ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಆತ್ಮಹತ್ಯೆ: ಡೆತ್ನೋಟ್ ಪತ್ತೆ
ಲಕ್ನೋ, ಸೆಪ್ಟೆಂಬರ್ 20: ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದರೆ, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿದ್ದರಿಂದ, ಅದನ್ನು ಮುರಿಯಬೇಕಾಯಿತು. ನರೇಂದ್ರ ಗಿರಿ ಮಹಾರಾಜರು ನೈಲಾನ್ ಹಗ್ಗಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥನಾಗಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಹಾಂತ್ ನರೇಂದ್ರ ಗಿರಿ ತಮ್ಮ ಆತ್ಮಹತ್ಯೆ ಪತ್ರದಲ್ಲಿ ವಿಲ್ ಕೂಡ ಬರೆದಿದ್ದು, ಆಶ್ರಮದ ಬಗ್ಗೆ ಏನು ಮಾಡಬೇಕೆಂದು ಉಲ್ಲೇಖಿಸಿದ್ದಾರೆ. ಯಾರು ಆಶ್ರಮವನ್ನು ನೋಡಿಕೊಳ್ಳುತ್ತಾರೆ ಎಂದು ವಿಲ್ನಲ್ಲಿ ಬರೆಯಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಆನಂದ್ ಗಿರಿ ಮತ್ತು ಇತರ ಶಿಷ್ಯರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ.
ಮಹಾಂತ್ ನರೇಂದ್ರ ಗಿರಿ ಅನೇಕ ಕಾರಣಗಳಿಗಾಗಿ ಅಸಮಾಧಾನಗೊಂಡಿದ್ದರಿಂದಾಗಿಯೇ ಅವರು ತಮ್ಮ ಜೀವನವನ್ನು ಕೊನೆಗೊಳಿದ್ದಾರೆ ಎಂದು ಡೆತ್ನೋಟ್ ಹೇಳುತ್ತದೆ. ಪತ್ರದಲ್ಲಿ ಹೆಮ್ಮೆಯಿಂದ ಬದುಕಿದ್ದೇನೆ ಮತ್ತು ಹೆಮ್ಮೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಅವರು ಬರೆದಿದ್ದಾರೆ. ಆತ್ಮಹತ್ಯೆ ನೋಟ್ 7-8 ಪುಟಗಳಷ್ಟು ಉದ್ದವಾಗಿದೆ.
ಏತನ್ಮಧ್ಯೆ, ನರೇಂದ್ರ ಮಹಾರಾಜ್ ಗಿರಿ ಶಿಷ್ಯ ಆನಂದ್ ಗಿರಿ ಮಾತನಾಡಿದ್ದು, "ಮಹಾಂತ್ ನರೇಂದ್ರ ಗಿರಿ ಗುರೂಜಿ ಆತ್ಮಹತ್ಯೆ ಮಾಡಿಕೊಳ್ಳಲಾರರು, ಹಣದ ಕಾರಣದಿಂದ ಅವರನ್ನು ಹಿಂಸಿಸಲಾಗಿದೆ. ಇದು ನನ್ನ ವಿರುದ್ಧದ ದೊಡ್ಡ ಪಿತೂರಿ. ಪಕ್ಷಪಾತವಿಲ್ಲದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
"ಪೊಲೀಸ್ ಅಧಿಕಾರಿಗಳು, ಭೂ ಮಾಫಿಯಾ ಈ ಪಿತೂರಿಯಲ್ಲಿ ಭಾಗಿಯಾಗಿದೆ. ತನಿಖೆಯಲ್ಲಿ ನಾನು ಪೊಲೀಸರಿಗೆ ಸಹಕರಿಸುತ್ತೇನೆ. ಗುರೂಜಿ ನನ್ನ ವಿರುದ್ಧ ಕೆರಳಿದ್ದರು. ನಾನು ತಪ್ಪಿತಸ್ಥನಾಗಿದ್ದರೆ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧ. ನಾನು 15 ದಿನಗಳ ಹಿಂದೆ ಗುರುಜಿಯೊಂದಿಗೆ ಮಾತನಾಡಿದ್ದೆ,'' ಎಂದು ಆನಂದ್ ಗಿರಿ ಹೇಳಿದ್ದು, ಐಜಿ ಕೆಪಿ ಸಿಂಗ್ ವಿರುದ್ಧವೂ ತನಿಖೆಗೆ ಆಗ್ರಹಿಸಿದ್ದಾರೆ.
ಮಹಾಂತ್ ನರೇಂದ್ರ ಗಿರಿ ಗುರೂಜಿಗೆ 72 ವರ್ಷ ವಯಸ್ಸಾಗಿತ್ತು ಮತ್ತು ಏಪ್ರಿಲ್ನಲ್ಲಿ ಕೋವಿಡ್- 19 ಸೋಂಕಿಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ತನ್ನ ಆಶ್ರಮದೊಳಗೆ ತನ್ನನ್ನು ಐಸೋಲೇಟ್ ಆಗಿದ್ದರು.
ಪ್ರಧಾನಿ
ನರೇಂದ್ರ
ಮೋದಿ
ಸಂತಾಪ
ಮಹಾಂತ್
ನರೇಂದ್ರ
ಗಿರಿ
ಸಾವಿಗೆ
ಪ್ರಧಾನಿ
ನರೇಂದ್ರ
ಮೋದಿ
ಸಂತಾಪ
ಸೂಚಿಸಿದ್ದು,
ಅಖಾಡ
ಪರಿಷತ್ತಿನ
ಅಧ್ಯಕ್ಷರಾದ
ಶ್ರೀ
ನರೇಂದ್ರ
ಗಿರಿ
ಸಾವು
ಅತ್ಯಂತ
ದುಃಖಕರವಾಗಿದೆ.
ಆಧ್ಯಾತ್ಮಿಕ
ಸಂಪ್ರದಾಯಗಳಿಗೆ
ಸಮರ್ಪಿತರಾಗಿದ್ದಾಗ,
ಅವರು
ಸಂತ
ಸಮಾಜದ
ಅನೇಕ
ಸ್ಟ್ರೀಮ್ಗಳನ್ನು
ಒಟ್ಟಿಗೆ
ಸಂಪರ್ಕಿಸುವಲ್ಲಿ
ದೊಡ್ಡ
ಪಾತ್ರ
ವಹಿಸಿದ್ದರು
ಎಂದು
ಪ್ರಧಾನಿ
ಟ್ವೀಟ್
ಮೂಲಕ
ಸಂತಾಪ
ವ್ಯಕ್ತಪಡಿಸಿದ್ದಾರೆ.
ಇನ್ನು ನರೇಂದ್ರ ಗಿರಿ ಮಹಾರಾಜ್ ಸಾವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ನರೇಂದ್ರ ಗಿರಿ ಜಿ ಸಾವು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದುಃಖಿತ ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅದೇ ರೀತಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ನರೇಂದ್ರ ಗಿರಿ ಮಹಾರಾಜ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಅಖಿಲ ಭಾರತ ಅಖಾಡ ಪರಿಷತ್ ಅಧ್ಯಕ್ಷ ಪೂಜ್ಯ ನರೇಂದ್ರ ಗಿರಿ ಜೀ ನಿಧನರಾಗಿದ್ದು, ಇದು ತುಂಬಲಾರದ ನಷ್ಟವಾಗಿದೆ. ದೇವರು ಅವರ ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಸದ್ಗುಣವುಳ್ಳ ಆತ್ಮಕ್ಕೆ ಶಾಂತಿ ಮತ್ತು ಶಕ್ತಿಯನ್ನು ನೀಡಲಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
COOJ
Mental
Health
Foundation
(COOJ)-
0832-2252525,
ಪರಿವರ್ತನ್-
+91
7676
602
602,
Connecting
Trust-
+91
992
200
1122/+91-992
200
4305
or
Sahai-
080-25497777/
[email protected]