ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಜೊತೆಗಿನ ಮೈತ್ರಿ ವಿಚಾರ: ರಾಜ್‌ಭರ್ ಉತ್ತರ ಏನು ಗೊತ್ತಾ?

|
Google Oneindia Kannada News

ಲಕ್ನೋ ಮಾರ್ಚ್ 19: ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಭಾಷ್ಪ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಬಿಜೆಪಿ ಮೈತ್ರಿಕೂಟ ಸೇರಲಿದ್ದಾರೆಯೇ? ಈ ಪ್ರಶ್ನೆಯು ಮಾರ್ಚ್ 18 ಶುಕ್ರವಾರದಿಂದ ಮಾಧ್ಯಮದ ಮುಖ್ಯಾಂಶಗಳಲ್ಲಿದೆ. ಈ ಪ್ರಶ್ನೆಯು ಯುಪಿ ರಾಜಕೀಯದಲ್ಲಿ ಭಾರೀ ಬಿಸಿ ಚರ್ಚೆಯ ವಿಷಯವಾಗಿದೆ. ಆದರೆ ಈ ಪ್ರಶ್ನೆಗೆ ಇದೀಗ ಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಸ್ಪಷ್ಟನೆ ನೀಡಿದ್ದಾರೆ. ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿಲ್ಲ ಎಂದು ರಾಜ್‌ಭರ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್‌ಭರ್ ಅವರು ಬಿಜೆಪಿ ಮೈತ್ರಿಯೊಂದಿಗೆ ಹೋಗುವ ಚರ್ಚೆಗಳು ಆಧಾರರಹಿತ ಎಂದು ಹೇಳಿದ್ದಾರೆ. ನಾವು ಸಮಾಜವಾದಿ ಪಕ್ಷದ ಜೊತೆಗಿದ್ದೇವೆ ಎಂದು ರಾಜಭರ್ ಹೇಳಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಪ್ರತಿ ವಿಧಾನಸಭೆಯ ಚುನಾವಣಾ ಫಲಿತಾಂಶ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ನಾವು ಈಗ 2024 ಕ್ಕೆ ತಯಾರಿ ನಡೆಸುತ್ತಿದ್ದೇವೆ ಎಂದರು. ನಾನು ಶಾ ಅವರನ್ನು ಭೇಟಿ ಮಾಡಿಲ್ಲ. ಚರ್ಚೆಯಾಗಲಿ ಸಭೆಯಾಗಲಿ ನಡೆದಿಲ್ಲ ಎಂದ ರಾಜ್‌ಭರ್ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದ್ದಾರೆ ಎಂದು ಹೇಳಿದರು.

ಇದು ಕೇವಲ ವದಂತಿಗಳನ್ನು ಹರಡುತ್ತಿದೆ. ಅಂತಹದ್ದೇನೂ ಇಲ್ಲ. ನಾವು ಎಲ್ಲಿದ್ದೇವೆಯೋ ಅಲ್ಲಿಯೇ ಇದ್ದೇವೆ. ಭೇಟಿಯ ಚಿತ್ರಗಳ ಕುರಿತು ಓಂಪ್ರಕಾಶ್ ರಾಜ್‌ಭರ್, ಅಮಿತ್ ಶಾ ಅವರೊಂದಿಗೆ ನಮ್ಮ ಬಳಿ ಹಲವು ಚಿತ್ರಗಳಿವೆ ಎಂದು ಹೇಳಿದರು. ಐವತ್ತು ಫೋಟೋಗಳು ಮಾಧ್ಯಮಗಳ ಬಳಿ ಇರುತ್ತವೆ. ಎಲ್ಲಿ ಬೇಕಾದರೂ ಹಾಕಿಕೊಂಡು ಫಿಟ್ ಆಗುವಂತೆ ಮಾಡುತ್ತಾರೆ ಎಂದರು. ಇದೇ ವೇಳೆ ರಾಜ್‌ಭರ್ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿಯಿಂದ ಎಸ್‌ಪಿ ಪಾಳಯದಲ್ಲಿ ಸಂಚಲನ ಮೂಡಿತ್ತು. ಇದೀಗ ಓಂಪ್ರಕಾಶ್ ರಾಜ್‌ಭರ್ ಅವರೇ ಮುಂದೆ ಬಂದು ಬಿಜೆಪಿ ಜೊತೆ ಹೋಗುವ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

Alliance with BJP: Rajbhar Do you know the answer?

ಉತ್ತರಪ್ರದೇಶದಲ್ಲಿ ಭಾರಿ ಗೆಲುವಿನ ನಂತರ ಬಿಜೆಪಿ ಮತ್ತೆ ಬಹುಮತದ ಸರ್ಕಾರ ರಚಿಸಲು ಭರದ ಸಿದ್ಧತೆ ನಡೆದಿದೆ. ಮಾರ್ಚ್ 25 ರಂದು ಯೋಗಿ ಆದಿತ್ಯನಾಥ್ ಮತ್ತು ಅವರ ಹೊಸದಾಗಿ ಚುನಾಯಿತ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎಂದೆಂದಿಗೂ ನೆನಪಿನಲ್ಲಿ ಉಳಿಯುವ 2022ರ ಪ್ರಮಾಣ ವಚನಕ್ಕಾಗಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಲಕ್ನೋದ ಅಂತರಾಷ್ಟ್ರೀಯ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಈ ಬಾರಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮತ್ತೊಂದು ವಿಚಾರ ಸಮಾಜವಾದಿ ಪಕ್ಷ ಈ ಹಿಂದಿನ ಚುನಾವಣೆಗಿಂತ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಬಹುದೊಡ್ಡ ಪಕ್ಷವಾಗುವುದರ ಜೊತೆಗೆ ಬಿಜೆಪಿಗೆ ಸವಾಲು ಒಡ್ಡಿದೆ. ಈ ಗೆಲುವು ಬಿಜೆಪಿಗೆ ಚಿಂತೆಯನ್ನುಂಟು ಮಾಡಿದೆ. ಇನ್ನೂ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಹೀನಾಯ ಸೋಲು ಅನುಭವಿಸುವ ಮೂಲಕ ಭಾರೀ ಮುಖಭಂಗ ಎದುರಿಸುತ್ತಿವೆ. ಭಾರೀ ನಿರೀಕ್ಷೆಯನ್ನುಂಟು ಮಾಡಿದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಗೆಲುವು ಸಾಧಿಸಿದೆ. ಯೋಗಿ ಆದಿತ್ಯನಾಥ್ ಅವರು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ ನಗರ ಕ್ಷೇತ್ರದಿಂದ 1,03,390 ಅಂತರದಿಂದ ಗೆದ್ದಿದ್ದಾರೆ. ಯುಪಿ ಅಸೆಂಬ್ಲಿ ಚುನಾವಣೆಯಲ್ಲಿ ಅವರು 62,109 ಮತಗಳನ್ನು ಗಳಿಸಿದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಭಾವತಿ ಉಪೇಂದ್ರ ದತ್ ಶುಕ್ಲಾ ಅವರನ್ನು ಸೋಲಿಸಿದರ

English summary
Subhaspa President Om Prakash Rajbhar, who contested the 2022 Uttar Pradesh Assembly elections in alliance with the Samajwadi Party, is going to join the BJP alliance?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X