ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನ

|
Google Oneindia Kannada News

ಲಕ್ನೋ, ನವೆಂಬರ್ 20: ಉತ್ತರ ಪ್ರದೇಶ ಮಥುರಾ ಜಿಲ್ಲೆಯಲ್ಲಿ ಕಸ ಸುಟ್ಟಿದ್ದಕ್ಕಾಗಿ 16 ರೈತರನ್ನು ಬಂಧಿಸಲಾಗಿದ್ದು, ಕರ್ತವ್ಯ ಮರೆತ ಇಬ್ಬರು ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಸರ್ವಜ್ಞ ರಾಮ್ ಮಿಶ್ರಾ ಅವರು ಕಸ ಸುಟ್ಟ ತಪ್ಪಿತಸ್ಥ ರೈತರಿಗೆ ಒಟ್ಟು 13.05 ಲಕ್ಷ ರೂಪಾಯಿಗಳನ್ನು ತಹಶೀಲ್ದಾರ್ ಮೂಲಕ ದಂಡ ವಿಧಿಸಿದ್ದಾರೆ.

8 ರೂಪಾಯಿಗೆ ಒಂದು ಕೆಜಿ ಈರುಳ್ಳಿ: ಕಣ್ಣೀರು ಒರೆಸಲು ಸರ್ಕಾರವೇ ಇಲ್ಲ8 ರೂಪಾಯಿಗೆ ಒಂದು ಕೆಜಿ ಈರುಳ್ಳಿ: ಕಣ್ಣೀರು ಒರೆಸಲು ಸರ್ಕಾರವೇ ಇಲ್ಲ

ಉತ್ತರ ಪ್ರದೇಶದಲ್ಲಿ 300 ಕಡೆ ಕಸ ಸುಡುವ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ, ರೈತರು ತಮ್ಮ ಬೆಳೆಯ ಅವಶೇಷಗಳನ್ನು ಸುಡುವುದನ್ನು ತಡೆಯಲು ವಿಫಲರಾದ ಕಾರಣ ಇಬ್ಬರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತೀಳಿಸಿದರು. ಕಸ ಸುಡುವುದನ್ನು ತಡೆಗಟ್ಟಲು ರೈತರಿಗೆ ಸಂಪೂರ್ಣ ಅವಕಾಶ ನೀಡಿದ್ದು, ಕಸ ಸುಟ್ಟವರು ಕಂಡುಬಂದಲ್ಲಿ ಅವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

16 Farmers Arrested In Mathura For Stubble Burning

ಈರುಳ್ಳಿ ಬೆಳೆದ ರೈತನ ಕಣ್ಣಲ್ಲೇ ನೀರು; ಕಾರಣ ಏನು?ಈರುಳ್ಳಿ ಬೆಳೆದ ರೈತನ ಕಣ್ಣಲ್ಲೇ ನೀರು; ಕಾರಣ ಏನು?

ಕಿಸಾನ್ ಪಾಠಶಾಲಾಗಳ ಮೂಲಕ ಕಸ-ಕಡ್ಡಿ ಸುಡುವಿಕೆಯ ಅಪಾಯಕಾರಿ ಪರಿಣಾಮಗಳ ಬಗ್ಗೆ ಮತ್ತು ಅವುಗಳ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ತಿಳಿಸಲಾಗಿದೆ. ಈ ಕಿಸಾನ್ ಪಾಠಶಾಲಾಗಳು ಕಸ ಸುಡುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಳೆದ ವರ್ಷ ಉಪಗ್ರಹ ಚಿತ್ರಗಳನ್ನು ಬಳಸಿ 1,046 ಕಸ ಸುಡುವ ಪ್ರಕರಣಗಳನ್ನು ಗುರುತಿಸಿದ್ದೇವು, ಈ ವರ್ಷದಲ್ಲಿ 459 ಪ್ರಕರಣಗಳಿಗೆ ಇಳಿದಿದೆ ಎಂದರು.

English summary
Sixteen farmers have been arrested for allegedly burning stubble, while two revenue officials suspended for dereliction of duty in Uttar Pradesh's Mathura district, officials said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X