ಅಖಿಲೇಶ್ಗೆ ದಲಿತರ ಮತ ಬೇಕಾಗಿಲ್ಲ: ಭೀಮ್ ಆರ್ಮಿ
ಲಕ್ನೋ, ಜನವರಿ 15: ಅಖಿಲೇಶ್ ಯಾದವ್ಗೆ ದಲಿತರ ಮತಗಳು ಬೇಕಾಗಿಲ್ಲ ಎಂದು ಭೀಮ್ ಆರ್ಮಿ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಜಾದ್ ಸಮಾಜ್ ಪಾರ್ಟಿ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Breaking News: ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ಗೆ ದಲಿತರ ಮತಗಳು ಬೇಡ ಎಂದು ಆಜಾದ್ ಹೇಳಿದ್ದಾರೆ. ಸೀಟ್ ಶೇರಿಂಗ್ ಕುರಿತು ಅಖಿಲೇಶ್ ಯಾದವ್ ಅವರ ಬಳಿ ಮಾತುಕತೆ ನಡೆಸಲಾಗಿತ್ತು, ಆಜಾದ್ ಸಮಾಜವಾದಿ ಪಕ್ಷಕ್ಕೆ ಕೇವಲ 3 ಸೀಟುಗಳನ್ನು ನೀಡುವುದಾಗಿ ಅಖಿಲೇಶ್ ಹೇಳಿದ್ದರು, ಆದರೆ ಆಜಾದ್ ಸಮಾಜವಾದಿ ಪಕ್ಷ 10 ಸೀಟುಗಳನ್ನು ಕೇಳುತ್ತಿದೆ.
ಉತ್ತರ ಪ್ರದೇಶದಲ್ಲಿ ತೀವ್ರಗೊಂಡಿರುವ ರಾಜಕೀಯ ಮೇಲಾಟದ ನಡುವೆಯೇ ಇಂದು ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿತ್ತು. ಭೀಮ್ ಆರ್ಮಿ ಅಧ್ಯಕ್ಷ, ಯುವ ದಲಿತ ಮುಖಂಡ ಚಂದ್ರಶೇಖರ್ ಅವರು ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ, ಎಸ್ಪಿಯೊಂದಿಗೆ ಸಣ್ಣ ಪಕ್ಷಗಳ ಮೈತ್ರಿಗೆ ಭೀಮ್ ಆರ್ಮಿಯನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿತ್ತು. ವಿಶೇಷವೆಂದರೆ, ಯೋಗಿ ಸಂಪುಟಕ್ಕೆ ರಾಜೀನಾಮೆ ನೀಡಿರುವ ಸ್ವಾಮಿ ಪ್ರಸಾದ್ ಮೌರ್ಯ ಜತೆಗೆ ಬಿಜೆಪಿಯ ಹತ್ತಾರು ಬಂಡಾಯ ಶಾಸಕರು ಕೂಡ ಅಖಿಲೇಶ್ ಅವರನ್ನು ಭೇಟಿ ಮಾಡಲು ಸಮಾಜವಾದಿ ಪಕ್ಷದ ಕಚೇರಿಗೆ ಆಗಮಿಸಿದ್ದರು.
ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಅಧ್ಯಕ್ಷ ಓಂಪ್ರಕಾಶ್ ರಾಜ್ಭರ್ ಈ ಸಭೆಯ ಹಿಂದೆ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೇ ಯೋಗಿ ಸರ್ಕಾರದ ಮೂವರು ಸಚಿವರು ಹಾಗೂ ಸುಮಾರು 12 ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಕೂಡ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಲು ಬಂದಿದ್ದಾರೆ.
ಸಮಾಜವಾದಿ ಪಕ್ಷದ ಜೊತೆ ಭೀಮ್ ಆರ್ಮಿ ಮೈತ್ರಿ ಮಾಡಿಕೊಂಡರೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೆ ದೊಡ್ಡ ಲಾಭ ಸಿಗಬಹುದು ಎನ್ನುತ್ತಾರೆ ರಾಜಕೀಯ ತಜ್ಞರು. ದಲಿತ ಸಮಾಜದಲ್ಲಿ ಭೀಮ್ ಆರ್ಮಿಯ ಹಿಡಿತ ಬಹಳ ವೇಗವಾಗಿ ಹೆಚ್ಚುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಸಮಾಜವಾದಿ ಪಕ್ಷಕ್ಕೆ ಲಾಭವಾಗಬಹುದು ಎಂದು ವಿಶ್ಲೇಷಿಸಲಾಗಿತ್ತು, ಆದರೆ ಭೀಮ್ ಆರ್ಮಿ ಮೈತ್ರಿ ಇಂದ ಹಿಂದೆ ಸರಿದಿದೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ:
- ಮೊದಲ ಹಂತದಲ್ಲಿ ಫೆಬ್ರವರಿ 10ರಂದು ಮತದಾನ
- ಎರಡನೇ ಹಂತದಲ್ಲಿ ಫೆಬ್ರವರಿ 14ರಂದು ಮತದಾನ
- ಮೂರನೇ ಹಂತದಲ್ಲಿ ಫೆಬ್ರವರಿ 20ರಂದು ಮತದಾನ
- ನಾಲ್ಕನೇ ಹಂತದಲ್ಲಿ ಫೆಬ್ರವರಿ 23ರಂದು ಮತದಾನ
- ಐದನೇ ಹಂತದಲ್ಲಿ ಫೆಬ್ರವರಿ 27ರಂದು ಮತದಾನ
- ಆರನೇ ಹಂತದಲ್ಲಿ ಮಾರ್ಚ್ 3ರಂದು ಮತದಾನ
- ಏಳನೇ ಹಂತದಲ್ಲಿ ಮಾರ್ಚ್ 7ರಂದು ಮತದಾನ
ಉತ್ತರ
ಪ್ರದೇಶ
ಗದ್ದುಗೆ
ಹಿಡಿಯಲು
ಪೈಪೋಟಿ:
ದೇಶದಲ್ಲಿ
ಅತಿಹೆಚ್ಚು
ವಿಧಾನಸಭೆ
ಕ್ಷೇತ್ರಗಳನ್ನು
ಹೊಂದಿರುವ
ಉತ್ತರ
ಪ್ರದೇಶದಲ್ಲಿ
ಅಧಿಕಾರದ
ಗದ್ದುಗೆ
ಹಿಡಿಯುವುದಕ್ಕೆ
ಬಿಜೆಪಿ,
ಸಮಾಜವಾದಿ
ಮತ್ತು
ಬಹುಜನ
ಸಮಾಜವಾದಿ
ಸೇರಿದಂತೆ
ಪ್ರಾದೇಶಿಕ
ಪಕ್ಷಗಳ
ನಡುವೆ
ಪೈಪೋಟಿ
ನಡೆಯುತ್ತಿದೆ.
ಅತಿಹೆಚ್ಚು
ಕ್ಷೇತ್ರಗಳನ್ನು
ಹೊಂದಿರುವ
ರಾಜ್ಯದ
ಮತದಾರರ
ಮನ
ಗೆಲ್ಲುವುದಕ್ಕಾಗಿ
ಇತ್ತೀಚಿಗೆ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಹಲವು
ಬಾರಿ
ರಾಜ್ಯಕ್ಕೆ
ಭೇಟಿ
ನೀಡಿ
ಸಾಕಷ್ಟು
ಯೋಜನೆಗಳಿಗೆ
ಚಾಲನೆ
ನೀಡಿದ್ದರು.