ಸಾಲ ಮರುಪಾವತಿಗೂ, ಹಸ್ತಾಂತರ ಪ್ರಕರಣಕ್ಕೂ ಸಂಬಂಧವಿಲ್ಲ : ಮಲ್ಯ
ಲಂಡನ್, ಡಿಸೆಂಬರ್ 10: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಸಾಲದ ಅಸಲು ತೀರಿಸಲು ಸಿದ್ಧ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
'ನಾನು ಒಂದೇ ಒಂದು ರೂಪಾಯಿ ಹಣವನ್ನೂ ಸಾಲ ಪಡೆದಿಲ್ಲ. ಸಾಲ ಪಡೆದಿದ್ದು ಕಿಂಗ್ ಫಿಶರ್ ಏರ್ ಲೈನ್ಸ್. ಉದ್ಯಮದ ವೈಫಲ್ಯದಿಂದಾಗಿ ನಷ್ಟವಾಗಿದೆ. ನಾನೊಬ್ಬ ಗ್ಯಾರಂಟರ್ ಆಗಿರುವ ನನ್ನನ್ನು ಬಂಧಿಸಿದ್ದು ಸರಿಯಲ್ಲ, ನನ್ನನ್ನು ಹಣ ಕದ್ದು ಓಡಿ ಹೋದವನಂತೆ ಬಿಂಬಿಸುವುದು ಬೇಡ" ಎಂದು ವಿಜಯ ಮಲ್ಯ ಹೇಳಿದ್ದಾರೆ.
ಕಿಂಗ್ ಫಿಷರ್ To ಲಂಡನ್: ಮಲ್ಯ ಪ್ರಕರಣ ನಡೆದು ಬಂದ ಹಾದಿ
'ಸಾಲ
ಮರುಪಾವತಿಗೂ,
ಹಸ್ತಾಂತರ
ಪ್ರಕರಣಕ್ಕೂ
ಯಾವುದೇ
ಸಂಬಂಧವಿಲ್ಲ
ಎಂದು
ಕೋರ್ಟ್
ಪ್ರವೇಶಿಸುವುದಕ್ಕೂ
ಮುನ್ನ
ಹೇಳಿದ್ದಾರೆ.
ಮಲ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಹಸ್ತಾಂತರ ಮಾಡುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಲಂಡನ್ ನ್ಯಾಯಾಲಯವನ್ನು ಕೋರಿವೆ.
Vijay Mallya in London, the UK: I have filed a comprehensive settlement application before the Karnataka High Court, which is also being heard today. pic.twitter.com/EE2CGVKHi7
— ANI (@ANI) December 10, 2018
ಆರ್ಥಿಕ ಅಪರಾಧಿ ಟ್ಯಾಗ್ : ಸುಪ್ರೀಂನಿಂದ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್
ಆದರೆ, ಭಾರತದ ಜೈಲುಗಳ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಮುಂಬೈ ಜೈಲಿನಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ ಎಂದು ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
Vijay Mallya in London when asked 'how genuine is his offer of settlement': There is nothing genuine or ingenuine. Please understand that the offer has been made in a court of law. Nobody disrespects a court of law. pic.twitter.com/jRs7DNtlSB
— ANI (@ANI) December 10, 2018
ಸಾಲದ ಅಸಲು ಶೇ 100ರಷ್ಟನ್ನು ಬ್ಯಾಂಕ್ ಗಳಿಗೆ ವಾಪಸ್ ಮಾಡ್ತೀನಿ: ಮಲ್ಯ
ಮುಂಬೈನಲ್ಲಿರುವ ಆರ್ಥರ್ ರಸ್ತೆಯ ಜೈಲು ಸುಸಜ್ಜಿತವಾಗಿದೆ ಎಂಬುದನ್ನು ತೋರಿಸುವ ವಿಡಿಯೋವನ್ನು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ನೀಡಿದ್ದವು.
ಮದ್ಯ ದೊರೆ, ಆರ್ಥಿಕ ಅಪರಾಧಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆ ಲಂಡನ್ನಿನ ನ್ಯಾಯಾಲಯದಲ್ಲಿ ಸೋಮವಾರ ತೀರ್ಪು ಹೊರಬೀಳಲಿದೆ.