ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!
Recommended Video
ಕೋಲ್ಕತ್ತಾ, ಜೂನ್ 03: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ವಿವಾದದಿಂದ ಸುದ್ದಿಯಾಗಿದ್ದಾರೆ.
ಮಮತಾ ಬ್ಯಾನರ್ಜಿಗೆ ಗಂಡಾಂತರದ ಕಾಲ: ಜ್ಯೋತಿಷಿ ಅಮ್ಮಣ್ಣಾಯ ವಿಶ್ಲೇಷಣೆ
ಮೇ 30 ರಂದು ಪಶ್ಚಿಮ ಬಂಗಾಳದ ನೈಹತಿ ಎಂಬಲ್ಲಿಯ ಬಿಜೆಪಿ ಆಫೀಸಿಗೆ ನುಗ್ಗಿದ ಮಮತಾ ಬ್ಯಾನರ್ಜಿ , ಕಚೇರಿಯ ಬಾಗಿಲು ಮುರಿದು, ಕಚೇರಿಯ ಗೋಡೆಯ ಮೇಲೆ ತೃಣಮೂಲ ಕಾಂಗ್ರೆಸ್ ಚಿನ್ಹೆಯನ್ನು ಬರೆದು ಬಂದರು!
'ಜೈ ಶ್ರೀರಾಮ್'ಗೆ ಪ್ರತ್ಯುತ್ತರ: ಪ್ರೊಫೈಲ್ ಚಿತ್ರ ಬದಲಿಸಿದ ದೀದಿ!
"ಈ ಕಚೇರಿ ತೃಣಮೂಲ ಕಾಂಗ್ರೆಸ್ ನದ್ದೇ ಆಗಿದ್ದು, ಬಿಜೆಪಿ ಅದನ್ನು ವಶಕ್ಕೆ ಪಡೆದಿತ್ತು. ಆದ್ದರಿಂದ ಈಗ ನಮ್ಮ ಕಚೇರಿಯನ್ನು ನಾವೇ ವಾಪಸ್ ಪಡೆಯುತ್ತಿದ್ದೇವೆ" ಎಂದು ಟಿಎಂಸಿ ಮುಖಂಡರು ತಿಳಿಸಿದ್ದಾರೆ.
What's happening in #WestBengal? @AmitShah Sir, please do something about this street-side goon & criminal @MamataOfficial who is trying to break into #BJP office & take forced, illegal possession of the same. Save #Bengal, Save #Democracy, Save #Hindus https://t.co/YliQqra6Cm
— Nishi Goyal (@NishiGoyal) June 1, 2019
ಮೇ 30 ರಂದು ನಾರ್ಥ್ 24 ಪರ್ಗನಾಸ್ ಎಂಬ ಜಿಲ್ಲೆಯ ನೈಹತಿ ಎಂಬಲ್ಲಿದ್ದ ಬಿಜೆಪಿ ಕಚೇರಿಗೆ ತೆರಳಿದ ಮಮತಾ ಬ್ಯಾನರ್ಜಿ, ಅಲ್ಲಿನ ಕೇಸರಿ ಗೋಡೆಯ ಮೇಲೆ ತಮ್ಮ ಟಿಎಂಸಿ ಪಕ್ಷದ ಚಿನ್ಹೆಯನ್ನು ಬರೆದರು.
'ದೀದಿ' ಕೈ ಸೇರಲಿವೆ 'ಜೈ ಶ್ರೀರಾಮ್' ಒಕ್ಕಣೆಯ 10 ಲಕ್ಷ ಪತ್ರಗಳು!
ಈ ಘಟನೆಯ ನಂತರವೇ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡು ವಿವಾದ ಸೃಷ್ಟಿಸಿದ್ದರು.