ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲವಿಲ್ಲ!

|
Google Oneindia Kannada News

ಕೋಲ್ಕತಾ, ಡಿ .7: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ವಿರೋಧಿಸಿ ರೈತ ಸಮೂಹ ಕರೆ ನೀಡಿರುವ ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲ ವ್ಯಕ್ತಪಡಿಸಿಲ್ಲ. ರೈತರ ಪ್ರತಿಭಟನೆಗೆ ಹಕ್ಕೊತ್ತಾಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಆದರೆ, ಬಂದ್ ಆಚರಣೆ ಟಿಎಂಸಿ ಸಿದ್ಧಾಂತಕ್ಕೆ ವಿರೋಧವಾಗಿದೆ ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.

ಭಾರತ್ ಬಂದ್‌ಗೆ ಹತ್ತು ಹಲವು ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಪಂಜಾಬ್ ಹಾಗೂ ಹರ್ಯಾಣ ಮೂಲದ ರೈತರು ದೆಹಲಿ ಗಡಿ ಭಾಗದಲ್ಲಿ ನವೆಂಬರ್ 26ರಿಂದ ಪ್ರತಿಭಟನಾ ನಿರತರಾಗಿದ್ದಾರೆ. ಸರ್ಕಾರದ ಜೊತೆಗೆ ಸತತ ಮಾತುಕತೆ ವಿಫಲವಾಗಿದೆ.

ಡಿಸೆಂಬರ್ 8ಕ್ಕೆ ಭಾರತ ಬಂದ್: ನೀವು ತಿಳಿಯಬೇಕಾದ ಅಂಶಗಳುಡಿಸೆಂಬರ್ 8ಕ್ಕೆ ಭಾರತ ಬಂದ್: ನೀವು ತಿಳಿಯಬೇಕಾದ ಅಂಶಗಳು

ಕೇಂದ್ರ ಸರಕಾರ ರೈತರ ಹಾಗೂ ದೇಶ ವಿರೋಧಿ ಮತ್ತು ಕಾರ್ಪೋರೇಟ್ ಕಂಪನಿ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ಗಳನ್ನು ಬೇಷರತ್ತಾಗಿ ವಾಪಸ್ ಪಡೆಯುವಂತೆ ಒತ್ತಾಯಿಸಿ, ದೇಶದ 500 ಕ್ಕೂ ಹೆಚ್ಚು ರೈತ ಸಂಘಗಳು ಕಳೆದ ಹದಿನೈದು ದಿನಗಳಿಂದ ದೇಶದಾದ್ಯಂತ ರೈತರು ಹೋರಾಟ ನಡೆಸಿದ್ದಾರೆ.

Trinamool Congress not to support Bharat Bandh on Dec 08

ಆರ್ ಜೆಡಿ, ಎಡಪಕ್ಷಗಳು, ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು, ಟ್ರೇಡ್ ಯೂನಿಯನ್, ಬ್ಯಾಂಕ್ ಯೂನಿಯನ್ಸ್ ಬೆಂಬಲ ವ್ಯಕ್ತಪಡಿಸಿವೆ.

ಡಿಸೆಂಬರ್ 8ರ ಭಾರತ್ ಬಂದ್; ಏನಿರುತ್ತೆ, ಏನಿರಲ್ಲ?ಡಿಸೆಂಬರ್ 8ರ ಭಾರತ್ ಬಂದ್; ಏನಿರುತ್ತೆ, ಏನಿರಲ್ಲ?

"ನಮ್ಮ ಅಧಿನಾಯಕಿ ಸಿಎಂ ಮಮತಾ ಬ್ಯಾನರ್ಜಿ ಅವರು ರೈತರ ಸಂಘರ್ಷಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ವಿರೋಧಿ ವಿಧೇಯಕಗಳನ್ನು ಹಿಂಪಡೆದು, ಹೊಸ ಮಸೂದೆ ಮಂಡನೆ ಮಾಡಿ ಚರ್ಚೆ ಮಾಡಲಿ ಸ್ಥಾನಿಕ ಸಮಿತಿ ಅಥವಾ ಹೊಸ ಸಂಸದೀಯ ಸಮಿತಿ ಮುಂದೆ ಎಲ್ಲವೂ ಚರ್ಚೆಯಾಗಿ ಸಮತೋಲನವಾದ ವಿಧೇಯಕ ಹೊರಬರಲಿ'' ಎಂದು ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ್ ಹೇಳಿದರು.

English summary
The Trinamool Congress Party has said that it would not support the Bharat Bandh tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X