ಮಮತಾ ಬ್ಯಾನರ್ಜಿ rally ಮೇಲೆ ಘಟಾನುಘಟಿಗಳ ಕಣ್ಣು!
ಕೋಲ್ಕತ್ತಾ, ಜನವರಿ 07: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಮುಖಂಡೆ ಮಮತಾ ಬ್ಯಾನರ್ಜಜಿ ಜನವರಿ 19 ರಂದು ನಡೆಸಲಿರುವ ಬೃಹತ್ rally ಯ ಮೇಲೆ ಸದ್ಯಕ್ಕೆ ದೇಶದ ಘಟಾನುಘಟಿ ನಾಯಕರ ಕಣ್ಣು ನೆಟ್ಟಿದೆ.
ಪ್ರಮಾಣ ವಚನಕ್ಕೆ ಈ ಮೂರು ಘಟಾನುಘಟಿಗಳು ಗೈರು, ಯಾಕೆ?
ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ನಿರ್ಮಾಣವಾಗುವ ಸೂಚನೆ ಸಿಗುತ್ತಿರುವ ಹೊತ್ತಲ್ಲಿ ಮಮತಾ ನಡೆಸುತ್ತಿರುವ rallyಯಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.
ಬಂಗಾಳದಲ್ಲಿ ರಥಯಾತ್ರೆ ಆದೇಶಕ್ಕೆ ತಡೆ: ಬಿಜೆಪಿಗೆ ಹಿನ್ನಡೆ
ಈ rally ಯಿಂದ ಮಹಾಘಟಬಂಧನದ ಸ್ಪಷ್ಟ ರೂಪ ತಿಳಿದುಬರುವ ಸಾಧ್ಯತೆ ಇದೆ. ಆದರೆ ಈ rally ಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಹೊರಗಿಟ್ಟು ಸಂಯುಕ್ತ ಕೂಟ ರಚಿಸಲು ಮುಂದಾಗಿದ್ದ ಕೆಸಿಆರ್ ಈ rally ಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದು ಅಚ್ಚರಿ ಮೂಡಿಸಿದೆ.
ಮಮತಾಗೆ ಪ್ರಧಾನಿ ಆಗುವ ಅವಕಾಶಗಳಿವೆ ಎಂದ ಬಿಜೆಪಿ ನಾಯಕ
ಕೋಲ್ಕತ್ತಾದಲ್ಲಿ ನಡೆಯುವ ಈ rally ಯಲ್ಲಿ ಕಾಂಗ್ರೆಸ್ ಭಾಗವಹಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಹೊರಗಿಟ್ಟು ಮೈತ್ರಿಕೂಟ ರಚಿಸಿರುವ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಈ rallyಯಲ್ಲಿ ಭಾಗವಹಿಸಿದರೆ ತಾವು ಭಾಗವಹಿಸದೇ ಇರಲು ನಿರ್ಧರಿಸಿದರೆ ಅಚ್ಚರಿಯಿಲ್ಲ.