ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಯೋಗಿ

|
Google Oneindia Kannada News

ಲಕ್ನೋ, ಮಾರ್ಚ್ 28: ಚುನಾವಣೆ ಸಂದರ್ಭದಲ್ಲಿ ಭರಪೂರ ಆಶ್ವಾಸನೆ, ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ತಂತ್ರ ಹೊಸದೇನಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ರಾಜ್ಯದ 16 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

7ನೇ ವೇತನ ಆಯೋಗದ ಅನ್ವಯ ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದ್ದು, ಶೇ 3ರಿಂದ ಶೇ12ಕ್ಕೇರಿಸಲಾಗಿದೆ. ಜನವರಿ 01, 2019ರಿಂದ ಫೆಬ್ರವರಿ 28, 2019ರ ಅವಧಿಯ ಬಾಕಿ ಮೊತ್ತವನ್ನು ಸರ್ಕಾರ ಪಾವತಿಸುತ್ತಿದೆ.

ತುಟ್ಟಿಭತ್ಯೆ ಹೆಚ್ಚಳದ ನಂತರ ಸರ್ಕಾರಿ ನೌಕರರ ನಿರೀಕ್ಷೆಯೇನು?ತುಟ್ಟಿಭತ್ಯೆ ಹೆಚ್ಚಳದ ನಂತರ ಸರ್ಕಾರಿ ನೌಕರರ ನಿರೀಕ್ಷೆಯೇನು?

ಏಪ್ರಿಲ್ ತಿಂಗಳ ಸಂಬಳದ ಜೊತೆಗೆ ಮಾರ್ಚ್ ತಿಂಗಳ ಅವಧಿಯ ಡಿಎ ಕೂಡಾ ಸಿಗಲಿದೆ. ಜನವರಿ 01, 2019ರಿಂದ ಪೂರ್ವನ್ವಯವಾಗುವಂತೆ ಡಿಎ ಹಾಗೂ ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಬಾಕಿ ಮೊತ್ತವೂ ಸಿಗಲಿದೆ.

7th Pay Commission: Higher education benefit, big hike in DA for 16 lakh employees

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ಗೆ ತುಟ್ಟಿಭತ್ಯೆಯ ಶೇ 10ರಷ್ಟು ಭಾಗ ಸೇರಲಿದೆ. ಉದ್ಯೋಗಿಗಳ ಇತರೆ ಪಿಂಚಣಿ ಖಾತೆಗಳಿಗೆ ರಾಜ್ಯ ಸರ್ಕಾರದಿಂದ ಮೊತ್ತ ಸೇರ್ಪಡೆಯಾಗಲಿದೆ.

ಸರ್ಕಾರಿ ನೌಕರರ ನಿರೀಕ್ಷೆ ಹುಸಿಗೊಳಿಸಿದ ನರೇಂದ್ರ ಮೋದಿ ಸರ್ಕಾರಸರ್ಕಾರಿ ನೌಕರರ ನಿರೀಕ್ಷೆ ಹುಸಿಗೊಳಿಸಿದ ನರೇಂದ್ರ ಮೋದಿ ಸರ್ಕಾರ

ಹೋಳಿ ಹಬ್ಬದ ಕೊಡುಗೆಯಾಗಿ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ 2,000 ರು ನಿಂದ 10,000 ರು ಹೆಚ್ಚಳವಾಗಿ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಉನ್ನತ ಪದವಿ ಗಳಿಸಿದ 6 ತಿಂಗಳೊಳಗೆ ಭತ್ಯೆ ಸಿಗಲಿದೆ.

English summary
There has been a major announcement on the 7th Pay Commission for nearly 16 lakh employees. The CG employee could claim the incentive within six months from the date, he or she acquires the higher degree. The order was issued under the 7th Pay Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X