ಕೊಪ್ಪಳದಲ್ಲಿ ಲೇಡಿಸ್ ಹಾಸ್ಟೆಲ್ ಗೆ ನುಗ್ಗಿ ಪುಂಡರ ಅಟ್ಟಹಾಸ
ಕೊಪ್ಪಳ, ಸೆಪ್ಟೆಂಬರ್ 12: ಮಹಿಳೆ ವಸತಿ ನಿಲಯದಲ್ಲಿ ಕಿಡಿಗೇಟಿಗಳ ಉಪಟಳ ಹೆಚ್ಚಾಗಿದೆ ಸೂಕ್ತ ಭದ್ರತೆ ನೀಡಬೇಕು ಎಂದು ಕೊಪ್ಪಳ ಗಣೇಶ ನಗರದಲ್ಲಿರುವ ಮಹಿಳಾ ನಿಲಯದ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ಶಿವಭಾಗ್ ಹೋಟೆಲ್ ಮೇಲೆ ಕಲ್ಲು ತೂರಾಟ: ಕಾಂಗ್ರೆಸ್ ಮುಖಂಡನ ಬಂಧನ
ಇತ್ತೀಚಿನ ದಿನಗಳಲ್ಲಿ ಮಹಿಳಾ ಕಾಲೇಜುಗಳು ಹಾಗೂ ಮಹಿಳಾ ವಿದ್ಯಾರ್ಥಿನಿಲಯಗಳಲ್ಲಿರುವ ವಿದ್ಯಾರ್ಥಿನಿಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ರಾಜ್ಯಾದ್ಯಂತ ಇರುವ ಬಹುತೇಕ ನಿಯಯಗಳಲ್ಲಿ ಇಂಥಹ ತೊಂದರೆ ಅನುಭವಿಸುತ್ತಿದ್ದಾರೆ.
ನಾಗೂನ್ ಸಾಮೂಹಿಕ ಅತ್ಯಾಚಾರ: ಪ್ರಮುಖ ಆರೋಪಿಗೆ ಗಲ್ಲು
ಹಿಂದುಳಿದ ವರ್ಗದ ಮಹಿಳಾ ವಸತಿ ನಿಲಯ ಇದಾಗಿದ್ದು ರಾತ್ರಿ ವೇಳೆ ವಸತಿ ನಿಲಯದ ಕಿಟಕಿ ಬಳಿ ಬಂದು ಕಿಡಿಗೇಡಿಗಳು ಬಂದು ಕಾಟ ಕೊಡುತ್ತಿದ್ದಾರೆ, ಅಷ್ಟೇ ರಾತ್ರಿ ಹೊತ್ತು ಕಿಟಕಿ ಬಳಿ ಬಂದು ಸದ್ದು ಮಾಡುವುದು, ವಿಚಿತ್ರ ರೀತಿಯಲ್ಲಿ ಕೂಗುವುದು, ಹೆಸರುಗಳನ್ನು ಕರೆಯುವುದೂ ಸೇರಿದಂತೆ ವಿವಿಧ ರೀತಿಯಲ್ಲಿ ಹಿಂಸೆ ನೀಡುತ್ತಿದ್ದಾರೆ.
ಅವರು ಯಾರ ಎಂದು ಕಂಡುಹಿಡಿಯೋಣವೆದರೆ ಮಂಕಿ ಕ್ಯಾಪ್ ಧರಿಸಿ ಬಂದು ಕಾಟ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಇವರುಗಳ ಕಾಟಕ್ಕೆ ಆತಂಕಗೊಂಡ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ಸೂಕ್ತ ಭದ್ರತೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ, ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.