ಉತ್ತರ ಪ್ರದೇಶ ಬಿಜೆಪಿಗೆ ಹಿನ್ನಡೆ, ಹಾಲಿ ಸಂಸದ ಕಾಂಗ್ರೆಸ್ ತೆಕ್ಕೆಗೆ
ಲಕ್ನೋ, ಮಾರ್ಚ್ 29: ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಉತ್ತರಪ್ರದೇಶದಲ್ಲಿ ಭಾರಿ ಹಿನ್ನಡೆಯಾಗಿದೆ. ಹಾಲಿ ಸಂಸದ ಅಶೋಕ್ ಕುಮಾರ್ ದೊಹ್ರೆ ಅವರು ಬಿಜಜೆಪಿ ತೊರೆದು ಶುಕ್ರವಾರದಂದು ಕಾಂಗ್ರೆಸ್ ಸೇರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎತಾವಾ ಕ್ಷೇತ್ರದ ಸಂಸದ ಅಶೋಕ್ ಅವರು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಇದೇ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಸಂಸದರಾಗಿದ್ದರು.
ಅಮಾನತುಗೊಂಡಿರುವ ಎಎಪಿ ಸಂಸದ ಈಗ ಬಿಜೆಪಿ ಪಾಲು
ಈ ನಡುವೆ 5 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದ್ದು, ನಾಲ್ವರು ಅಸ್ಸಾಂ ಹಾಗೂ ಒಬ್ಬರು ಉತ್ತರಪ್ರದೇಶದ ಅಭ್ಯರ್ಥಿಯಾಗಿದ್ದಾರೆ.
ದೊಗ್ರೆ ಅವರು ಎತಾವಾದಿಂದ ಸ್ಪರ್ಧಿಸುತ್ತಿದ್ದರೆ, ಉಳಿದ ನಾಲ್ವರು ಅಸ್ಸಾಂ ಅಭ್ಯರ್ಥಿಗಳು ಅಬು ತಹೇರ್ ಅಲಿ ಬೆಪಾರಿ (ಧುಬ್ರಿ), ಸಬ್ದಾ ರಾಮ್ ರಭಾ(ಕೊಕ್ರಾಜಾರ್), ಅಬ್ದುಲ್ ಖಲೀಕ್ (ಬರ್ಪೆಟಾ) ಹಾಗೂ ಬೊಬೀತಾ ಶರ್ಮ (ಗುವಾಹಟಿ)
ಚುನಾವಣೆಗೆ ಮುನ್ನವೇ ಬಿಜೆಪಿಗೆ ಶಾಕ್: ಅಭ್ಯರ್ಥಿ ಜೈಲುಪಾಲು
ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬೀಳಲಿದೆ.