'ಅಖಿಲೇಶ್ ಯಾದವ್ ಎಸಿಗೆ ಒಗ್ಗಿಕೊಂಡಿದ್ದಾರೆ'- ರಾಜ್ಭರ್ ಟೀಕೆ
ಲಕ್ನೋ ಮೇ 23: ಸಮಾಜವಾದಿ ಪಕ್ಷದ ಪ್ರಮುಖ ಮಿತ್ರರೊಬ್ಬರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಹವಾನಿಯಂತ್ರಣಗಳಿಗೆ ಒಗ್ಗಿಕೊಂಡಿದ್ದು ಜನರನ್ನು ಹೆಚ್ಚಾಗಿ ಭೇಟಿಯಾಗಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ರಾಜ್ಯ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿರುವ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಅವರು ಭಾನುವಾರ ಪೂರ್ವ ಯುಪಿಯಲ್ಲಿ ನಡೆದ ತಮ್ಮ ಪಕ್ಷದ ಸಭೆಯಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಜ್ಞಾನವಾಪಿ ಪ್ರಕರಣ: ನ್ಯಾ| ಅಜಯ್ ಕೃಷ್ಣ ವಿಶ್ವೇಶ ಬಗ್ಗೆ ತಿಳಿಯಿರಿ
"ಅಖಿಲೇಶ್ ಯಾದವ್ ಹವಾನಿಯಂತ್ರಿತ ಕೊಠಡಿಗಳಿಗೆ (ಎಸಿ) ತುಂಬಾ ಒಗ್ಗಿಕೊಂಡಿದ್ದಾರೆ" ಎಂದು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥರು ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ಸಭೆಯ ನಂತರ ಸುದ್ದಿಗಾರರು ಪ್ರಶ್ನಿಸಿದಾಗ ರಾಜ್ಭರ್ ಕಾಮೆಂಟ್ಗಳನ್ನು ನಿರಾಕರಿಸಲಿಲ್ಲ. "ಅವರು ಹೊರಗೆ ಹೋಗಬೇಕು ಮತ್ತು ವಿವಿಧ ಪ್ರದೇಶಗಳಿಗೆ ಪ್ರವಾಸ ಮಾಡಬೇಕು ಮತ್ತು ಅವರ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿ ಮಾಡಬೇಕು, ನಾನು ಹೇಳಲು ಉದ್ದೇಶಿಸಿದ್ದು ಇದನ್ನೇ. ನಾನು ಲಕ್ನೋಗೆ ಹೋಗುತ್ತೇನೆ ಮತ್ತು ಅವರು ಹೊರಗೆ ಬರುವುದನ್ನು ಖಚಿತಪಡಿಸಿಕೊಳ್ಳುತ್ತೇನೆ" ಎಂದು ರಾಜ್ಭರ್ ಹೇಳಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥರನ್ನು ರಾಜ್ಭರ್ ಟೀಕಿಸಿದ್ದು ಇದಕ್ಕೆ ಬಿಜೆಪಿಯ ಶೆಹಜಾದ್ ಪೂನಾವಾಲಾ ಮಾಡಿರುವ ಟ್ವೀಟ್ ಹೀಗಿದೆ, "ಅಖಿಲೇಶ್ ಯಾದವ್ ಅವರು ಎಸಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆ ಮತ್ತು ಬೀದಿಗಿಳಿಯುತ್ತಿಲ್ಲ ಎಂದು ಎಸ್ಪಿ ಮಿತ್ರಪಕ್ಷ ಓಪಿ ರಾಜ್ಭರ್ ಹೇಳುತ್ತಾರೆ. ಪಕ್ಷಗಳು ಚುನಾವಣೆ ನಂತರ ವಿದೇಶಿ ಪ್ರವಾಸ/ಎಸಿ/ರಜೆ/ ಪಾರ್ಟಿ ಮೋಡ್ನಲ್ಲಿ 4.5 ವರ್ಷಗಳನ್ನು ಕಳೆಯುತ್ತವೆ. ಚುನಾವಣೆಗೂ 6 ತಿಂಗಳ ಮೊದಲು ಅವರು ಪ್ರಚಾರದ ಮೋಡ್ಗೆ ಹೋಗುತ್ತಾರೆ. ಇದೀಗ ಬಾಬುವಾ ವೆಕೇಶನ್ ಮೋಡ್ನಲ್ಲಿದ್ದಾರೆ' ಎಂದು ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ಮೇಲೆ ನಮಾಜ್ ನಿಲ್ಲಿಸಿದ್ದೇವೆ: ಯೋಗಿ
ಮಾರ್ಚ್ನಲ್ಲಿ ರಾಜ್ಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಸೋಲಿನ ನಂತರ ರಾಜ್ಭರ್ ಮತ್ತೆ ಮಾಜಿ ಪಾಲುದಾರ ಬಿಜೆಪಿಯತ್ತ ವಾಲುತ್ತಾರೆ ಎಂಬ ಊಹಾಪೋಹವಿತ್ತು. ಬಿಜೆಪಿಯ ಮುಖ್ಯ ಕಾರ್ಯತಂತ್ರಗಾರ ಅಮಿತ್ ಶಾ ಅವರನ್ನು ಭೇಟಿಯಾದ ವರದಿಗಳ ನಡುವೆ ಈ ಟೀಕೆ ಕೇಳಿ ಬಂದಿದೆ. ರಾಜ್ಭರ್ ಅವರು ಹೋಳಿ ಹಬ್ಬದಂದು ಬಿಜೆಪಿಯ ಉನ್ನತ ನಾಯಕತ್ವವನ್ನು ಭೇಟಿ ಮಾಡಿದ್ದಾರೆ ಎಂಬುದು ಗುಸುಗುಸು. ಇವರ ಫೋಟೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು. ಅದು ನಾಲ್ಕು ವರ್ಷ ಹಳೆಯದು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಬಿಜೆಪಿ ಸೇರುವ ಯಾವುದೇ ಸಭೆ ನಡೆದಿಲ್ಲ ಎಂದು ರಾಜಭರ್ ನಿರಾಕರಿಸಿದ್ದರು.
2017 ರಲ್ಲಿ ರಾಜ್ಭರ್ ಎನ್ಡಿಎ ಒಕ್ಕೂಟದ ಭಾಗವಾಗಿ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು 2019 ರಲ್ಲಿ ಲೋಕಸಭೆ ಚುನಾವಣೆಯ ಮಧ್ಯದಲ್ಲಿ ಮೈತ್ರಿಯನ್ನು ತೊರೆದರು, ತಮ್ಮನ್ನು ಬಿಜೆಪಿ ವಿಶೇಷವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು "ನಿರ್ಲಕ್ಷಿಸುತ್ತಿದ್ದಾರೆ" ಎಂದು ದೂರಿದರು. ಪೂರ್ವ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಸಾಕಷ್ಟು ಸ್ಥಾನಗಳನ್ನು ನೀಡದಿರುವುದು ಪಕ್ಷಕ್ಕೆ ಅಸಮಾಧಾನ ತಂದಿದೆ. ಏಪ್ರಿಲ್ 2019 ರಲ್ಲಿ ರಾಜ್ಭರ್ ಅವರು ತಮ್ಮ ರಾಜೀನಾಮೆ ಪತ್ರ ನೀಡಿದರು.