ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ವಿವಾದಕ್ಕೆ ಮುನ್ನುಡಿ ಬರೆದ ದೀದಿ, ಅಲ್ಪಸಂಖ್ಯಾತ ಶಾಲೆಗೆ ಭೋಜನಾಲಯ

|
Google Oneindia Kannada News

ಕೋಲ್ಕತ್ತಾ, ಜೂನ್ 28: ಒಂದಿಲ್ಲೊಂದು ವಿವಾದಾತ್ಮಕ ನಡೆಯ ಮೂಲಕವೇ ಸುದ್ದಿಯಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೊಸ ವಿವಾದವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಶೇ.70 ಕ್ಕೂ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಭೋಜನಾಲಯವನ್ನು ನಿರ್ಮಿಸುವ ಕೆಲಸಕ್ಕೆ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ.

ಹೆಚ್ಚುತ್ತಿರುವ ಬಿಜೆಪಿ ಪ್ರಾಬಲ್ಯ: ಕಾಂಗ್ರೆಸ್, ಎಡಪಕ್ಷದ ಕಡೆ ಮಮತಾ ಸ್ನೇಹ 'ಹಸ್ತ'ಹೆಚ್ಚುತ್ತಿರುವ ಬಿಜೆಪಿ ಪ್ರಾಬಲ್ಯ: ಕಾಂಗ್ರೆಸ್, ಎಡಪಕ್ಷದ ಕಡೆ ಮಮತಾ ಸ್ನೇಹ 'ಹಸ್ತ'

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಣವನ್ನು ಆ ಕಾರಣಕ್ಕಾಗಿ ವಿನಿಯೋಗಿಸಲಾಗುವುದು, ಅಲ್ಪಸಂಖ್ಯಾತ ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಭೋಜನಾಲಯದ ವ್ಯವಸ್ಥೆ ಮಾಡಲಾಗುವುದು. ಇದು ವಿದ್ಯಾರ್ಥಿಗಳನ್ನು ಬೇರೆ ಮಾಡಲು ತೆಗೆದುಕೊಂಡ ನಿರ್ಧಾರವಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

West Bengal Government controversial move: dining hall in schools of minority children

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ದಿಲೀಪ್ ಘೋಷ್, ಈ ತಾರತಮ್ಯವೇಕೆ? ಭೋಜನಾಲಯ ಕಟ್ಟುವುದಾದರೆ ಕಟ್ಟಲಿ. ಆದರೆ ಈ ಕೇವಲ ಅಲ್ಪಸಂಖ್ಯಾತರು ಹೆಚ್ಚಿರುವ ಶಾಲೆಗಳಿಗೆ ಮಾತ್ರವೇಕೆ? ವಿದ್ಯಾರ್ಥಿಗಗಳನ್ನೂ ಧರ್ಮದ ಹೆಸರಿನಲ್ಲಿ ಒಡೆವ ಕೆಲಸ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

English summary
In a controversial move, West Bengal Government seeks names of Government and aided schools having more than 70% minority students, to send a proposal for the construction of dining hall for mid-day meal in schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X