ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಿ: ಮುಸ್ಲಿಂ ನಾಯಕ
ಲಕ್ನೋ, ಅಕ್ಟೋಬರ್ 11: ದೇಶದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಮುಸ್ಲಿಮರು ಅಯೋಧ್ಯೆಯ ವಿವಾದಿತ ಭೂಮಿಯನ್ನು ಹಿಂದುಗಳಿಗೆ ಬಿಟ್ಟುಕೊಡಬೇಕು ಎಂದು ಮುಸ್ಲಿಂ ನಾಯಕರೊಬ್ಬರು ಹೇಳಿದ್ದಾರೆ.
ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ
ಅಕ್ಟೋಬರ್ 18 ರಂದು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿದ್ದು, ತೀರ್ಪಿನ ದಿನಾಂಕ ಬಹುಶಃ ಅಂದೇ ನಿರ್ಧಾರವಾಗಲಿದೆ.
ಅಯೋಧ್ಯೆ ಪ್ರಕರಣ ಮುಕ್ತಾಯಕ್ಕೆ ದಿನಾಂಕ ನಿಗದಿ ಪಡಿಸಿದ ಸುಪ್ರೀಂ
ಈ ಹಿನ್ನೆಲೆಯಲ್ಲಿ ಮಾತನಾಡಿದ ಅಲಿಗಢ್ ವಿಶ್ವವಿದ್ಯಾಲಯದ(ಎಎಂಯು) ಮಾಜಿ ಉಪಕುಲಪತಿ ಲೆ.ಜ.(ನಿ.) ಜಮೀರ್ ಉದ್ದಿನ್ ಶಾ, "ಒಂದೊಮ್ಮೆ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಮರ ಪರವಾಗಿ ಬಂದರೆ ಅವರು ವಿವಾದಿತ ಭೂಮಿಯನ್ನು ಹಿಂದು ಬಾಂಧವರಿಗೆ ಉಡುಗೊರೆ ಎಂದು ಬಿಟ್ಟುಕೊಡುವುದು ಉತ್ತಮ. ಅದರಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರ ಬೇಕೇ ಬೇಕು. ಇಲ್ಲವೆಂದರೆ ಈ ಹೋರಾಟ ಎಂದಿಗೂ ಅಂತ್ಯವಾಗುವುದಿಲ್ಲ" ಎಂದರು.
ಈ ವಿಚಾರದಲ್ಲಿ ನ್ಯಾಯಾಲಯವನ್ನು ಹೊರಗಿಟ್ಟು ಸಂಧಾನದ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳುವುದಕ್ಕೆ ನಾನು ಬೆಂಬಲ ಸೂಚಿಸುತ್ತೇನೆ ಎಂದು ಅವರು ಹೇಳಿದರು.
ಅಯೋಧ್ಯಾ ಪ್ರಕರಣ: ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ಅರ್ಜಿದಾರರು
"ಸುಪ್ರೀಂ ಕೋರ್ಟ್ ತೀರ್ಪು ನೀಡುವುದಾದರೆ ಸ್ಪಷ್ಟವಾಗಿ ನೀಡಬೇಕು. ಅದು ಅಡ್ಡಗೋಡೆಯ ಮೇಲೆ ದೀಪ ಇಡುವಂಥ ತೀರ್ಪು ನೀಡಿದರೆ ಈ ವಿವಾದ ಮತ್ತೆ ಮುಂದುವರಿಯುತ್ತದೆ" ಎಂದು ಅವರು ಹೇಳಿದರು.