜಾಬಾದ್ ನಲ್ಲಿ ನಡೆಸಲಾಗುತ್ತಿತ್ತು. ಆದರೆ ಅಲ್ಲಿ ಆರೋಪಿ ಪರ ವಾದಕ್ಕೆ ಯಾವ ವಕೀಲರೂ ಸಿದ್ಧವಿಲ್ಲದ ಕಾರಣ ಅದನ್ನು ಪ್ರಯಾಗ್ ರಾಜ್(ಅಲಹಾಬಾದ್)ಗೆ ವರ್ಗಾಯಿಸಲಾಯಿತು.