ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಇಕ್ಬಾಲ್ ಅನ್ಸಾರಿ
Recommended Video
ಕೊಪ್ಪಳ, ಆಗಸ್ಟ್.28: ನಿಜವಾದ ಪಾಕಿಸ್ತಾನಿಗಳು ಬಿಜೆಪಿಗರೇ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿರುವ ಅನ್ಸಾರಿ ಹಿಂದುಗಳು, ಮುಸ್ಲೀಮರು ದೇಶದ್ರೋಹಿಗಳಲ್ಲ. ಬಿಜೆಪಿಗರೇ ದೇಶದ್ರೋಹಿಗಳು. ಅವರೇ ಪಾಕಿಸ್ತಾನಿಗಳು. ನಾವು ನಿಜವಾದ ಭಾರತೀಯರು.
ಭಾರತಕ್ಕಾಗಿ ನಾವು ತಲೆ ತಗ್ಗಿಸಿ ರುಂಡ ಕತ್ತರಿಸಿಲು ಸಿದ್ದರಿದ್ದೇವೆ. ಇವತ್ತು ನನಗೆ ಬಹಳ ನಾಚಿಕೆಯಾಗುತ್ತಿದೆ. ಅನ್ಸಾರಿ ಗೆಲ್ಲಿಸಿದ್ರೆ ಪಾಕಿಸ್ತಾನ ಮಾಡ್ತಾರೆಂದು ಟೀಕಿಸುತ್ತಾರೆ. ನನಗೇನು ಬೇರೆ ಕೆಲಸವಿಲ್ಲವೇ.
ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ವಿಪ್ಲವ್ ದೇವ್
ಅವರಿಗೆ ಮಾನ ಮರ್ಯಾದೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ. ಪರಣ್ಣ ಮುನವಳ್ಳಿ ಬೆಳಗ್ಗೆ ಐದು ಘಂಟೆಯಿಂದ ಲಂಚ ತಗೆದುಕೊಳ್ತಾನೆ. ಇಂತಹವರನ್ನು ನಮ್ಮ ಗಂಗಾವತಿ ಜನ ಗೆಲ್ಲಿಸುತ್ತಾರೆ. ಅವನು ಪರಿಹಾರ ಹಣದಲ್ಲೂ ಪರ್ಸೆಂಟೇಜ್ ತಗೆದುಕೊಳ್ತಾನೆಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರಸಭೆ ಚುನಾವಣೆ ಪ್ರಚಾರದ ವೇಳೆ ಶಾಸಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ ಅನ್ಸಾರಿ, ಈಗ ಶಾಸಕ ಆಗಿರುವವನು ಜನರಿಗೆ ಖೋಟಾ ನೋಟು ಕೊಟ್ಟು ವೋಟ್ ಹಾಕಿಸಿಕೊಂಡಿದ್ದಾನೆ.
ಖೋಟಾ ನೋಟು ದಂಧೆಯಲ್ಲಿ ಸ್ವತಃ ಶಾಸಕನೇ ಭಾಗಿಯಾಗಿದ್ದಾನೆ. ಎಸ್ಪಿ ಮಹಾಶಯ ಡಾ.ಅನೂಪ್ ಶೆಟ್ಟಿ ಶಾಸಕನನ್ನು ಬಚಾವ್ ಮಾಡಿದ್ದಾನೆ. ಎಸ್ಪಿ ಆರ್.ಎಸ್.ಎಸ್. ನವನು, ಅವನು ಸಣ್ಣ- ಪುಟ್ಟದವರನ್ನೂ ಒಳಗೆ ಹಾಕಿದ್ದಾನೆ.
ಇಂಥ ಪೊಲೀಸ್ ಗಿರಿ ಮಾಡುವ ಪೊಲೀಸ್ ರಿಗೆ ನಾನು ಹೆದರುವುದಿಲ್ಲ. ಶಾಸಕ ಪರಣ್ಣನನ್ನು ಆ ಎಸ್ಪಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಆತನ ಹಿಂಬಾಲಕರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.