ಬ್ಯಾನರ್ ತೆಗೆಯುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಆದೇಶ
ಲಕ್ನೋ, ಮಾರ್ಚ್ 09 : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ಭಾವಚಿತ್ರವಿರುವ ಬ್ಯಾನರ್ ತಕ್ಷಣ ತೆಗೆಯಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.
ಸೋಮವಾರ ಅಲಹಾಬಾದ್ ಹೈಕೋರ್ಟ್ ಈ ಕುರಿತು ಆದೇಶವನ್ನು ನೀಡಿದೆ. ಬ್ಯಾನರ್ ಹಾಕಿರುವ ಕುರಿತು ದಾಖಲು ಮಾಡಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಬ್ಯಾನರ್ನಿಂದಾಗಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿನ್ನಡೆ?
ಅಲಹಾಬಾದ್ ಹೈಕೋರ್ಟ್ ಆದೇಶದಿಂದಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಮಾಡಿದ ಮತ್ತು ಹಿಂಸಾತ್ಮಕ ಪ್ರತಿಭಟನೆ ಆರೋಪ ಹೊತ್ತಿರುವ ವ್ಯಕ್ತಿಗಳ ಪೋಟೋ ಇರುವ ಬ್ಯಾನರ್ಗನ್ನು ಸರ್ಕಾರ ಹಾಕಿತ್ತು.
ಸಿಎಎ ವಿರುದ್ಧ ನಿರ್ಣಯ ತೆಗೆದುಕೊಳ್ಳುವುದಿಲ್ಲ; ಅಜಿತ್ ಪವಾರ್
ಉತ್ತರ ಪ್ರದೇಶ ಸರ್ಕಾರ ರಾಜಧಾನಿ ಲಕ್ನೋದ ಹೃದಯ ಭಾಗದಲ್ಲಿ ಆರೋಪಿಗಳ ಚಿತ್ರ, ಹೆಸರು, ವಿಳಾಸ ಇರುವ ಬ್ಯಾನರ್ ಹಾಕಿತ್ತು. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರು ಪರಿಹಾರ ನೀಡದಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು.
''ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವಿಪಕ್ಷ''
ಬ್ಯಾನರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ಅಲಹಾಬಾದ್ ಹೈಕೋರ್ಟ್ ವಿಚಾರಣೆ ಆರಂಭಿಸಿತ್ತು. ಈಗ ಬ್ಯಾನರ್ ತೆಗೆಯಬೇಕು ಎಂದು ಆದೇಶ ನೀಡಿದೆ.
ಸರ್ಕಾರ ಹಾಕಿರುವ ಬ್ಯಾನರ್ನಲ್ಲಿ ರಾಜಕಾರಣಿ ಸದಾಫ್ ಜಫಾರ್, ವಕೀಲ ಮೊಹಮ್ಮದ್ ನೋಹೆಬ್, ರಂಗಕರ್ಮಿ ದೀಪಕ್ ಕಬೀರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಸ್. ಆರ್.ದರಪುರಿ ಹೆಸರುಗಳಿದ್ದವು.
ಆಸ್ತಿ ಮುಟ್ಟುಗೋಲು ನೋಟಿಸ್ ನೀಡಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಎಲ್ಲರೂ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬ್ಯಾನರ್ ವಿಚಾರದಲ್ಲಿ ಯೋಗಿ ಆದಿತ್ಯನಾಥ್ಗೆ ಹಿನ್ನಡೆ ಉಂಟಾಗಿದೆ.