100% ದೃಷ್ಟಿಹೀನ ಬಜೆಟ್; ತೃಣಮೂಲ ಕಾಂಗ್ರೆಸ್ ಟೀಕೆ
ನವದೆಹಲಿ, ಫೆಬ್ರುವರಿ 01: "ಇದು 100% ದೃಷ್ಟಿಹೀನ ಬಜೆಟ್. ಭಾರತವನ್ನು ಮಾರಾಟ ಮಾಡುವ ಪರಿಕಲ್ಪನೆಯಲ್ಲಿ ಈ ಬಜೆಟ್ ಮಂಡನೆ ಮಾಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಟೀಕೆ ಮಾಡಿದೆ.
ಕೇಂದ್ರ ಬಜೆಟ್ಗೆ ಬಂಗಾಳಿಗಳದ್ದೇ ಚಿಂತೆ; ನಿರ್ಮಲಾ ಸೀರೆಯಲ್ಲಿ ಅಡಗಿತ್ತಾ ಮರ್ಮ?
"ಭಾರತದ ಮೊದಲ ಕಾಗದರಹಿತ ಬಜೆಟ್ ಎಂಬುದು ಕೂಡ ದೃಷ್ಟಿರಹಿತ ಬಜೆಟ್. ಈ ನಕಲಿ ಬಜೆಟ್ ಉದ್ದೇಶವೇ ಭಾರತವನ್ನು ಮಾರಾಟ ಮಾಡುವುದು" ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೇರಕ್ ಒಬ್ರಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ.
ರೈಲ್ವೆ ಮಾರಾಟವಾಗಿದೆ, ವಿಮಾನ ನಿಲ್ದಾಣ ಮಾರಾಟವಾಗಿದೆ, ಬಂದರುಗಳನ್ನು ಮಾರಾಟ ಮಾಡಲಾಗಿದೆ. ವಿಮೆಗಳನ್ನು ಮಾರಾಟ ಮಾಡಲಾಗಿದೆ. ಈ ಬಾರಿ ಭಾರತವನ್ನು ಇನ್ನಷ್ಟು ಮಾರಾಟ ಮಾಡುವ ಯೋಜನೆ ಮಂಡಿಸಲಾಗಿದೆ ಎಂದು ದೂರಿದರು.
ಬಜೆಟ್ ನಲ್ಲಿ ಸಾಮಾನ್ಯ ಜನರನ್ನು ಹಾಗೂ ರೈತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಈ ಬಜೆಟ್ ಶ್ರೀಮಂತರನ್ನು ಶ್ರೀಮಂತರನ್ನಾಗಿಸುತ್ತದೆ. ಬಡವರನ್ನು ಬಡವರಾಗಿಯೇ ಉಳಿಸುತ್ತದೆ. ಮಧ್ಯಮ ವರ್ಗದವರಿಗೆ ಏನೂ ದೊರೆತಿಲ್ಲ ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳ ನಿನ್ನೆ ಮಾಡಿ ಬಿಟ್ಟಿದ್ದರ ಬಗ್ಗೆ ಇಂದು ಕೇಂದ್ರ ಸರ್ಕಾರ ಮಾತನಾಡುತ್ತಿದೆ. ಈ ಬಾರಿ ಬಜೆಟ್ 625 ಕಿಲೋ ಮೀಟರ್ ರಸ್ತೆ ಬಗ್ಗೆ ಭರವಸೆ ನೀಡಿದೆ. 2018-19ರ ಸಾಲಿನಲ್ಲಿ 5111 ಕಿ.ಮೀ ರಸ್ತೆ ಇತ್ತು. 2019-20ನೇ ಸಾಲಿನಲ್ಲಿ 1165 ಕಿ.ಮೀ ರಸ್ತೆ ನಿರ್ಮಿಸಲಾಗಿದೆ ಎಂದು ಟೀಕಿಸಿದರು.