ಪಶ್ಚಿಮ ಬಂಗಾಳ ಚುನಾವಣೆಗೆ ಕಾಂಗ್ರೆಸ್ ನಿಂದ ಸಮಿತಿ ರಚನೆ
ಕೋಲ್ಕತ್ತಾ,
ಜನವರಿ
05:
ಮುಂಬರುವ
ವಿಧಾನ
ಸಭೆ
ಚುನಾವಣೆಗೆ
ಪಶ್ಚಿಮ
ಬಂಗಾಳ
ಅಣಿಯಾಗುತ್ತಿದ್ದು,
ಸೀಟು
ಹಂಚಿಕೆ
ಹಾಗೂ
ಜಂಟಿ
ಕಾರ್ಯಕ್ರಮಗಳಿಗೆ
ಸಂಬಂಧಿಸಿದಂತೆ
ಎಡ
ಪಕ್ಷಗಳೊಂದಿಗೆ
ಮಾತುಕತೆ
ನಡೆಸಲು
ಪಕ್ಷದ
ಹಿರಿಯ
ಮುಖಂಡ
ಅಧೀರ್
ರಂಜನ್
ಚೌಧರಿ
ನೇತೃತ್ವದಲ್ಲಿ
ಕಾಂಗ್ರೆಸ್
ಸಮಿತಿ
ರಚಿಸಿದೆ.
ಕಳೆದ ತಿಂಗಳಷ್ಟೆ ಎಡಪಕ್ಷಗಳ ಜೊತೆ ಚುನಾವಣಾ ಮೈತ್ರಿ ಹೊಂದುವುದಾಗಿ ಕಾಂಗ್ರೆಸ್ ಅಧೀಕೃತವಾಗಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಲಾಗುತ್ತಿದೆ.
ಪಶ್ಚಿಮ ಬಂಗಾಳ ಚುನಾವಣೆಗಾಗಿ ಕಾಂಗ್ರೆಸ್ ಎಡಪಕ್ಷ ಮೈತ್ರಿ
ಕಾಂಗ್ರೆಸ್ ರಾಜ್ಯಾಧ್ಯಕ್ಷ ಚೌಧರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಬ್ದುಲ್ ಮನ್ನನ್, ರಾಜ್ಯ ಮಾಜಿ ಮುಖ್ಯಸ್ಥ ಪ್ರದೀಪ್ ಭಟ್ಟಾಚಾರ್ಯ ಹಾಗೂ ನೇಪಾಳ ಮಹತೋ ಈ ಸಮಿತಿಯಲ್ಲಿರಲಿದ್ದಾರೆ.
"ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸೀಟು ಹಂಚಿಕೆ ಹಾಗೂ ಜಂಟಿ ಚುನಾವಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸಮಿತಿ ರಚಿಸಲಾಗಿದೆ" ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಜಿತಿನ್ ಪ್ರಸಾದ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಈ ಮುನ್ನ ಎಡಪಕ್ಷದ ಜೊತೆ ಮೈತ್ರಿಗೆ ಶಿಫಾರಸ್ಸು ಮಾಡಿತ್ತು. ಎಡಪಕ್ಷವೂ ಕಾಂಗ್ರೆಸ್ ಜೊತೆ ಮೈತ್ರಿ ಅಪೇಕ್ಷಿಸಿತ್ತು. ಎಡಪಕ್ಷ ಹಾಗೂ ಕಾಂಗ್ರೆಸ್ ಪಶ್ಚಿಮ ಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿರಲಿಲ್ಲ. ಕೇರಳದಲ್ಲಿ ಈ ಎರಡೂ ಪಕ್ಷಗಳು ವಿರುದ್ಧವಾಗಿವೆ.
ಇದೀಗ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಸಾಧಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದೇ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳ ಚುನಾವಣೆ ವಿಧಾನ ಸಭಾ ನಡೆಯಲಿದೆ.